ಸಿದ್ದು ಹೆಸರು ಹೇಳಿ ಯಡ್ಡಿಗೆ ಪಂಚ್ ಕೊಟ್ಟರಾ ಸಚಿವ ಈಶ್ವರಪ್ಪ..?

ಶಿವಮೊಗ್ಗ,ಸೆ.28; ನಿನ್ನೆಯಷ್ಟೇ ಕ್ರೀಡಾ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಸಚಿವ ಈಶ್ವರಪ್ಪನವರು ಈ ಬಗ್ಗೆ ಸಿಎಂ ಯಡಿಯೂರಪ್ಪನವರ ಮೇಲೆ ಬೇಸರಗೊಂಡಿದ್ರಾ..? ಖಾತೆ ಬದಲಾವಣೆಗೆ ಅವರಿಗೆ ಇರಿಸುಮುರುಸು ಉಂಟುಮಾಡಿತ್ತಾ..? ಈ ಎಲ್ಲ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿವೆ.. ಅದಕ್ಕೆ ಕಾರಣವಾಗಿದ್ದು, ಇಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪನವರು ನೀಡಿರುವ ಹೇಳಿಕೆ..

ಯಸ್.. ಒಂದು ಪಕ್ಷದ ಬೆಂಬಲವಿಲ್ಲದೆ ಯಾವ ರಾಜಕಾರಣಿಯೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸಂಘಟನೆ ಮೀರಿ ಪಕ್ಷ ಕಟ್ಟಲು ಮುಂದಾದರೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದಾಗಿ ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ. ಪಕ್ಷ ತೊರೆದು ಕುತಂತ್ರ ಬುದ್ಧಿಯಿಂದ ಹೊಸ ಸಾಮ್ರಾಜ್ಯ ಕಟ್ಟಲು ಮುಂದಾದ ಸಿದ್ದು, ಕಾಂಗ್ರೆಸ್ ನೆಲಕಚ್ಚುವಂತಾಗಲು ಕಾರಣರಾದರು..ಇತ್ತ ಹೊಸದಾಗಿ ಕೆಜೆಪಿ ಪಕ್ಷ ಕಟ್ಟಿದ್ದ ಯಡಿಯೂರಪ್ಪನವರು ಗಳಿಸಿದ್ದು ಮೂರು ಮತ್ತೊಂದು ಸೀಟು..ಅದಕ್ಕೇ ಹೇಳೋದು ಸಂಘಟನೆ ಮೀರಿ ಹೋಗುವ ಮನಸ್ಸು ಮಾಡಿದರೆ ಸೋಲು ಖಚಿತ ಎಂದು ಹೇಳುವ ಮೂಲಕ ಈಶ್ವರಪ್ಪನವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಏಕಕಾಲಕ್ಕೆ ಉರುಳಿಸಿದ್ದಾರೆ..ಈ ಮೂಲಕ ತಮ್ಮ ಖಾತೆ ಬದಲಾವಣೆಯ ಬಗೆಗೆ ಅಸಮಾಧಾನವನ್ನು ಹೊರಹಾಕಿದ್ದಾರೆ..

Exit mobile version