ನವದೆಹಲಿ: ರಾಜ್ಯಸಭೆಯಲ್ಲಿ ಕಲಾಪಗಳು ನಡೆಯುತ್ತಿದ್ದ ವೇಳೆ 8 ಜನ ಸಂಸತ್ ಸದಸ್ಯರು ಕಲಾಪದ ವೇಳೆ ದುರ್ವರ್ತನೆ ತೋರಿದ್ದಾರೆಂದು ಒಂದು ವಾರದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಈ ಶಿಕ್ಷೆಯನ್ನು ವಿರೋಧಿಸಿ ಅಮಾನತುಗೊಂಡ 8 ಜನ ಸದಸ್ಯರು ಸಂಸತ್ ಭವನದ ಆವರಣದ ಗಾಂಧಿ ಪ್ರತಿಮೆ ಬಳಿ ಕುಳಿತು ರಾತ್ರಿ ಇಡೀ ಧರಣಿ ನಡೆಸಿದರು.
ರೈತರು ಮತ್ತು ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆ ಸಂಸತ್ತಿನಲ್ಲಿ ಹೊಸದಾಗಿ ಜಾರಿಗೊಂಡ ಕೃಷಿ ಮಸೂದೆಗಳ ಬಗ್ಗೆ ಅಸಮಾಧಾನಗೊಂಡ ರಾಜ್ಯಸಭಾ ಸಂಸದರು ಅದರ ವಿರುದ್ದ ಸಂಸದರ ಗುಂಪು ಪ್ರತಿಭಟನೆ ನಡೆಸುತ್ತಿತ್ತು. ಹಲವು ಬಾರಿ ಎಚ್ಚರಿಸಿದರೂ ರಾಜ್ಯ ಸಭೆಯೊಳಗೆ ಸಂಸದರು ಪ್ರತಿಭಟನಾ ನಿರತರಾಗಿದ್ದಕ್ಕೆ 8 ಸದಸ್ಯರನ್ನು ಉಳಿದ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿತ್ತು.
22 ಸೆ 2020 ಬೆಳಿಗ್ಗೆ ಹರಿವಂಶ್ ನಾರಾಯಣ ಸಿಂಗ್ ಅವರು ಪ್ರತಿಭಟನಾಕಾರರಿಗೆ ಚಹಾ, ಬೆಳಗಿನ ಉಪಾಹಾರವನ್ನು ನೀಡಿ ಕುಶಲೋಪರಿ ವಿಚಾರಿಸಿದರು. ಇದಕ್ಕೆ ಪ್ರತಿಯಾಗಿ ಸದಸ್ಯರು ಇದು ಮಾದ್ಯಮದ ಮುಂದೆ ನಾಟಕ ಮಾಡಿದ್ದೆಂದು ಹೇಳಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಸದಸ್ಯರ ದುರ್ವರ್ತನೆ ವಿಚಾರವಾಗಿ ರಾಜ್ಯಸಭೆ ಚೇರ್ ಮಾನ್ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನು ಹರಿವಂಶ ನಾರಾಯಣಸಿಂಗ್ ಅವರು ಬರೆದಿದ್ದಾರೆ.
ಅದರಲ್ಲಿ ಅವರು ಸೆಪ್ಟೆಂಬರ್ 20 ರಂದು ರಾಜ್ಯಸಭಾ ಪೀಠದಲ್ಲಿದ್ದಾಗ ಸದಸ್ಯರು ತೋರಿದ ದುರ್ವರ್ತನೆಯಿಂದಾಗಿ ಪೀಠದ ಘನತೆಗೆ ಧಕ್ಕೆಯಾಗಿದೆ. ಇದರಿಂದ ನನಗೆ ಅವಮಾನವಾಗುವಂತೆ ನಡೆದುಕೊಂಡ ಸದಸ್ಯರ ವರ್ತನೆ ಸರಿಯಾದುದಲ್ಲ. ಸ್ವ ಶುದ್ಧೀಕರಣಕ್ಕಾಗಿ ತಾನು ನಾಳೆಯವರೆಗೆ ನಿರಶನ ಕೈಗೊಳ್ಳುವುದಾಗಿ ವಿವರಿಸಿದ್ದಾರೆ.