‘ಕೆಂಪು ಇರುವೆ ಚಟ್ನಿ’ ಕೋವಿಡ್‌ಗೆ ಮದ್ದಲ್ಲ. ಅದನ್ನು ಪಾರಂಪರಿಕ ಔಷಧಿಯಾಗಿ ಬಳಸುವಂತೆ ಆದೇಶಿಸಲು ಸಾಧ್ಯವಿಲ್ಲ: ಸುಪ್ರೀಂ

ಕೋರೋನಾ ತಡೆಗೆ ಕೆಂಪು ಇರುವೆ ಚಟ್ನಿಯನ್ನು ಮದ್ದಾಗಿ ಬಳಸುವಂತೆ ಆದೇಶಿಸಲು ಸಾಧ್ಯವಿಲ್ಲ. ಅದನ್ನು ಪಾರಂಪರಿಕ ಔಷಧಿಯಂತೆ ಬಳಸುವಂತೆ ಹೇಳಲು ಆಗುವುದಿಲ್ಲ ಅಂತ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಹೊಸದಿಲ್ಲಿ: ಇಡೀ ದೇಶಕ್ಕೆ ಕೋವಿಡ್ -19 ಚಿಕಿತ್ಸೆಗಾಗಿ ಸಾಂಪ್ರದಾಯಿಕ ಔಷಧಿಗಳು ಅಥವಾ ಮನೆಮದ್ದುಗಳನ್ನು ಬಳಸಲು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಕೊರೋನ ವೈರಸ್‌ಗೆ ಪರಿಹಾರವಾಗಿ ‘ಕೆಂಪು ಇರುವೆ ಚಟ್ಟೆ, ಬಳಸಲು ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸಿದೆ.

“ಬಹಳಷ್ಟು ಸಾಂಪ್ರದಾಯಿಕ ಔಷಧ ಪದ್ಧತಿಗಳಿರುವುದನ್ನು ನೀವು ನೋಡುತ್ತೀರಿ, ನಮ್ಮ ಮನೆಗಳಲ್ಲಿಯೂ ಸಹ ನಾವು ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಹೊಂದಿದ್ದೇವೆ. ಈ ಪರಿಹಾರಗಳು ನಿಮ್ಮ ಸ್ವಂತ ಬಳಕೆಗಾಗಿ ಇದೆ ಹಾಗೂ ಇದರ ಪರಿಣಾಮವನ್ನು ನೀವೇ ಅನುಭವಿಸಿ ಅರಿಯಬೇಕಾದವರು, ಆದರೆ ದೇಶದಾದ್ಯಂತ ಈ ಸಾಂಪ್ರದಾಯಿಕ ಔಷಧಿಯನ್ನು ಅನ್ವಯಿಸುವಂತೆ ನಾವು ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ದಿವ್ಯ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೂಹಿ, ಅವರ ಪೀಠ ಹೇಳಿದೆ.

ಒಡಿಶಾದ ಬುಡಕಟ್ಟು ಸಮುದಾಯದವರಿಗೆ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಿ ಅಂತ ಅರ್ಜಿದಾರರಾದ ನಯಾಧರ್ ಪಾಧಿಯಾಲ್ ಅವರಿಗೆ ಸೂಚಿಸಿದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಕೆಂಪು ಇರುವೆ ಚಟ್ನಿ ಕೆಂಪು ಇರುವೆಗಳು ಮತ್ತು ಹಸಿರು ಮೆಣಸಿನಕಾಯಿಗಳ ಮಿಶ್ರಣವಾಗಿದ್ದು, ಜ್ವರ, ಕೆಮ್ಮು, ನೆಗಡಿ, ಆಯಾಸ, ಉಸಿರಾಟದ ಸಮಸ್ಯೆ ಇತ್ಯಾದಿಗಳ ಚಿಕಿತ್ಸೆಗಾಗಿ ಒಡಿಶಾ ಮತ್ತು ಛತ್ತೀಸಗಡ ಸೇರಿದಂತೆ ದೇಶದ ಬುಡಕಟ್ಟು ವಲಯಗಳಲ್ಲಿ ಸಾಂಪ್ರದಾಯಿಕವಾಗಿ ಔಷಧವೆಂದು ಪರಿಗಣಿಸಲಾಗಿದೆ.

ಕೆಂಪು ಇರುವೆ ಚಟ್ನಿ ಔಷಧೀಯ ಮೌಲ್ಯವನ್ನು ಹೊಂದಿದೆ. ಏಕೆಂದರೆ ಇದು ಫಾರ್ಮಿಕ್ ಆಸಿಡ್, ಪ್ರೋಟೀನ್, ಕಾಲ್ಸಿಯಂ, ವಿಟಮಿನ್ ಬಿ 12 ಮತ್ತು ಸತುವಿನ ಅಂಶವನ್ನು ಹೊಂದಿದೆ ಮತ್ತು ಕೋವಿಡ್ ಗೆ ಇದು ಪರಿಣಾಮಕಾರಿಯಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದರು.

Exit mobile version