ನರೇಂದ್ರ ಮೋದಿ (Narendra Modi) ಅವರು 2014ರಲ್ಲಿ ಪ್ರಧಾನ ಮಂತ್ರಿಯಾದ (Al Jazeera Report Against Modi) ಕೂಡಲೇ ರಾಜ್ಯಗಳಿಗೆ ಮೀಸಲಿಟ್ಟ ಅನುದಾನವನ್ನು ಗಮನಾರ್ಹವಾಗಿ
ಕಡಿತಗೊಳಿಸಲು ಭಾರತದ ಹಣಕಾಸು ಆಯೋಗದೊಂದಿಗೆ ‘ಹಿಂಬಾಗಿಲಿನಿಂದ ಮಾತುಕತೆ’ ನಡೆಸಿದ್ದರು ಎಂದು ಅಲ್ ಜಝೀರಾ (Al Jazeera) ವರದಿ ಮಾಡಿದೆ.
ಹಣಕಾಸು ಆಯೋಗದ ದೃಢವಾದ ನಿರ್ಧಾರವು ಮೋದಿ ಸರ್ಕಾರವು ತನ್ನ ಮೊದಲ ಪೂರ್ಣ ಬಜೆಟನ್ನು (Budget) 48ಗಂಟೆಗಳಲ್ಲಿ ತರಾತುರಿಯಲ್ಲಿ ಮರುಪರಿಶೀಲನೆ ಮಾಡುವಂತೆ ಮಾಡಿತ್ತು.
ತೆರಿಗೆಗಳ ಹೆಚ್ಚಿನ ಭಾಗವನ್ನು ಕೇಂದ್ರದಲ್ಲೇ ಉಳಿಸಿಕೊಳ್ಳುವ ಅವರ ಊಹೆಯು ಕಾರ್ಯಸಾಧುವಾಗದ ಕಾರಣ, ಒಕ್ಕೂಟ ಸರ್ಕಾರವು ತನ್ನ ಕಲ್ಯಾಣ ಕಾರ್ಯಕ್ರಮಗಳ ಹಣವನ್ನು ಕಡಿತಗೊಳಿಸಿತ್ತು.
ಆ ವೇಳೆ ‘ರಾಜ್ಯಗಳಿಗೆ ಹಂಚಿಕೆ ಮಾಡಬೇಕಾದ ತೆರಿಗೆ ಭಾಗಗಳ ಕುರಿತು ಹಣಕಾಸು ಆಯೋಗದ ಶಿಫಾರಸುಗಳನ್ನು ನಾನು ಸ್ವಾಗತಿಸುತ್ತೇನೆ’ ಎಂದು ಮೋದಿ (Modi) ಸಂಸತ್ತಿನಲ್ಲಿ ಸುಳ್ಳು
ಹೇಳಿಕೆ ನೀಡಿದರು. ‘ಕೇಂದ್ರೀಯ ತೆರಿಗೆಗಳಿಂದ ರಾಜ್ಯಗಳ ಪಾಲನ್ನು ನಿರ್ಧರಿಸುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಿದೆ’ ಎಂದು ಆಯೋಗದ ಮುಖ್ಯಸ್ಥರು ವಿರೋಧಿಸಿದ ನಂತರ, ಮೋದಿ ಅವರು ಹಿಂದೆ
ಸರಿಯಬೇಕಾಯಿತು (Al Jazeera Report Against Modi) ಎಂದು ಹೇಳಲಾಗಿದೆ.
ಒಕ್ಕೂಟ ಸರ್ಕಾರ ಬಜೆಟ್ ತಯಾರಿಕೆಯಲ್ಲಿ ಹಣಕಾಸಿನ ಚೌಕಾಶಿ ಮತ್ತು ತೆರೆಮರೆಯ ಕಾರ್ಯಾಚರಣೆ ಬಗ್ಗೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ (CEO BVR Subramanyam)
ಅವರಿಂದ ಬಹಿರಂಗವಾಗಿದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಅವರು ಮೋದಿ ಮತ್ತು ಹಣಕಾಸು ಆಯೋಗದ ಅಧ್ಯಕ್ಷ ವೈವಿ ರೆಡ್ಡಿ ನಡುವಿನ ‘ಹಿಂಬಾಗಿಲ ಸಂಧಾನ’ದಲ್ಲಿ
ಸಂವಹಕಾರರಾಗಿದ್ದರು.
ಪ್ರಸ್ತುತ ಭಾರತ ಸರ್ಕಾರದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು, ಪ್ರಧಾನ ಮಂತ್ರಿ ಮತ್ತು ಅವರ ತಂಡವು ರಾಜ್ಯಗಳ ಹಣಕಾಸು ಕಡಿತಗೊಳಿಸಲು ಮೊದಲಿನಿಂದಲೂ ಪ್ರಯತ್ನಿಸಿದೆ ಎಂದು
ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಚರ್ಚಗೆ ಗ್ರಾಸವಾಗಿದ್ದು, ಈಗ ಈ ಬಗ್ಗೆ ಹಲವು ರಾಜ್ಯಗಳು ಪದೇ ಪದೇ ಕಳವಳ ವ್ಯಕ್ತಪಡಿಸಿವೆ. ಸರ್ಕಾರೇತರ ಚಿಂತಕರ ಚಾವಡಿಯಾದ ‘ಸಾಮಾಜಿಕ ಮತ್ತು
ಆರ್ಥಿಕ ಪ್ರಗತಿಯ ಕೇಂದ್ರ’ (ಸಿಎಸ್ಇಪಿ) ಆಯೋಜಿಸಿದ್ದ ‘ಭಾರತದಲ್ಲಿ ಹಣಕಾಸು ವರದಿ’ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸುಬ್ರಹ್ಮಣ್ಯಂ ಅವರು ಈ ಮಾಹಿತಿಯನ್ನು ಹಂಚಿಕೊಂಡರು.
‘ಸರ್ಕಾರದ ಖಾತೆಗಳು ಪಾರದರ್ಶಕವಾಗಿದ್ದರೆ, ಹಣಕಾಸಿನ ಸ್ಥಿತಿಯ ಸತ್ಯವು ಸ್ಪಷ್ಟವಾಗುತ್ತದೆ. ಇನ್ನು ಅಮೆರಿಕ ಮೂಲದ ‘ಹಿಂಡೆನ್ಬರ್ಗ್’ ರಿಸರ್ಚ್ (Hindenburg’ Research)ಕಳೆದ ವರ್ಷ ಅದಾನಿ
ಗ್ರೂಪ್ನ ಹಣಕಾಸಿನ ಸ್ಥಿತಗತಿಯನ್ನು ಹೇಗೆ ಬೆಳಕಿಗೆ ತಂದಿತು ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ. ಭಾರತದ ಅತಿ ದೊಡ್ಡ ವ್ಯಾಪಾರ ಸಮೂಹಗಳ ಲೆಕ್ಕಪತ್ರ ವಂಚನೆ ಮತ್ತು ಇತರ ಸಮಸ್ಯೆಗಳ
ಆಪಾದನೆಗಳು ಅದಾನಿ ಗುಂಪಿನ ಮೌಲ್ಯಮಾಪನದಲ್ಲಿ ಸುಮಾತು $132 ಬಿಲಿಯನ್ (Billion) ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.
ಒಂದು ದಶಕದ ಹಿಂದಿನ ಬಜೆಟ್ ಮತ್ತು ಇತರ ದಾಖಲೆಗಳ ವಿರುದ್ಧ ಸುಬ್ರಹ್ಮಣ್ಯಂ ಅವರ ಆರೋಪಗಳ ಕುರಿತು ಸ್ವತಂತ್ರವಾಗಿ ಅಲ್ ಜಝೀರಾಗೆ ರಿಪೋರ್ಟರ್ಸ್ ಕಲೆಕ್ಟಿವ್ (Al Jazeera Reporters
Collective) ಚರ್ಚೆಯಲ್ಲಿ ಪರಿಶೀಲಿಸಲಾಗಿದ್ದು, ಸರ್ಕಾರದ ಅನುದಾನಿತ ಮೂಲಸೌಕರ್ಯ ಯೋಜನೆಯಲ್ಲಿ ಹಣಕಾಸಿನ ದುರುಪಯೋಗ ಮತ್ತು ವಂಚನೆಯ ವಿವರಗಳನ್ನು ಬಹಿರಂಗಪಡಿಸಿ ಅದನ್ನು
“ತಮಾಷೆಯ ಪ್ರಕರಣ” ಎಂದು ಸುಬ್ರಹ್ಮಣ್ಯಂ ಅವರು ಉಲ್ಲೇಖಿಸಿದ್ದಾರೆ.
ದಿ ರಿಪೋರ್ಟರ್ಸ್ ಕಲೆಕ್ಟಿವ್ ಪ್ರಧಾನ ಮಂತ್ರಿ ಕಚೇರಿಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದ ಗಂಟೆಗಳ ನಂತರ, ಸಿಎಸ್ಇಪಿ ಯೂಟ್ಯೂಬ್ ಚಾನೆಲ್ (CSEP YouTube Channel)ನಲ್ಲಿ ವಿಚಾರ ಸಂಕಿರಣದ
ವೀಡಿಯೋ ವೀಕ್ಷಣೆಯನ್ನು ಕಡಿತಗೊಳಿಸಲಾಯಿತು. ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದ ನೇರಪ್ರಸಾರ ವಿಡಿಯೋ 500 ಕ್ಕಿಂತ ಕಡಿಮೆ ವೀಕ್ಷಣೆ ಕಂಡಿದೆ. ಸುಬ್ರಹ್ಮಣ್ಯಂ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್ನ
ವಿವರವಾದ ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ ಪಿಎಂಒ (PMO) ಈವರೆಗೆ ಪ್ರತಿಕ್ರಿಯಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಅಲ್ ಝಜೀರಾ ಅವರದಿಯ ಕುರಿತು ಆತಂಕ ವ್ಯಕ್ತಪಡಿಸಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು,
‘ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಸೆಸ್ ಮತ್ತು ಸರ್ಚಾರ್ಜ್ಗಳ ಸಂಗ್ರಹದಲ್ಲಿನ ಸ್ಥಿರವಾದ ಹೆಚ್ಚಳವು ಕರ್ನಾಟಕದಂತಹ ರಾಜ್ಯಗಳ ಆದಾಯದ ಸರಿಯಾದ ಪಾಲನ್ನು ಕಸಿದುಕೊಳ್ಳುವ ತಂತ್ರವಾಗಿ
ಹೊರಹೊಮ್ಮಿದೆ. ಮಾಲಿನಿ ಚಕ್ರವರ್ತಿ ಅವರು ವಿವರಿಸಿರುವ ಈ ವಿಧಾನವು, ರಾಜ್ಯದ ಹಣಕಾಸಿನ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಹೆಚ್ಚಿಸಲು ಲೆಕ್ಕಾಚಾರದ ತಂತ್ರವನ್ನು ಪ್ರದರ್ಶಿಸುತ್ತದೆ.
2011-12ರಲ್ಲಿ ಒಟ್ಟು ತೆರಿಗೆಗಳ ಶೇ.10.4ರಿಂದ 2021-22ರ ವೇಳೆಗೆ ಶೇ.18.4ಕ್ಕೆ ಸೆಸ್ ಮತ್ತು ಸರ್ಚಾರ್ಜ್ಗಳ ಪಾಲು ಗಣನೀಯವಾಗಿ ಏರಿಕೆಯಾಗಲು ಬಿಜೆಪಿ (BJP) ಸರ್ಕಾರದ ಆರ್ಥಿಕ
ತಂತ್ರಗಳು ಕಾರಣವಾಗಿವೆ’ ಎಂದು ಆರೋಪಿಸಿದ್ದಾರೆ.