ಮನೆಗೆ ಬೆಂಕಿಯಿಟ್ಟು 7 ಮಂದಿ ಹತ್ಯೆ: ಪರಾರಿಯಾಗಿದ್ದ ಆರೋಪಿ ಮೃತದೇಹ ಕಾಫಿ ತೋಟದಲ್ಲಿ ಪತ್ತೆ!

ಕೊಡಗು, ಏ. 06: ಕುಡಿದ ಅಮಲಿನಲ್ಲಿ ಮನೆಗೆ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟು 6 ಮಂದಿ ಸಜೀವ ದಹನ ಪ್ರಕರಣದ ಆರೋಪಿ ಮೃತದೇಹ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

ಮುಗುಟಗೇರಿ ಸಮೀಪದ ಕಾಫಿ ತೋಟದಲ್ಲಿ ಆರೋಪಿ ಭೋಜ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಭೋಜನ ದೇಹ ಕೃತ್ಯ ನಡೆದ ಅರ್ಧ ಕಿ.ಮೀ ದೂರದ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೇ
ಕೃತ್ಯ ನಡೆದ ದಿನವೇ ಭೋಜ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮನೆಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸುಟ್ಟುಗಾಯಗಳಾಗಿದ್ದ ಭಾಗ್ಯ ಎಂಬಾಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಇದರೊಂದಿಗೆ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ.

Exit mobile version