Tamilnadu : ಹಲವಾರು ಅನಿಷ್ಠ ಪದ್ಧತಿಗಳು ಭಾರತದಿಂದ (India) ತೊಲಗಿದರೂ ಬಾಲ್ಯ ವಿವಾಹ ಪದ್ದತಿ (3 priests arrested for child marriage) ಮಾತ್ರ ಸಂಪೂರ್ಣವಾಗಿ ನಿರ್ನಾಮಗೊಂಡಿಲ್ಲ.
ಕರ್ನಾಟಕದ ಹಲವು ರಾಜ್ಯಗಳಲ್ಲಿ ಈಗಲೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ.
![Police Arrest 3 priests arrested for child marriage](https://sp-ao.shortpixel.ai/client/to_webp,q_glossy,ret_img,w_575,h_323/https://vijayatimes.com/wp-content/uploads/2021/04/Child-Marriage-1024x576.jpg)
ಬಾಲ್ಯ ವಿವಾಹಗಳಿಂದ ವಿವಿಧ ರೀತಿಯ ದುಷ್ಪರಿಣಾಮಗಳಾಗುತ್ತಿದ್ದರೂ, ನಮ್ಮ ಸಮಾಜದಲ್ಲಿ ಇಂದಿಗೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು 2006ನೇ ಇಸವಿಯಲ್ಲಿ ಒಂದು ನೂತನ ಕಾಯಿದೆಯನ್ನು ರಚಿಸಲಾಗಿತ್ತು.
ಈ ಕಾಯ್ದೆ ಜಾರಿಗೆ ಬಂದ ನಂತರ ಬಾಲ್ಯ ವಿವಾಹ ನಿಷೇಧ (Prohibition of child marriage) ಕುರಿತು ಜಾಗೃತಿ ಮೂಡಿಸುತ್ತಲೇ ಬರಲಾಗಿದೆ, ಕಾನೂನು ಕಠಿಣವಾಗಿದೆ.
ಹೀಗಿದ್ದರೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ.
![Child Marriage Tamilnadu](https://sp-ao.shortpixel.ai/client/to_webp,q_glossy,ret_img,w_604,h_339/https://vijayatimes.com/wp-content/uploads/2021/01/Child_marriage-1024x576.jpg)
ಇದೀಗ, ಇಂತದ್ದೇ ಪ್ರಕರಣವೊಂದು ನೆರೆ ರಾಜ್ಯ ತಮಿಳುನಾಡಿನಲ್ಲಿ (Tamilnadu) ನಡೆದಿದೆ. ತಮಿಳುನಾಡಿನ ಚಿದಂಬರಂನಲ್ಲಿರುವ ನಟರಾಜ ದೇವಸ್ಥಾನದ ಮೂವರು ಅರ್ಚಕರು ಅಕ್ಟೋಬರ್ 15ರಂದು ಬಾಲ್ಯ ವಿವಾಹ ಮಾಡಿಸಿದ್ದಾರೆ.
ಇದೀಗ ಈ ಆರೋಪ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ. ಅರ್ಚಕರ ಬಂಧನದ (3 priests arrested for child marriage) ವಿರುದ್ಧ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು, ಆದರೆ ನಂತರ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ :https://vijayatimes.com/seer-basavaprabhu-to-murugha-mutt/
ಪ್ರಕರಣದ ವಿವರ ಹೀಗಿದೆ; ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ನಟರಾಜ ದೇಗುಲದ ಅರ್ಚಕರು ಮತ್ತು ಆ ದೇವಾಲಯದ ಕಾರ್ಯದರ್ಶಿ ಹೇಮಸಾಬೇಶ ಮತ್ತು ವಿಜಯಬಾಲ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಜೊತೆಗೆ, ಈ ಆರೋಪದಲ್ಲಿ ವಿಜಯಬಾಲಾ ಅವರ ಪುತ್ರ ಜ್ಞಾನಶೇಖರನ್ ಅವರನ್ನು ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
![child marriage Child](https://sp-ao.shortpixel.ai/client/to_webp,q_glossy,ret_img,w_600,h_401/https://vijayatimes.com/wp-content/uploads/2022/06/child.jpg)
ಸಮಾಜ ಕಲ್ಯಾಣ ಇಲಾಖೆಯು ಕಡಲೂರು ಪೊಲೀಸರಿಗೆ ದೂರು ನೀಡಿದ್ದು, ಹೇಮಸಾಬೇಶ ಅರ್ಚಕರು ತನ್ನ 13 ವರ್ಷದ ಮಗಳನ್ನು ವಿಜಯಬಾಲಾ ಅರ್ಚಕರ 17 ವರ್ಷ ಮಗ ಜ್ಞಾನಶೇಖರನ್ಗೆ ಮದುವೆ ಮಾಡಿಕೊಟ್ಟಿದ್ದಾರೆ.
ಈ ವಿಚಾರವಾಗಿ ಅರ್ಚಕರ ಬೆಂಬಲಿಗರು ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರೂ, ನಂತರದಲ್ಲಿ ಈ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಈ ಬಗ್ಗೆ ಮಾತನಾಡಿದ ಅರ್ಚಕರು, ನಮ್ಮ ಜಾತಿಯವರಿಗೆ ನಾವು ನಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :https://vijayatimes.com/kharagpur-student-decomposed-body-found/
ಈ ಇಬ್ಬರು ಅರ್ಚಕರು ಚಿದಂಬರಂ ನಟರಾಜರ ದೇವಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ, ಹಿಂದೂ ಧರ್ಮದಾಯ ಮತ್ತು ದತ್ತಿ ಇಲಾಖೆಯು ದೇವಾಲಯದ ಸಮಸ್ಯೆಗಳ ಬಗ್ಗೆ ವಿವರಗಳನ್ನು ಕೇಳಿತ್ತು, ಈ ವಿಚಾರವಾಗಿ ಸ್ಥಳೀಯರ ಅಕ್ರೋಶ ಕೂಡ ಇತ್ತು.