ಸ್ಥಳ ಮಹಜರಿಯಲ್ಲಿ ಹಾಜರಿದ್ದ ಆರೋಪಿ ಆದಿತ್ಯರಾವ್ ..

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಮಹಜರು ನಡೆಯಲಿದೆ…. ಇಂದು ಪೋಲೀಸರು ಬಂಧಿತ ಆರೋಪಿನ ಆದಿತ್ಯರಾವ್‍ನನ್ನು ಮಣಿಪಾಲದಲ್ಲಿನ ಆತನ ಮನೆಗೆ ಕರೆದುಕೊಂಡು ಬಂದಿದ್ದಾರೆ.. ಅಲ್ಲಿ ಒಂದಿಷ್ಟು ತನಿಖೆಯನ್ನು ನಡೆಸಿದ್ದು ಹಲವು ಮಾಹಿತಿಯನ್ನು ಪೋಲೀಸರು ಕಲೆಹಾಕಿದ್ದಾರೆ.

ಇದರ ಜೊತೆಯಲ್ಲಿ ಆರೋಪಿ ಆದಿತ್ಯರಾವ್ ಜನವರಿ 20 ರಂದು ಏರ್‍ಪೋರ್ಟ್‍ನಲ್ಲಿ ಬಾಂಬ್ ಇಡುವ ಮುಂಚೆ ತಾನು ಕೆಲಸ ಮಾಡುತ್ತಿದ್ದ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿ ತಂಗಿದ್ದು ಇಂದು ಅಲ್ಲಿಯೂ ಪೋಲಿಸರು ಸ್ಥಳ ಮಹಜರು ನಡೆಸಲಿದ್ದಾರೆ .

40 ವರ್ಷದ ಆದಿತ್ಯರಾವ್ ಈ ಹಿಂದೆಯೂ ಹುಸಿ ಬಾಂಬ್ ಕರೆ ನೀಡಿ 9 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದ. ಇನ್ನು ಈತ 2 ತಿಂಗಳ ಹಿಂದೆ ಮಂಗಳೂರು ಏರ್‍ಪೋರ್ಟ್‍ನಲ್ಲಿ ಬಾಂಬ್ ಇಡಬೇಕು ಅಂತ ತೀರ್ಮಾನಿಸಿದ್ದು ಜನವರಿ ಜನವರಿ 21 ರಂದು ಬಾಂಬ್ ಇರಿಸಿದ್ದ ಬ್ಯಾಗನ್ನು ಏರ್‍ಪೋರ್ಟ್‍ನಲ್ಲಿ ಎಸೆದು ಪರಾರಿಯಾಗಿದ್ದ.

Exit mobile version