“2023ರ ರಾಜಸ್ಥಾನ ಚುನಾವಣೆಯ ಮೇಲೆ ಬಿಜೆಪಿ ಚಿತ್ತ” ; ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ

cONGRESS

Rajasthan : ಮುಂದಿನ ವರ್ಷ ರಾಜಸ್ಥಾನದಲ್ಲಿ (Rajasthan) ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು (Vidhansabha Election) ಗಮನದಲ್ಲಿಟ್ಟುಕೊಂಡು,

ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ (Amit Shah) ಅವರು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಬಿಜೆಪಿ ಶ್ರೇಣಿಯನ್ನು ಒಟ್ಟುಗೂಡಿಸಲು ಮತ್ತು ಅವರನ್ನು ಚುನಾವಣಾ ಕ್ರಮಕ್ಕೆ ತರಲು ತೊಡಗಿದ್ದಾರೆ.

ಗಮನಾರ್ಹವಾಗಿ, ಅಮಿತ್ ಶಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಅವರ ತವರು ನೆಲವಾದ ಜೋಧ್‌ಪುರದಲ್ಲಿ(Jodhpur) ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿ ಸಮಿತಿಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದು, ನಂತರ 25,000 ಕ್ಕೂ ಹೆಚ್ಚು ಬೂತ್ ಕಾರ್ಯಕರ್ತರು ಭಾಗವಹಿಸುವ ಮಹಾಬೂತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

https://youtu.be/GPrcd5Rhz2k

ಅಮಿತ್ ಶಾ ಅವರ ಕಾರ್ಯಸೂಚಿಯಲ್ಲಿ ಎರಡು ದಿನಗಳ ರಾಜಸ್ಥಾನ ಪ್ರವಾಸಕ್ಕಾಗಿ ಶುಕ್ರವಾರ ಸಂಜೆ ಅಮಿತ್ ಶಾ ಜೈಸಲ್ಮೇರ್‌ಗೆ ಬಂದಿಳಿದರು.

ವಾಯುಪಡೆ ನಿಲ್ದಾಣದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರನ್ನು ಬರಮಾಡಿಕೊಂಡರು.

ಗೃಹ ಸಚಿವರು ದಬ್ಲಾ (ಜೈಸಲ್ಮೇರ್) ದಕ್ಷಿಣ ವಲಯದ ಪ್ರಧಾನ ಕಚೇರಿಯಲ್ಲಿ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಬಿಎಸ್ಎಫ್ ಅಧಿಕಾರಿಗಳ ಸಂಸ್ಥೆಯಲ್ಲಿ ಒಂದು ರಾತ್ರಿ ಕಳೆದರು.

ಇಂದು ಶನಿವಾರ ಬೆಳಗ್ಗೆ ಅಮಿತ್ ಷಾ ಅವರು ತನೋಟ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಟನೋಟ್ ಆವರಣದಲ್ಲಿ ಗಡಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಬಳಿಕ ಜೋಧಪುರಕ್ಕೆ ತೆರಳಿ, ರಾಜಸ್ಥಾನದ ಜನರಿಂದ ಭವ್ಯ ಸ್ವಾಗತವನ್ನು ಸ್ವೀಕರಿಸಿದ್ದಾರೆ ಮತ್ತು 1,500 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು,

ಮೋಟಾರ್ ಸೈಕಲ್‌ಗಳಲ್ಲಿ ಕೇಸರಿ ಪೇಟವನ್ನು ಧರಿಸಿ ಅವರನ್ನು ರ್ಯಾಲಿಯ ರೂಪದಲ್ಲಿ ವಿಮಾನ ನಿಲ್ದಾಣದಿಂದ ಸಭೆಯ ಸ್ಥಳಕ್ಕೆ ಕರೆದೊಯ್ಯದರು ಎಂದು ಪಕ್ಷದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/sourav-ganguly-appreciates-virat-kohli/

ಮೊದಲಿಗೆ ಹೋಟೆಲ್‌ನಲ್ಲಿ ಪಕ್ಷದ ಒಬಿಸಿ ಮೋರ್ಚಾದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಾದ ನಂತರ ಜೋಧಪುರದ ದಸರಾ ಮೈದಾನದಲ್ಲಿ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಾರ್ವಜನಿಕ ಸಭೆ ನಡೆಯಲಿದೆ.

ಸಭೆಗೆ ಪಕ್ಷವು ತನ್ನ ಬೂತ್ ಮಟ್ಟದ ಕಾರ್ಯಕರ್ತರನ್ನು ಇಡೀ ವಿಭಾಗದಿಂದ ಸಜ್ಜುಗೊಳಿಸುತ್ತಿದೆ.

ಜೋಧಪುರವನ್ನು ರಾಜಸ್ಥಾನದ ಮಾರ್ವಾರ್ ಪ್ರದೇಶದ ಹೃದಯಭೂಮಿ ಎಂದು ಪರಿಗಣಿಸಲಾಗಿದೆ ಮತ್ತು ಪ್ರಮುಖವಾಗಿ ಇದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರೂರು.

ಅಮಿತ್ ಶಾ ಒಬಿಸಿ ಮೋರ್ಚಾವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ, 2023 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಪಕ್ಷದ ಒಬಿಸಿ ಮತ ಬ್ಯಾಂಕ್ ಅನ್ನು ಬಲಪಡಿಸುವ ಗುರಿಯನ್ನು ಬಿಜೆಪಿ ಹೊಂದಿದೆ.

ರಾಜಸ್ಥಾನದ ಜನಸಂಖ್ಯೆಯ 52 ಪ್ರತಿಶತ OBC ಗಳು, ಇದರಲ್ಲಿ 11 ಪ್ರತಿಶತ ಜಾಟರು.

ರಾಜ್ಯದ 150 ಸ್ಥಾನಗಳಲ್ಲಿ ಸಮುದಾಯದ ಪ್ರಭಾವವಿದೆ. ಸದ್ಯಕ್ಕೆ, ರಾಜಸ್ಥಾನದಲ್ಲಿ 55 ಒಬಿಸಿ ಶಾಸಕರಿದ್ದು, ಅವರಲ್ಲಿ 43 ಜಾಟ್‌ಗಳು. ಇದಲ್ಲದೆ, ಮರುಭೂಮಿ ರಾಜ್ಯದ 200 ವಿಧಾನಸಭಾ ಕ್ಷೇತ್ರಗಳಲ್ಲಿ 33 ಜೋಧ್‌ಪುರ ವಿಭಾಗದಲ್ಲಿ 10 ಜೋಧ್‌ಪುರ ಜಿಲ್ಲೆಯಲ್ಲಿವೆ.

ಇದನ್ನೂ ಓದಿ : https://vijayatimes.com/ed-raid-on-gaming-app-scam/

ಇವುಗಳಲ್ಲಿ ಪ್ರಸ್ತುತ ಬಿಜೆಪಿ 14, ಕಾಂಗ್ರೆಸ್ 17, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಸ್ವತಂತ್ರರು ತಲಾ ಒಂದು ಸ್ಥಾನವನ್ನು ಹೊಂದಿದ್ದಾರೆ.

Exit mobile version