Mumbai : ಸುಖಾಸುಮ್ಮನೆ ಪತಿಯ ಮಾನಹಾನಿ ಮಾಡುವುದು, ಸಾಕ್ಷಿಯಿಲ್ಲದೇ ಹಾಗೂ ಆರೋಪಗಳನ್ನು ಸಾಬೀತುಪಡಿಸದೆ ಗಂಡನನ್ನು ಸ್ತ್ರೀಲೋಲ ಮತ್ತು ಮದ್ಯವ್ಯಸನಿ ಎಂದು ಕರೆಯುವುದು ಕ್ರೌರ್ಯ ಎಂದು ಬಾಂಬೆ ಹೈಕೋರ್ಟ್(Bombay Highcourt Verdict) ಹೇಳಿದೆ.
ಈ ಮೂಲಕ, ಪುಣೆ ಮೂಲದ ದಂಪತಿಯ ವಿವಾಹವನ್ನು ವಿಸರ್ಜಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಅಕ್ಟೋಬರ್ 12 ರಂದು ನೀಡಿದ ತನ್ನ ಆದೇಶದಲ್ಲಿ,
50 ವರ್ಷದ ಮಹಿಳೆಯೊಬ್ಬರು(Bombay Highcourt Verdict) ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು.
https://youtu.be/lLC_P0d_2kQ ಮಾರುಕಟ್ಟೆಗೆ ಕೃತಕ ಮಾಂಸ !
ಹೈಕೋರ್ಟ್ ಮೇಲ್ಮನವಿಯನ್ನು ಪರಿಗಣಿಸುತ್ತಿರುವಾಗಲೇ ಮಾಜಿ ಸೈನಿಕ ಮೃತಪಟ್ಟಿದ್ದರಿಂದ, ಕಾನೂನು ವಾರಸುದಾರನನ್ನು ಕಕ್ಷಿದಾರನನ್ನಾಗಿ ಮಾಡಿಕೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು.
ಮೇಲ್ಮನವಿಯಲ್ಲಿ ಮಹಿಳೆ, ತನ್ನ ಪತಿ ಸ್ತ್ರೀಲೋಲ ಮತ್ತು ಮದ್ಯವ್ಯಸನಿ ಎಂದು ಹೇಳಿಕೊಂಡಿದ್ದಳು.
ಮತ್ತು ಪತಿಯ ಇಂತಹ ದುಶ್ಚಟಗಳಿಂದಾಗಿ ತನ್ನ ವೈವಾಹಿಕ ಹಕ್ಕುಗಳಿಂದ ವಂಚಿತಳಾಗಿದ್ದೇನೆ ಎಂದು ಆರೋಪಿಸಿದ್ದಳು.
ಆದರೆ, ಅರ್ಜಿದಾರ ಮಹಿಳೆ ತನ್ನ ಸ್ವಂತ ಹೇಳಿಕೆಯನ್ನು ಹೊರತುಪಡಿಸಿ, ಆರೋಪಗಳನ್ನು ದೃಢೀಕರಿಸುವ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಗಮನಿಸಿದೆ.
ಇದನ್ನೂ ಓದಿ : https://vijayatimes.com/owaisi-slams-up-govt/
ತನ್ನ ಗಂಡನ ಚಾರಿತ್ರ್ಯದ ವಿರುದ್ಧ ಅನಗತ್ಯ ಮತ್ತು ಸುಳ್ಳು ಆರೋಪಗಳನ್ನು ಮಾಡುವ ಪತ್ನಿಯ ನಡವಳಿಕೆಯು ಸಮಾಜದಲ್ಲಿ ಅವನ ಪ್ರತಿಷ್ಠೆಗೆ ಹಾನಿಯಾಗುತ್ತದೆ ಮತ್ತು ಇದು ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಪೀಠ ಹೇಳಿದೆ.
ಅರ್ಜಿದಾರ ಮಹಿಳೆ ತನ್ನ ಪತಿ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡುವ ಮೂಲಕ ಮಾನಸಿಕ ಯಾತನೆ ಉಂಟು ಮಾಡಿದ್ದಾರೆ ಎಂದು ಮೃತ ವ್ಯಕ್ತಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿದಾರ ಮಹಿಳೆಯ ಪತಿ ಮಾಜಿ ಸೇನಾ ಉದ್ಯೋಗಿಯಾಗಿದ್ದು, ಅವರು ಮೇಜರ್ ಆಗಿ ನಿವೃತ್ತರಾಗಿದ್ದರು.
ಇವರು ಸಮಾಜದ ಮೇಲ್ವರ್ಗಕ್ಕೆ ಸೇರಿದವರು ಮತ್ತು ಸಮಾಜದಲ್ಲಿ ಉತ್ತಮ ಹೆಸರನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ.
ಆದರೆ, ಪ್ರತಿವಾದಿ ಮಹಿಳೆ ಅನಗತ್ಯ, ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ, ಪತಿಯ ಘನತೆಗೆ ಚ್ಯುತಿ ತಂದಿದ್ದು, ಸಮಾಜದಲ್ಲಿ ಅವರ ಖ್ಯಾತಿಯನ್ನು ಚೂರು ಚೂರು ಮಾಡಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ.
ಇದನ್ನೂ ಓದಿ : https://vijayatimes.com/rajnikanth-likes-kantara/
ಈ ಮೇಲಿನ ಅಂಶಗಳನ್ನು ಪರಿಗಣಿಸಿ, ಅರ್ಜಿದಾರರ ನಡವಳಿಕೆಯು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 13 (1) (i-a) ರಡಿ ಕ್ರೌರ್ಯವಾಗಿದೆ,
ಪತಿಗೆ ಸುಖಾ ಸುಮ್ಮನೆ ಮಾನಸಿಕ ಹಿಂಸೆ ನೀಡಿರುವುದರಿಂದ ಪತ್ನಿಗೆ ಪತಿಯು ವಿಚ್ಛೇದನ ನೀಡಿದ್ದು ಸೂಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.
- ಪವಿತ್ರ