ಶಾರೂಖ್ ಪುತ್ರನಿಗೆ ಬಿಡುಗಡೆಯ ಭಾಗ್ಯ

ಮುಂಬೈ ಅ 28 : ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರೂಖ್ ಪುತ್ರ ಆರ್ಯನ್‌ ಖಾನ್‌ಗೆ ಮುಂಬೈ ನ್ಯಾಯಲಯ ಜಾಮೀನು ಮಂಜೂರು ಮಾಡಿದೆ.

ಐಷಾರಾಮಿ ಹಡಗೊಂದರಲ್ಲಿ ಡ್ರಗ್ಸ್​ ಪಾರ್ಟಿ ಮಾಡಿದ್ದ ಆರೋಪದ ಮೇರೆಗೆ ಬಂಧಿಸಲಾಗಿದ್ದ ನಟ ಶಾರುಖ್​ ಖಾನ್​​​ ಪುತ್ರ ಆರ್ಯನ್​​ ಖಾನ್​​ಗೆ ಜಾಮೀನು ನೀಡಿ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಇಂದು ಈ ಸಂಬಂಧ ಆದೇಶ ಹೊರಡಿಸಿರುವ ಬಾಂಬೆ ಹೈಕೋರ್ಟ್​ ಆರ್ಯನ್​​ ಖಾನ್​​ಗೆ ಜಾಮೀನು ನೀಡಿದೆ. ನಾಳೆ ಮಧ್ಯಾಹ್ನ ವೇಳೆಗೆ ಜಾಮೀನಿನ ವಿಸ್ತೃತ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ಆರ್ಯನ್ ಪರ ವಾದ ಮಂಡನೆ  ವಕೀಲ ಮುಕುಲ್‌ ರೋಹ್ಟಗಿ. ‘ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಸೂಕ್ತ ಕಾರಣ ನೀಡದೇ ಬಂಧಿಸಲಾಗಿದೆ.  ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಯಾವ ಕಾರಣಕ್ಕೆ ಬಂಧನವೆಂದು ತಿಳಿದುಕೊಳ್ಳುವ ಹಕ್ಕಿದೆ. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ’ ಎಂದು ಮುಕುಲ್‌ ರೋಹ್ಟಗಿ ಕೋರ್ಟ್​ಗೆ ತಿಳಿಸಿದ್ದರು.

Exit mobile version