ನಟ ಜೈಜಗದೀಶ್ ಅವರಿಂದ ವ್ಯಕ್ತಿಯ ಮೇಲೆ ಹಲ್ಲೆ? ಪೊಲೀಸ್ ಠಾಣೆಯಲ್ಲಿ ದೊರು ದಾಖಲು

Jai Jagadish

ನಟ  ಜೈಜಗದೀಶ್ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಒಬ್ಬ ವ್ಯಕ್ತಿ ನಾಗಮಂಗಲ ತಾಲ್ಲೂಕಿನ ಬೆಳ್ಳೊರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.

ಜೈಜಗದೀಶ್ ಅವರಿಂದ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಜಯರಾಮೇಗೌಡ ಎಂಬುವವರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ . ದೂರು ದಾಖಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ . ಜೈ ಜಗದೀಶ್ ಅವರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಜಯರಾಮೇಗೌಡ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಅಷ್ಟೇ ಅಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಜಯರಾಮೇಗೌಡ ಆರೋಪಿಸಿದ್ದಾರೆ.

ಈ ಘಟನೆ ನಡೆದದ್ದು ಜೂನ್ 5 ರಂದು . ಜಯರಾಮೇಗೌಡ  ಎಂಬ ವ್ಯಕ್ತಿ ಬಸ್ಸಿನಿಂದ ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ  ಜೈಜಗದೀಶ್ ಅವರು  ಇಂದಿನಿಂದ ಕಾರಿನಲ್ಲಿ ಬಂದರು  . ಈ ಸಮಯದಲ್ಲಿ ಬಸ್ಸಿನಿಂದ ಬಾಟಲಿ ಏಕೆ ಎಸೆಯುತ್ತಿದ್ದೀರಾ ಎಂದು ಪ್ರಶ್ನಿಸಿದ ಅಷ್ಟೇ ಅಲ್ಲದೆ , ಕೆಟ್ಟ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಕಾರಿನಿಂದ ಇಳಿದ ಜೈ ಜಗದೀಶ್ ರವರು ಜಯರಾಮೇಗೌಡ ರವರಿಗೆ  ಕೆಟ್ಟ ಶಬ್ದಗಳಲ್ಲಿ  ನಿಂದಿಸಿ , ಬಟ್ಟೆ ಹರಿದು, ಕಪಾಳಕ್ಕೆ ಹೊಡೆದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಇವರು. ಜೈ ಜಗದೀಶ್ ರವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
Exit mobile version