Bangalore: ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ರೇಣುಕಾಸ್ವಾಮಿ ಕೊಲೆ (Renukaswamy murder) ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ದರ್ಶನ್ ಮತ್ತು ಗ್ಯಾಂಗ್ನ (Darshan&Gang) ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲೇ (Annapurneswari Nagar police station) ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಬೆಂಗಳೂರು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಆರೋಪಿ ವಿಚಾರಣೆ ಇರುವ ಪೊಲೀಸ್ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ 144 ಸೆಕ್ಷನ್ (144 Sec) ಜಾರಿ ಮಾಡಲಾಗಿದ್ದು, 200 ಮೀಟರ್ ವ್ಯಾಪ್ತಿಯಲ್ಲಿ 5 ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಜೂನ್ 17ರ ತನಕ ಅನ್ನಪೂರ್ಣೇಶ್ವರಿ ನಗರ (Annapurneswari Nagar) ಪೊಲೀಸ್ ಠಾಣೆಯ ಸುತ್ತಾ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಇಂದು ಕಮಿಷನರ್ ಬಿ.ದಯಾನಂದ್ (Commissioner B. Dayanand) ಅವರು ಭೇಟಿ ನೀಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಿಷೇಧಾಜ್ಞೆ ಜಾರಿಯಾಗುವುದರ ಜೊತೆ ಪೊಲೀಸ್ ಠಾಣೆಯ ಸುತ್ತಾ ಶಾಮಿಯಾನ ಅಳವಡಿಕೆ ಮಾಡಲಾಗಿದೆ. ಹೊರಗಡೆಯಿಂದ ಠಾಣೆ ಒಳಗಡೆ ಏನು ನಡೆಯುತ್ತಿದೆ ಅನ್ನೋದು ಕಾಣದಂತೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ. ಯಾರಿಗೂ ಠಾಣೆಯ ದೃಶ್ಯಾವಳಿಗಳು ಸಿಗದಂತೆ ಶಾಮಿಯಾನದ ಹೊದಿಕೆ ಹಾಕಲಾಗಿದೆ.
ಸ್ಟೇಷನ್ನ ಮುಂಭಾಗ ಪುಂಡರ ಪುಂಡಾಟ!
ನಟ ದರ್ಶನ್ (Darshan) ಬಂಧನವಾಗಿರೋ ಪೊಲೀಸ್ ಠಾಣೆಯ ಸುತ್ತ 144 ಸೆಕ್ಷನ್ ಜಾರಿಯಾಗಿದ್ದರೂ ಅಭಿಮಾನಿಗಳು ಆಗಮಿಸಿದ್ದಾರೆ. ಠಾಣೆಯ ಸುತ್ತ 200 ಮೀಟರ್ (200 meters) ದೂರದಲ್ಲಿ ಯಾರೂ ಗುಂಪು ಸೇರುವಂತಿಲ್ಲ ಎಂದು ಮೈಕ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಠಾಣೆ ಮುಂದೆ ಪುಡಾರಿಯೊಬ್ಬ ಗದ್ದಲ ಮಾಡಿದ್ದ. ಮಾಧ್ಯಮ ಮತ್ತು ಪೊಲೀಸರ ಮಾತುಕತೆ ಮಧ್ಯೆ ಪುಂಡನೊಬ್ಬ ಗಲಾಟೆ ಮಾಡಿದ್ದು, ಗದ್ದಲ ಮಾಡಿದವನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.