ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಪಾವತಿಸಿದ ‘ಪುಷ್ಪಾರಾಜ್’!

pushpa raj

ನಿರ್ದೇಶಕ ಸುಕುಮಾರ್ ಅವರ ಪುಷ್ಪ ದಿ ರೈಸ್(Pushpa D Rise) ಯಶಸ್ಸಿನಲ್ಲಿ ನಟ(Actor) ಅಲ್ಲು ಅರ್ಜುನ್(Allu Arjun) ಖುಷಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿರುವ ಸ್ಟೈಲೀಶ್ ಸ್ಟಾರ್(Stylish Star) ಅಲ್ಲು ಅರ್ಜುನ್, ಇತ್ತೀಚೆಗಷ್ಟೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ.

ಅಲ್ಲು ಅರ್ಜುನ್ ಅವರ ರೇಂಜ್ ರೋವರ್ ಎಸ್‌ಯುವಿಯಲ್ಲಿ ಟಿಂಟೆಡ್ ವಿಂಡೋ ಶೀಲ್ಡ್‌ಗಳನ್ನು ಬಳಸಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 700 ರೂ. ದಂಡ ಪಾವತಿಸುವಂತೆ ತಿಳಿಸಿದ್ದು, ಚಲನ್‌ ಜಾರಿ ಮಾಡಿದೆ. ಈ ಹಿಂದೆ, ಜೂನಿಯರ್ ಎನ್ಟಿಆರ್, ಮನೋಜ್ ಮಂಚು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರಿಗೂ ಕೂಡ ಇದೇ ರೀತಿ ದಂಡವನ್ನು ಪೊಲೀಸರು ವಿಧಿಸಿದ್ದರು. ಅಲ್ಲು ಅರ್ಜುನ್ ಈಗ ಪುಷ್ಪ : ದಿ ರೂಲ್ ೨ನೇ ಭಾಗದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

ಈ ಚಿತ್ರವು ಮಾರ್ಚ್‌ನಲ್ಲಿ ತೆರೆಗೆ ಬರಬೇಕಿತ್ತು, ಆದ್ರೆ ಈಗ ಅದನ್ನು ಮತ್ತೊಮ್ಮೆ ಮುಂದೂಡಲಾಗಿದೆ. ವರದಿಗಳ ಪ್ರಕಾರ, ಕಪ್ಪು ಬಣ್ಣದ ಕಿಟಕಿಯ ಶೀಲ್ಡ್‌ಗಳನ್ನು ಬಳಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ನಿಯಮ ಪಾಲಿಸದಿದ್ದಕ್ಕೆ 700 ರೂಪಾಯಿ ದಂಡ ಕಟ್ಟುವಂತೆ ಸೂಚಿಸಿದರು ಎನ್ನಲಾಗಿದೆ. ವಾಹನದೊಳಗೆ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಲು ಟಿಂಟೆಡ್ ಗ್ಲಾಸ್ ಮತ್ತು ಸನ್ ಫಿಲ್ಮ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ.

ಪುಷ್ಪಾ ನಂತರ ಅಲ್ಲು ಅರ್ಜುನ್ ಕೈಯಲ್ಲಿ ಸಾಲು ಸಾಲು ಹೊಸ ಸಿನಿಮಾಗಳು ಕೈಯಲಿದ್ದು, ಸುಮಾರು ಐದು ಚಿತ್ರಗಳು ಮುಂದಿವೆ ಎಂದು ತಿಳಿದುಬಂದಿದೆ. ವೇಣು ಶ್ರೀರಾಮ್ ಅವರೊಂದಿಗೆ ಐಕಾನ್ ಆಗಿ, ಕೊರಟಾಲ ಶಿವ, ಎಆರ್ ಮುರುಗದಾಸ್, ಬೋಯಪತಿ ಶ್ರೀನು ಮತ್ತು ಪ್ರಶಾಂತ್ ನೀಲ್ ಅವರೊಂದಿಗೆ ತಲಾ ಒಂದು ಚಿತ್ರ ಕಾಯ್ದುನಿಂತಿವೆ. ಅಲ್ಲು ಅರ್ಜುನ್ ಶೀಘ್ರದಲ್ಲೇ ತಮ್ಮ ಮುಂಬರುವ ಚಿತ್ರಗಳನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

Exit mobile version