ಸೂಲಿಬೆಲೆ- ತೇಜಸ್ವಿ ಸೂರ್ಯ ದೇಶಭಕ್ತಿ ಪ್ರಶ್ನಿಸಿದ ಹೆಚ್.ಡಿ.ಕೆ ..!

ಸೂಲಿಬೆಲೆ ಚಕ್ರವರ್ತಿ -ಸಂಸದ ತೇಜಸ್ವಿ ಸೂರ್ಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಎಸ್‍ಡಿಪಿಐ ಪರ ಬ್ಯಾಟ್ ಬೀಸಿದ್ದಾರೆ.ತೇಜಸ್ವಿ ಸೂರ್ಯ- ಸೂಲಿಬೆಲೆ ನಮ್ಮ ರಾಜ್ಯಕ್ಕೆ ಏನು ಕೊಡುಗೇನು ಕೊಟ್ಟಿಲ್ಲ , ಅವರೆಲ್ಲ ಯುಗಪುರುಷರೇ ಅಂತ ಲೇವಡಿ ಮಾಡಿದ್ದಾರೆ.ಅವರೆಲ್ಲ ನೆನಪು ಉಳಿಯುವಂತಹ ಕೆಲಸ ಮಾಡಿಲ್ಲ ಅಂತ ಖಾರವಾಗಿ ನುಡಿದಿದ್ದಾರೆ.

ಮೂರನೇ ವ್ಯಕ್ತಿ ಮಾಡಿದ ತಪ್ಪಿಗೆ ಒಂದು ಸಮುದಾಯದ ಮೇಲೆ ತಪ್ಪು ಹೊರಿಸೋದು ಸರಿಯಲ್ಲ . ಇನ್ನು ಕೊಲೆಯಾದ ವರುಣ್ ಗೆ ನ್ಯಾಯ ಸಿಗಬೇಕು.ಯಾರೋ ಮಾಡಿದ ತಪ್ಪಿಗೆ ಧರ್ಮದ ಹೆಸರನ್ನು ಮುಂದೆ ತರೋದು ಸರಿಯಲ್ಲ.ಇದರಲ್ಲಿ ಸಂಘಟನೆಗಳ ಕೈವಾಡವಿದ್ದರೆ ತನಿಖೆ ನಡೆದು ಕ್ರಮ ಕೈಗೊಳ್ಳಲಿ ಅಂತ ತಿಳಿಸಿದ್ರು.

https://www.youtube.com/watch?v=A3CI6ibb8bo&feature=youtu.be

ಇನ್ನು ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ದೇಶದಲ್ಲಿ ಬಿಜೆಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳೋದರ ಮೂಲಕ ಎಡವುತ್ತಿದೆ.ಮಂಗಳೂರು ಗಲಭೆಗೆ ಸರ್ಕಾರವೇ ಕಾರಣ. ಮಂಗಳೂರು ಗಲಭೆ ಕುರಿತು ಈಗಾಗಲೇ ವಿಡಿಯೋ ಬಿಡುಗಡೆಗೊಳಿಸಿದ್ದು ಈ ಬಗ್ಗೆ ಸದನದಲ್ಲಿ ಅಧಿಕಾರಿಗಳನ್ನು ಅಮಾನತುಗೊಳಿಸಲು ಪಟ್ಟು ಹಿಡಿಯುತ್ತೇನೆ ಅಂದಿದ್ದಾರೆ.

ಡಿ.22ರಂದು ಸಿಎಎ ಪರ ಸಮಾವೇಶ ಜರುಗುತ್ತಿದ್ದು ,31 ವರ್ಷದ ವರುಣ್ ಎಂಬಾತನಿಗೆ 6 ಎಸ್‍ಡಿಪಿಐ ಕಾರ್ಯಕರ್ತರು ಚಾಕುವಿನಿಂದ ಇರಿದಿದ್ದು , 6 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದು; ತನಿಖೆ ಸಂದರ್ಭದಲ್ಲಿ ಸೂಲಿಬೆಲೆ, ತೇಜಸ್ವಿ ಸೂರ್ಯ ಕೊಲೆಗೆ ಸಂಚು ನಡೆಸಲಾಗಿದೆ ಅಂತ ತಿಳಿದು ಬಂದಿದ್ದು ,ಇದೀಗ ಇದರ ಬಗ್ಗೆ ಭಾರಿಚರ್ಚೆ ನಡೆಯುತ್ತಿದೆ.

Exit mobile version