Ahmadabad: ಧರ್ಮದ ಆಧಾರದಲ್ಲಿ ಮೇಲೆ ಮೀಸಲಾತಿ ನೀಡುವುದಿಲ್ಲ ಎಂದು (Modi challenge to Congress) ಲಿಖಿತ ರೂಪದಲ್ಲಿ ಘೋಷಣೆ ಮಾಡುವಂತೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ
ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದ್ದಾರೆ. ನಾನು ಜೀವಂತವಾಗಿ ಇರುವವರೆಗೂ ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನ ನೀಡಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ
ಮಾಡಲು ಯಾರಿಗೂ ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ನಾನು ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದಾರೆ.
ಗುಜರಾತ್ನ (Gujarat) ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ತನ್ನ ಮತಬ್ಯಾಂಕ್
ಗಟ್ಟಿ ಮಾಡಿಕೊಳ್ಳಲು ಮುಸ್ಲಿಂಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಯೋಜನೆ ರೂಪಿಸಿಕೊಂಡಿದೆ. ಆದರೆ ST, SC, OBC ಸಮುದಾಯ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾದ
ಮೀಸಲಾತಿ ವ್ಯವಸ್ಥೆಯ ರಕ್ಷಣೆಗೆ ನಾವು (Modi challenge to Congress) ಕಟಿಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ (Congress) ಹಾಗೂ ಮೈತ್ರಿಕೂಟದ ನಾಯಕರಿಗೆ ಧೈರ್ಯವಿದ್ದರೆ ಧರ್ಮಾಧಾರಿತ ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರುವುದಿಲ್ಲ ಎಂದು ಲಿಖಿತವಾಗಿ ದೇಶದ ಜನತೆಗೆ
ಭರವಸೆ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದ್ದಾರೆ.
ಬಿಜೆಪಿಯು (BJP) 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ದೇಶದಲ್ಲಿ ಒಂದೇ ಸಂವಿಧಾನ ಜಾರಿಗೊಳಿಸಿದೆ. ಲೋಕಸಭೆಯಲ್ಲಿ ಎನ್ಡಿಎ 360 ಸಂಸದರನ್ನು ಹೊಂದಿದೆ. BJD, YSR ಕಾಂಗ್ರೆಸ್ನಂತಹ
NDA ಭಾಗವಾಗಿಲ್ಲದ ಪಕ್ಷಗಳು ಈಗ ನಮಗೆ ಬೆಂಬಲ ನೀಡಿವೆ. ಹೀಗಾಗಿ ನಾವು 400 ಸೀಟುಗಳನ್ನು ದಾಟುತ್ತೇವೆ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ಕನಸು ಭಸ್ಮ :
ಕಾಂಗ್ರೆಸ್ ಪಕ್ಷ ಡೀಪ್ಫೇಕ್ ವಿಡಿಯೋ (Deep fake) ಮೂಲಕ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಮೊದಲ 2 ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಕನಸು ಭಸ್ಮವಾಗಿದೆ. ಸೋಲುವ
ಹತಾಶೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಸಮಾಜದಲ್ಲಿ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಪೆನ್ ಡ್ರೈವ್ನಲ್ಲಿ ಇರುವ ವಿಷಯಗಳನ್ನ ಹರಡಿದ್ದು ಡಿಕೆ ಶಿವಕುಮಾರ್ ಆಗಿದ್ರೆ ಕಠಿಣ ಶಿಕ್ಷೆಯಾಗಬೇಕು: ನಟ ಚೇತನ್