Kalburgi: ಒಂದೆಡೆ ಬಿರು ಬಿಸಿಲಿನ ಝಳ ಕ್ಕೆ ಮಳೆ ಇಲ್ಲದೇ ಕಲಬುರಗಿ (Kalburgi), ಬೆಂಗಳೂರು ಜನ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸುವ ಕುರಿತು ಯೋಚಿಸುವುದನ್ನು ಬಿಟ್ಟು ಮಳೆಗಾಗಿ ಸಿಎಂ ಮಲೆ ಮಹಾದೇವಪ್ಪ ದೇವಸ್ಥಾನಕ್ಕೆ ತೆರಳಿ 20 ನಿಮಿಷ ಪೂಜೆ ಮಾಡ್ತಾರೆ ಅಂದ್ರೆ ಎಲ್ಲಿದೆ ವೈಜ್ಞಾನಿಕತೆ ? ಎಲ್ಲಿದೆ ವೈಚಾರಿಕತೆ ಮನಸ್ಥಿತಿ ? ಎಂದು ಖಾರವಾಗಿ ನಟ ಚೇತನ್ (Chethan) ಪ್ರಶ್ನಿಸಿದ್ದಾರೆ.
ಆಗಾಗ ವೈಚಾರಿಕತೆ, ಉದಾತ್ತ ಚಿಂತನೆಗಳ ಕುರಿತು ಭಾಷಣ ಮಾಡುವುದಲ್ಲ ಬದಲಾಗಿ ನುಡಿದಂತೆ ನಡೆಯಬೇಕು .ಚುನಾವಣೆ ಸಂದರ್ಭದಲ್ಲಿ ಟೆಂಪಲ್ ರನ್ (Temple Run) ಮಾಡುವುದಲ್ಲ ,ಬುದ್ಧ, ಬಸವ, ಅಂಬೇಡ್ಕರ್ ವಾದ ಮತ್ತು ವೈಚಾರಿಕತೆಯ ಬಗ್ಗೆ ಮಾತನಾಡುವ ಸಿಎಂ ಸಿದ್ಧರಾಮಯ್ಯ, ಸತೀಶ ಜಾರಕಿಹೊಳಿ (Sathish Jarakiholi) ಸೇರಿದಂತೆ ಅನೇಕರು ಇಲೆಕ್ಷನ್ ಸಮಯದಲ್ಲಿ ಟೆಂಪಲ್ ರನ್ ಮಾಡುತ್ತಿರುವುದು ಬಹುದೊಡ್ಡ ದುರಂತ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ಪ್ರವಾಸದಲ್ಲಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂತಹ ದ್ವಂದ್ವ ಬಿಟ್ಟು ಹೊರಬನ್ನಿ, ಮೌಢ್ಯ ತೊಡೆದು ಹಾಕಲು ಪ್ರಾಮಾಣಿಕವಾಗಿ ಕೈ ಜೋಡಿಸಿ ಎಂದು ಹೇಳಿದ್ದಾರೆ. ಇನ್ನು ಮುಂದಾದರೂ ರಾಜಕಾರಣದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಆದರೆ ರಾಜ್ಯದ ಪಕ್ಷಗಳಲ್ಲಿ ಮಕ್ಕಳು, ಅಳಿಯಂದಿರು, ಸೊಸೆಯಂದಿರಿಗೆ ಟಿಕೆಟ್ (Ticket) ಕೊಡಲಾಗುತ್ತಿದೆ. ಇದರಿಂದ ಆ ಪಕ್ಷಗಳಿಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ . ನಮಗೆ ಕೆಲಸವನ್ನು ಪೂಜಿಸುವವರು ಬೇಕು ಹೊರತಾಗಿ ಕೆಲಸಬಿಟ್ಟು ದೇವರನ್ನು ಪೂಜಿಸುವವರಲ್ಲ.
2013ರಲ್ಲಿ ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ, 2023 ರಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ . ಇದು ಸಂಪೂರ್ಣ ಅವೈಜ್ಞಾನಿಕತೆ, ಓಟಿಗೋಸ್ಕರ ಮೌಡ್ಯತೆ ಮೆರೆಯುತ್ತಿರುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಸಿಎಂ ಸಿದ್ಧರಾಮಯ್ಯ (Siddaramaiah) ನನ್ನು ನಟ ಚೇತನ್ ಟೀಕಿಸಿದ್ದಾರೆ.