ಸಿನಿಪ್ರೇಕ್ಷಕರ ಮುಂದೆ ಬರಲಿದೆ ಭಯಾನಕ ‘ಅಘೋರ’!

ಕನ್ನಡ ಚಿತ್ರರಂಗದಲ್ಲಿ ಸದ್ಯ ಒಂದಲ್ಲ ಒಂದು ಸಿನಿಮಾ ತೆರೆಕಾಣುವ ಮುಖೇನ ಸಿನಿರಸಿಕರಿಗೆ ಮನರಂಜನೆಯ ಮಹಾಪೂರವೇ ನೀಡುತ್ತಿದೆ. ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಕಾಣಲು ಸಜ್ಜಾಗಿದ್ದು, ಅದೇ ಸಾಲಿನಲ್ಲಿರುವ ‘ಅಘೋರ’ ಸಿನಿಮಾ ಪ್ರೇಕ್ಷಕರಲ್ಲಿ ಕಾತುರತೆ ಹೆಚ್ಚಿಸುವಲ್ಲಿ ಪ್ರಮುಖವಾಗಿದೆ ಎನ್ನಬಹುದು. ನೃತ್ಯ ನಿರ್ದೇಶಕರಾಗಿದ್ದ ಪ್ರಮೋದ್ ರಾಜ್ ಅವರು ಅಘೋರ ಸಿನಿಮಾದ ಮೂಲಕ ಪ್ರಥಮ ಬಾರಿಗೆ ಪರಿಪೂರ್ಣ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಈ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಅವರು, ಅಘೋರ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ತಮ್ಮ ಹೆಜ್ಜೆಯನ್ನು ಭರ್ಜರಿಯಾಗಿಡಲು ಸಜ್ಜಾಗಿದ್ದಾರೆ.

ಅಘೋರ ಸಿನಿಮಾದ ಟ್ರೇಲರ್ ವೀಕ್ಷಿಸಿದ ಸಿನಿಪ್ರೇಕ್ಷಕರಲ್ಲಿ ಕೂತೂಹಲ, ಭಯ ಕೆರಳಿಸಿದ್ದಂತು ಸತ್ಯ! ಸಾವಿನ ನಂತರ ಆತ್ಮ ಎಂಬುದು ನಿಜಕ್ಕೂ ಕಾಡಲಿದೆಯಾ? ಅಥವಾ ಅದೆಲ್ಲಾ ನಿಜವಾ? ಇದ್ದರೂ ಹೇಗಿರಲಿದೆ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವುದೇ ಈ ಸಿನಿಮಾದ ಕಥಾಹಂದರವಾಗಿದೆ ಎಂಬುದನ್ನು ಊಹಿಸಬಹುದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಸಿನಿಮಾದ ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾ ನೋಡಲೇಬೇಕು, ಯಾವಾಗ ಬಿಡುಗಡೆಯಾಗಲಿದೆ ಎಂಬ ಕುತೂಹಲವನ್ನು ಹೊರಹಾಕಿರುವುದು ಚಿತ್ರತಂಡಕ್ಕೆ ಖುಷಿಯ ಸಂಗತಿ ಎಂದೇ ಹೇಳಬಹುದು.

ಸದ್ಯ ಅಘೋರ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಸಿನಿಮಾ ಬಿಡುಗಡೆಯವರೆಗೂ ಕಾಯಬೇಕಿದೆ. ಇನ್ನು ಅಘೋರ ಸಿನಿಮಾ ಸಾವು ಮತ್ತು ಪುನರ್ಜನ್ಮದ ನಡುವೆ ಏನಿದೆ ಎಂಬ ಪ್ರಶ್ನೆಗೆ ನಾವು ವೈಜ್ಞಾನಿಕ ಉತ್ತರವನ್ನು ಕಂಡುಕೊಳ್ಳಬಹುದೇ? ಅಥವಾ ಇದು ಕೇವಲ ಅಲೌಕಿಕವೇ? ಎಂಬ ಪ್ರಶ್ನೆಗಳನ್ನು ನಮ್ಮಲ್ಲಿ ಸೃಷ್ಟಿಸಿದೆ. ಅಘೋರ ಸಿನಿಮಾ ಯಾವಾಗ ತೆರೆಕಾಣಲಿದೆ? ಸಿನಿಮಾ ನಟ, ನಟಿಯರು ಯಾವೆಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ? ಸಿನಿಮಾ ತೆರೆಕಾಣುವ ದಿನಾಂಕ ಇವೆಲ್ಲದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಹಾಜರು ಪಡಿಸುತ್ತೇವೆ.

Exit mobile version