ಬೆಂಗಳೂರು, ಅ.19: ನವರಾತ್ರಿಯ ಮೊದಲ ದಿನದಿಂದಲೇ ಪೂಜೆ ಹಾಗು ಅಲಂಕಾರಕ್ಕೆ ಅಗತ್ಯವಾದ ವಸ್ತು ಎಂದರೆ ಹೂವು. ಆದರೆ ಅತಿವೃಷ್ಟಿಯ ಕಾರಣದಿಂದಲೋ ಗೊತ್ತಿಲ್ಲ, ಹೂವಿನ ಬೆಲೆಯಂತೂ ಗಗನಕ್ಕೇರಿರುವುದು ನಿಜವಾದ ಸಂಗತಿ. ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಗಗನಕ್ಕೇರಿರುವುದು ಗ್ರಾಹಕರಿಗೆ ಆಘಾತಕಾರಿ ವಿಚಾರವಂತೂ ಹೌದು.
ಮಂಗಳೂರು ಮಲ್ಲಿಗೆ, ಮೈಸೂರು ಮಲ್ಲಿಗೆ ಸೇರಿದಂತೆ ಇತರೆ ಹೂವಿನ ಬೆಲೆಗಳಲ್ಲಿ ಏರಿಕೆ ಕಂಡಿದ್ದು, ಮೊದಲಿಗಿಂತ 4-5 ಪಟ್ಟು ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಹೂವಿನ ಬೆಲೆ ಏರಿಕೆಯಿಂದಾಗಿ, ಕೊರೊನಾ ಅಟ್ಟಹಾಸದಿಂದ ಗ್ರಾಹಕರು, ಹೂವನ್ನು ಖರೀದಿಸುವ ಸ್ಥಿತಿಯಲ್ಲಿರದ ಕಾರಣ ಮಾರಾಟಗಾರರ ನಿದ್ದೆ ಕೆಡಿಸುವಂತೆ ಮಾಡುತ್ತಿರುವುದಂತೂ ನಿಜ.
ಮಲ್ಲಿಗೆ ಕೆಜಿಗೆ ರೂ.250ರಿಂದ ರೂ.1,500ಕ್ಕೆ, ರೂ.200 ಇದ್ದ ಕನಕಾಂಬರ ಬೆಲೆ ರೂ.800ಕ್ಕೆ, ಕೆಜಿ ರೂ.20 ಇದ್ದ ಗುಲಾಬಿ ಬೆಲೆ ರೂ.240 ತಲುಪಿರುವುದು ಗ್ರಾಹಕರ ನಿದ್ದೆಗೆಡಿಸಿದೆ. ಈ ಬೆಲೆ ಆಯುಧ ಪೂಜೆ ಹಾಗು ವಿಜಯದಶಮಿ ಹಬ್ಬದ ಸಂದರ್ಭದಷ್ಟರಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.