ನಾಯಿ ದಾಳಿಗೆ 10 ಮಂದಿಗೆ ಗಾಯ!

ಬೆಂಗಳೂರು, ಫೆ. 04: ಬೆಂಗಳೂರಿನ ಎಲ್ಲೆಡೆ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ನಗರ ಪಾಲಿಕೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.  ಕೋರಮಂಗಲದ ನಾಲ್ಕನೇ ಬ್ಲಾಕ್ ನಲ್ಲಿ ಬೀದಿ ನಾಯಿಗಳ ದಾಳಿಗೆ 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಜನರು ರಸ್ತೆಯಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ,  ವಾಕಿಂಗ್, ರೌಂಡ್ಸು ಅಂತಾ ಹೊರಗೆ ಬರುವ ಹಾಗೆ ಇಲ್ಲ. ಬೆಂಗಳೂರಿನ ಕೋರಮಂಗಲದ ನಾಲ್ಕನೇ ಬ್ಲಾಕ್ ನಲ್ಲಿಅಂತೂ ಜನ ಓಡಾಡೋ ಹಾಗೇ ಇಲ್ಲ. ಕೆಲವು ಸಾಕು ನಾಯಿಗಳನ್ನೂ ರೋಡಿಗೆ ಬಿಡುತ್ತಾರೆ. ಇದರಿಂದ ಜನರಿಗೆ ಹಲವು ತೊಂದರೆಗಳಾಗುತ್ತಿವೆ. ಈ ಬಗ್ಗೆ ಪಾಲಿಕೆಗೆ ಹಲವು ಬಾರಿ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸಾರ್ವಜನಿಕರ ನೋವು.

Exit mobile version