ಸಂಪುಟ ವಿಸ್ತರಣೆ ಕಸರತ್ತು ;ಬಿಜೆಪಿ ಸರ್ಕಾರಕ್ಕೆ ಕಾದಿದ್ಯಾ ಕುತ್ತು..?

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದಾವೋಸ್‍ಗೆ ಭೇಟಿ ನೀಡಿ ಇದೀಗ ರಾಜ್ಯಕ್ಕೆ ಇಂದು ಮತ್ತೆ ವಾಪಸ್ಸಾಗಲಿದ್ದಾರೆ. ಇನ್ನು ಹೈಕಮಾಂಡ್ ಮಹತ್ವದ ಸೂಚನೆಯನ್ನು ಬಿಎಸ್‍ವೈ ಗೆ ನೀಡಿದ್ದು ಇದೀಗ ಮಾಹಿತಿ ಹೊರ ಬಿದ್ದಿದೆ. ಸಂಪುಟ ವಿಸ್ತರಣೆ ಬಗ್ಗೆ ಹಲವು ಊಹಪೋಹಗಳಿದ್ದು;ಮತ್ತೆ ಚರ್ಚೆ ಆರಂಭವಾಗಿದೆ.

ಬಿಜೆಪಿಯಲ್ಲಿ ಈಗಾಗಲೇ 24 ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಿದ್ದಾರೆ . ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಜೆ.ಪಿ ನಡ್ಡಾ ವಹಸಿದ್ದು ;ಹೈಕಮಾಂಡ್ ನಿರ್ದೇಶನದಲ್ಲಿ ಮಾತ್ರ ಕೊಂಚ ವಿಭಿನ್ನತೆ ಇದೆ. ಕಾಂಗ್ರೆಸ್ ಮತ್ತೆ ಜೆಡಿಎಸ್‍ನಿಂದ ಬಂದು ಶಾಸಕರಾಗಿರುವವರ ಪೈಕಿಯಲ್ಲಿ 6 ಶಾಸಕರಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಲು ಸೂಚನೆ ನೀಡಿದ್ದು , ಉಳಿದಂತೆ ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ನೀಡಲು ತೀರ್ಮಾನಿಸಲಾಗಿದೆ.

Exit mobile version