`ಗಂಡನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಸಹಿಸುವುದಿಲ್ಲ’ ಎಂದ ನಟಿ ತಾರಾ ಅನುರಾಧ!

ಕನ್ನಡ ಚಿತ್ರರಂಗದಲ್ಲಿ ನಟಿ ತಾರಾ ಅನುರಾಧ ಅವರು `ಹೇ ಗಂಗೂ ನೀ ಬೈಕು ಕಲಿಸಿಕೊಡು ನಂಗೂ’ ಎಂಬ ಹಾಡಿನಿಂದಲೇ ಚಿತ್ರರಸಿಕರಿಗೆ ಚಿರಪರಿಚಿತರಾದವರು. ಸಿಪಾಯಿ ಚಿತ್ರದಲ್ಲಿ ಮುದ್ದು ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿ ಇಂದು ಅನೇಕ ಕನ್ನಡಿಗರ ಹೃದಯದಲ್ಲಿ ನೆಲೆಸಿರುವ ನಟಿ. ತಮ್ಮ ಮುದ್ದು ಮುಖ, ಸರಳ ನಟನೆ, ಸ್ಪಷ್ಟ ಕನ್ನಡದಿಂದಲೇ ಹೆಚ್ಚು ಪ್ರಖ್ಯಾತರಾದ ನಟಿ ತಾರಾ ಅನುರಾಧ ಅವರು, ಇಂದು ಎಲ್ಲರ ಅಚ್ಚುಮೆಚ್ಚಿನ ನಟಿ ಎಂದರೆ ತಪ್ಪಾಗಲಾರದು. ಸಿಪಾಯಿ, ಆನಂದ್, ದಿಗ್ಗಜರು, ಗಡಿಬಿಡಿ ಕೃಷ್ಣ ಸೇರಿದಂತೆ ಇಂದಿನ ಬಡವ ರಾಸ್ಕಲ್ ಸಿನಿಮಾಗಳ ಮೂಲಕ ತಮ್ಮ ನಟನೆಯ ಪಯಣವನ್ನು ಸಾಗಿಸಿ, ಜೀವಿಸಿಕೊಂಡು ಬಂದಿರುವ ಅತ್ಯುತ್ತಮ ನಟಿ. ಇಂದು ಹಿರಿಯ ನಟಿಯಾಗಿ ಮುಂದುವರೆಯುತ್ತಿದ್ದಾರೆ ತಾರಾ ಅನುರಾಧ.

ಸದ್ಯ ತಾರಾ ಅನುರಾಧ ಅವರು ಚಿತ್ರರಂಗ ಬಳಗ ಸೇರಿದಂತೆ ರಾಜ್ಯದ ಜನತೆಗೆ ಇಂದು ತಾರಾ ಅಮ್ಮ ಎಂದೇ ರಿಜಿಸ್ಟರ್ ಆಗಿದ್ದಾರೆ. ನಟನೆಯ ನಂತರ ತಾರಾಮ್ಮ ಅವರು ಈಗ ಹೆಚ್ಚು ಬಿಝಿಯಾಗಿರುವುದು ಕಿರುತೆರೆಯ ಕಾರ್ಯಕ್ರಮಗಳಲ್ಲಿ. ಹೌದು, ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ `ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ತಾರಾಮ್ಮ, ಸದಾ ಹಸನ್ಮುಖಿಯಾಗಿಯೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ.

ಈ ಮುಖೇನ ಅವರು ಪ್ರತಿಯೊಂದು ಮನೆ ಮನೆಗಳ ಮನಗಳಲ್ಲಿ ಬೇರೂರಿದ್ದಾರೆ. ಇತ್ತೀಚಿಗಷ್ಟೆ ತಾರಾ ಅವರು ತಾಯಿಯ ಪಾತ್ರದಲ್ಲಿ ಅಭಿನಯಿಸಿದ ಸಿನಿಮಾ ಬಡವ ರಾಸ್ಕಲ್ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತಾರಾ ಅವರು ಈ ಚಿತ್ರದ ಸಕ್ಸಸ್ ಹಂಚಿಕೊಳ್ಳಲು ಒಂದರಂತೆ ಒಂದು ಮಾಧ್ಯಮಗಳ ಸಂದರ್ಶನಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಈ ರೀತಿಯ ಒಂದು ಸಂದರ್ಶನದಲ್ಲಿ ತಾರಾ ಅವರು ಹಂಚಿಕೊಂಡ ಅಭಿಪ್ರಾಯ ಸದ್ಯ ತೇಲುತ್ತಿದೆ. ಏನಪ್ಪಾ ಅದು ಎಂದರೆ, ತಾರಾ ಅವರು ಸಂದರ್ಶನವೊಂದರಲ್ಲಿ ಹಾಗೆ ಮಾತನಾಡುವಾಗ `ನನ್ನ ಗಂಡನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ಸನ್ನಿವೇಶ ಎದುರಾಗಿದ್ದು ಏಕೆ? ತಾರಾ ಅವರು ಈ ರೀತಿ ಹೇಳಲು ಕಾರಣ ಏನು ಅಂತ ತಿಳಿಯಲು ಮುಂದೆ ಓದಿ.

ಬಡವ ರಾಸ್ಕಲ್ ಚಿತ್ರದಲ್ಲಿ ಡಾಲಿ ಧನಂಜಯ್ ಅವರ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾರಾ ಅವರಿಗೆ, ಈ ಚಿತ್ರದ ಒಂದು ಸನ್ನಿವೇಶದಲ್ಲಿ ಹೀರೋಯಿನ್ ನೀವು ಈ ಆಟೋ ಡ್ರೈವರ್ ತಾಯಿನಾ? ಅವರು ನಿಮ್ಮ ಗಂಡಾನಾ? ಎಂದು ವ್ಯಂಗ್ಯವಾಗಿ ಹೇಳಿದ ಕೂಡಲೇ ತಾರಾ ಅವರಿಗೆ ಕೋಪ ಬಂದು ನಾಯಾಕಿಗೆ ಬೈಯುತ್ತಾರೆ. ಈ ಸನ್ನಿವೇಶವನ್ನು ನೆನಪು ಮಾಡಿಕೊಂಡ ತಾರಾ ಅವರು, ಯಾರೇ ಆಗಲಿ ಚಿತ್ರದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಅಷ್ಟೇ! ತಮ್ಮ ಗಂಡ ಅಥವಾ ಮಕ್ಕಳ ಬಗ್ಗೆ ಹೊರಗಿನವರು ಯಾರೇ ಮಾತನಾಡಿದರೂ ನಮಗೆ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

Exit mobile version