Chennai: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು (Annamalai Emotional Statement) ತಮಿಳುನಾಡಿನಲ್ಲಿ (Tamilnadu) ಸ್ಫರ್ಧಿಸಿದ್ದ ಅಣ್ಣಾಮಲೈ
ನೇತೃತ್ವದ ಬಿಜೆಪಿಗೆ ತೀವ್ರ ನಿರಾಸೆಯಾಗಿದ್ದು ಸಮೀಕ್ಷೆಗಳ ಪ್ರಕಾರ 1ರಿಂದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಹೇಳಲಾಗಿತ್ತು. ಆದರೆ ಎಲ್ಲ ಸಮೀಕ್ಷೆಗಳ ರಿಸಲ್ಟ್ ತಲೆಕೆಳಗಾದ ಕಾರಣ
ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಎಲ್ಲಾ (Annamalai Emotional Statement) ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ.
![Annamalai Emotional Statement](https://sp-ao.shortpixel.ai/client/to_webp,q_glossy,ret_img,w_1024,h_768/https://vijayatimes.com/wp-content/uploads/2024/06/face-off-decoding-the-two-sides-of-kalaignar-karunanidhis-personality-1024x768.jpg)
ಲೋಕ ಸಭಾ ಚುನಾವಣೆಯಲ್ಲಿ ಕೊಯಂಬತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ (Annamalai) 1.18 ಲಕ್ಷ ಮತಗಳ ಅಂತರದಿಂದ ಪರಾಜಯಗೊಂಡರು . ಇನ್ನು ಇದೇ ವಿಷಯವಾಗಿ
ಡಿಎಂಕೆ ನಾಯಕಿ, ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ, ಗೆದ್ದೆ ಗೆಲ್ಲುತ್ತೇವೆ ಅಂದುಕೊಂಡಿದ್ದರು ಆದರೆ ಅತಿಯಾದ ಆತ್ಮವಿಶ್ವಾಸ ದ ಕಾರಣದಿಂದಲೇ ಅಣ್ಣಾಮಲೈ ಸೋಲಾಗಿದೆ ಎಂದು
ಗೇಲಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಣ್ಣಾಮಲೈ, ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಸುಲಭದಲ್ಲಿ ಗೆಲ್ಲುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ ಹೀಗಾಗಿ ಗೆಲ್ಲೋದಕ್ಕೆ ಸ್ವಲ್ಪ
ಸಮಯ ಬೇಕು ಜನಕ್ಕೆ ಮೊದಲು ನನ್ನ ಪರಿಚಯವಾಗಬೇಕು ಎಂದು ಟಾಂಗ್ ನೀಡಿದ್ದಾರೆ.
ಮೊದಲೆಲ್ಲಾ ತಮಿಳುನಾಡಿನಲ್ಲಿ ಬಿಜೆಪಿ (BJP) ಹೆಸರು ಕೇಳಿದರೆ ಆಗದ ಮನಸ್ಥಿತಿಯಿತ್ತು ಆದರೆ ಈಗ ನಮ್ಮ ಪಕ್ಷದ ಮೇಲೆ ಜನರಿಗೆ ನಂಬಿಕೆ ಮೂಡಿದೆ ಹಾಗಾಗಿ ಮತದಾನ ಹೆಚ್ಚಾಗಿದ್ದು
ಶೇಕಡ 11ಕ್ಕೆ ಬಂದು ನಿಂತಿದ್ದೇವೆ. ಮುಂಬರುವ ವರ್ಷಗಳಲ್ಲಿ ಪಕ್ಷದ ಮತಗಳಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಬಾರಿ 12 ಸ್ಥಾನಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದೆ. 2014ಕ್ಕೆ ಹೋಲಿಸಿದರೆ
ಬಿಜೆಪಿ ಡಬಲ್ ಮತಗಳಿಸಿದೆ. ನಮ್ಮ ಕಾರ್ಯಕರ್ತರು ಗ್ರೌಂಡ್ ಲೆವೆಲ್ (Ground Level) ನಲ್ಲಿ ಕೆಲಸ ಮಾಡಿದ್ದು ಪಕ್ಷ ಗಟ್ಟಿಯಾಗುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ
ಇನ್ನಷ್ಟು ಉತ್ತಮ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದಿದ್ದಾರೆ.
ಇದನ್ನು ಓದಿ: ಬೆಂಗಳೂರಿಗರೆ ಗಮನಿಸಿ ನಾಳೆ, ನಾಡಿದ್ದು ಕಾವೇರಿ ನೀರು ಬರಲ್ಲ!