ಕಳಪೆ ಕಾಮಗಾರಿಯಿಂದ ಕುಸಿಯುವ ಹಂತದಲ್ಲಿರುವ ನೂತನ ಅಂಗನವಾಡಿ ಕಟ್ಟಡ

 ಇಷ್ಟೊಂದು ಕಳಪೆ ಕಾಮಗಾರಿನಾ? ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕುಸಿಯುವ ಹಂತದಲ್ಲಿದೆ. ಕಂದಮ್ಮಗಳ ಪ್ರಾಣ ಅಪಾಯದಲ್ಲಿದೆ !

ಲ್ಯಾಂಡ್‌ ಆರ್ಮಿಯ ಭ್ರಷ್ಟ ಅಧಿಕಾರಿಗಳಿಗೆ ಹೆತ್ತವರು ಈ ರೀತಿ ಥುಪು ಥುಪು ಅಂತ ಉಗೀತ್ತಿದ್ದಾರೆ. ಯಾಕೆ ಗೊತ್ತಾ? ಇಲ್ಲಿ ಇನ್ನೂ ಉದ್ಘಾಟನೆಯಾಗದ ಅಂಗನವಾಡಿ ಕಟ್ಟಡವೇ ಕುಸಿಯೋ ಹಂತದಲ್ಲಿದೆ. ಹೊಸ ಅಂಗನವಾಡಿ ಕಟ್ಟಡದಲ್ಲೇ ಕಂದಮ್ಮಗಳ ಜೀವ ಅಪಾಯದಲ್ಲಿದೆ ಅನ್ನೋ ಕಾರಣಕ್ಕೆ ಹೆತ್ತವರು ಅಧಿಕಾರಿಗಳ ಮೇಲೆ ಫುಲ್‌ ಗರಂ ಆಗಿದ್ದಾರೆ.

ಇಂಥಾ ಕಚಡಾ, ಕಳಪೆ ಕಾಮಗಾರಿ ಮಾಡಿರೋದು ಎಲ್ಲಿ ಗೊತ್ತಾ? ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್‌ ಪುರದ ಅಂಗನವಾಡಿಯಲ್ಲಿ. ಈ  ಕಳಪೆ ಕಾಮಗಾರಿಯನ್ನು ಮಾಡಿರೋದು ಲ್ಯಾಂಡ್ ಆರ್ಮಿ. ಹೊಸ ಕಟ್ಟಡದ ಗೋಡೆಗಳು ಬಿರುಕು ಬಿದ್ದಿವೆ. ಮೇಲ್ಛಾವಣಿ ಬೆಂಡಾಗಿದೆ.

ಇನ್ನು ಕಳಪೆ ಕಾಮಗಾರಿ ಯಾರಿಗೂ ಗೊತ್ತಾಗಬಾರದು ಅಂತ ಸುಣ್ಣ ಬಣ್ಣ ಬಳಿದು ಮುಚ್ಚಿ ಬಿಟ್ಟಿದ್ದಾರೆ. ಕಾಮಗಾರಿಯ ಆರಂಭದಲ್ಲೇ ಸಾರ್ವಜನಿಕರು ಕಳಪೆ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೆ ಕಾಮಗಾರಿಯ ಉಸ್ತುವಾರಿ ವಹಿಸಿರುವ ಇಂಜಿನಿಯರ್‌ ಉಡಾಫೆ ಉತ್ತರವನ್ನು ಕೊಟ್ಟು ಗ್ರಾಮಸ್ಥರ ಬಾಯಿ ಮುಚ್ಚಿಸಿದ್ದಾರೆ. ಆದ್ರೆ ಈಗ ಈ ಕಟ್ಟಡವೇ ಒಂದು ವರ್ಷದೊಳಗೆ ಬೀಳುವಷ್ಟು ಕಳಪೆ ಮಾಡಿ ಕಟ್ಟಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿರುವ ಈ ಕಟ್ಟಡದ ಕಳಪೆ ಕಾಮಗಾರಿಗೆ ಭ್ರಷ್ಟ ಅಧಿಕಾರಿಗಳ ಕಮಿಷನ್‌ ದಂಧೆಯೇ ಕಾರಣ ಅನ್ನೋದು ಸ್ಪಷ್ಟ. ಹಾಗಾಗಿ ಕಮಿಷನ್‌ ತಿಂದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.

Exit mobile version