2020ರೊಳಗೆ ಷಟ್ಪಥ ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ಸೂಚನೆ- ಡಿಸಿಎಂ ಕಾರಜೋಳ

ರಾಮನಗರ,ಸೆ.03: ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ.ಕಾರಜೋಳ ಇಂದು ರಾಮನಗರದಲ್ಲಿ ಸಭೆ ನಡೆಸಿದ್ದಾರೆ. ಬೆಂಗಳೂರು-ಮೈಸೂರು ಷಟ್ಪಥ ರಸ್ತೆಯ ಪ್ರತ್ಯಕ್ಷಿಕೆಯನ್ನು‌ ವೀಕ್ಷಿಸಿದ ಅವರು, ಬೆಂಗಳೂರು-ಮೈಸೂರು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2020ರೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ ಇಂಜಿಯಯರ್ ಗಳು ಕಾಮಗಾರಿಗಳ ಗುಣಮಟ್ಟವನ್ನು‌ ಪರಿಶೀಲಿಸಲು ನಿರಂತರವಾಗಿ ಸೈಟ್ ಗಳಿಗೆ ಭೇಟಿ ನೀಡಲು ಆದೇಶಿಸಿದ್ದಾರೆ.

ಇನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ರಾಮನಗರ ಜಿಲ್ಲೆಯ ಕೈಲಾಂಚ ಹಾಸ್ಟಲ್ ವಾರ್ಡನ್ ಅಮಾನತಿಗೆ ಆದೇಶ ಹೊರಡಿಸಿದರಲ್ಲದೆ ಸರ್ಕಾರಿ ಕಟ್ಟಡಗಳಿಗೆ ಹಾಸ್ಟಲ್ ಸ್ಥಳಾಂತರಿಸಲು ಸೂಚನೆ ನೀಡಿದ್ದಾರೆ.

Exit mobile version