• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ವಿಜಯಟೈಮ್ಸ್ ಇಂಪ್ಯಾಕ್ಟ್ ; ಬಂಟ್ವಾಳ ಸೇತುವೆಯ ದುಸ್ಥಿತಿ ನೋಡಲು ದಿಢೀರನೇ ಬಂದ ಅಧಿಕಾರಿಗಳು!

Mohan Shetty by Mohan Shetty
in ರಾಜ್ಯ
Dakshina Kannada
0
SHARES
0
VIEWS
Share on FacebookShare on Twitter

ದಕ್ಷಿಣ ಕನ್ನಡ : ದಕ್ಷಿಣ ಕನ್ನಡದ(Dakshina Kannada) ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ನಿಗಮಕ್ಕೆ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ, ಬಂಟ್ವಾಳ(Bantwala) ತಾಲೂಕಿನ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು( ಕನಸಡ್ಕ ) ಎಂಬಲ್ಲಿ ಇತ್ತೀಚೆಗಷ್ಟೇ 3-4 ತಿಂಗಳಗಳಿಂದ ಆರಂಭಗೊಂಡ ಕಿಂಡಿ ಅಣೆಕಟ್ಟು ಕಾರ್ಯ, ಸೇತುವೆಯ ಕಳಪೆ ಕಾಮಗಾರಿ ದುರಂತದ ಬಗ್ಗೆ ವಿಜಯಟೈಮ್ಸ್ ತಂಡ ಮಾಡಿದ್ದ ವರದಿಗೆ ಅಧಿಕಾರಿಗಳು ಈಗ ದಿಢೀರ್ ಎಚ್ಚೆತ್ತುಕೊಂಡಿದ್ದಾರೆ.

Dam

ವಿಜಯಟೈಮ್ಸ್ ತಂಡ ಮಾಡಿದ್ದ ವರದಿ ಹೀಗಿತ್ತು. “ದುರಂತದಿಂದ ಯಾವುದೇ ಸಾವು ನೋವುಗಳು ಸಂಭವಿಸುವ ಮೊದಲು ಕಾನೂನು ಕ್ರಮಕೈಗೊಳ್ಳಿ. ಬಂಟ್ವಾಳ ತಾಲೂಕಿನ ಶಾಸಕ ರಾಜೇಶ್ ನಾಯ್ಕ್ ರವರ ಅನುದಾನದಲ್ಲಿ ಚೆನ್ನೈ ತೋಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಕೊರಗಟ್ಟೆಯ ಸಜಂಕ ಬೆಟ್ಟು(ಕಳಸಡ್ಕ) ಎಂಬಲ್ಲಿ ಕಿಂಡಿ ಅಣೆಕಟ್ಟು ಹಾಗೂ ಸೇತುವೆಗೆ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 5.40 ಕೋಟಿ ರೂಪಾಯಿ ಮಂಜೂರು ಆಗಿದ್ದು, ಕಾಮಗಾರಿಯು ಈಗಾಗಲೇ 80% ಮುಗಿದಿದೆ.

https://youtu.be/FqcKfS31-lk

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ! ತಡೆಗೋಡೆಯು ಹೊಡೆದು ಹೋಗಿದೆ. ಸಂಪೂರ್ಣ ತಡೆಗೋಡೆಯು ಅಪಾಯ ಮಟ್ಟವನ್ನು ಎದುರಿಸುತ್ತಿದೆ. ಸಾರ್ವಜನಿಕರು ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ತಡೆಗೋಡೆಯ ಸಮೀಪ ಹೋಗದಂತೆ ಮನವಿಯನ್ನು ಮಾಡಿದ್ದೇವೆ.

ಯಾವ ಸಮಯದಲ್ಲಿ ಬೇಕಾದರೂ ದುರಂತ ಸಂಭವಿಸಬಹುದು. ಇದೆಂತಾ ಕಳಪೆ ಕಾಮಗಾರಿ ಶಾಸಕರೇ? ಯಾವುದೇ ದುರಂತಗಳು ನಡೆಯುವ ಮೊದಲು ಕಳಪೆಯಾದ ಕಾಮಗಾರಿಯ ಬಗ್ಗೆ ಇಲಾಖೆ ತಕ್ಷಣವೇ ಕಾನೂನಿನ ಕ್ರಮ ಕೈಗೊಳ್ಳಿ. ಮುಂದಾಗುವ ದುರಂತವನ್ನು ತಪ್ಪಿಸಿ” ಎಂದು ಮನವಿ ಸ್ಥಳೀಯರು ಮನವಿ ಮಾಡಿದ್ದಾರೆ.

Dam danger

ಕಿಂಡಿ ಅಣೆಕಟ್ಟು ಹಾಗೂ ಸೇತುವೆ ತಡೆಗೋಡೆಯು ಅಡಿಪಾಯವು ನದಿಯ( ಸಣ್ಣ ನದಿ, ದೊಡ್ಡದಾದ ತೋಡು ) ನೀರಿನ ಕೆಳಮಟ್ಟದಿಂದ ಕನಿಷ್ಠ 8 ಅಡಿಯಿಂದ ತಡೆಗೋಡೆ ಅಡಿಪಾಯವನ್ನು ಹಾಕಬೇಕು. ಆದರೆ ಈ ತಡೆಗೋಡೆಯ ಅಡಿಪಾಯವು ಮೇಲ್ನೋಟಕ್ಕೆ 1 ಅಡಿ ಅಂತರದಲ್ಲಿದೆ.

ತಡೆಗೋಡೆಯು ಅಡಿಪಾಯದಿಂದ ಹಿಡಿದು ಹಲವು ಕಡೆ ಬಿರುಕು ಬಿಟ್ಟಿದೆ. ಒಟ್ಟಿಗೆ ಸೇತುವೆ ಅಪಾಯ ಮಟ್ಟದಲ್ಲಿದೆ. ಒಂದು ಸೈಡಿನ ತಡೆಗೋಡೆಯು 2 ಇಂಚು ಈಗಾಗಲೇ ಹೊಡೆದು ಹೊರಗೆ ಬಂದಿದೆ, ಯಾವಾಗ ಬೇಕಾದರೂ ದುರಂತ ನಡೆಯಬಹುದು. ಯಾವಕಡೆ ನೀರು ಹರಿಯಬಾರದೆಂದು ತಡೆಗೋಡೆ ಕಟ್ಟಿದ್ದಾರೋ, ಆ ತಡೆಗೋಡೆಯ ಅಡಿಪಾಯದಿಂದಲೇ ನೀರು ಹೊರಗಡೆ ಬರುತ್ತಿದೆ. ಸೇತುವೆಯ ಮೇಲ್ಭಾಗದಲ್ಲಿ ಕೆಲವು ಕಡೆ ಬಿರುಕು ಬಿಟ್ಟಿದೆ.

Dam

ಸಾಮಾನ್ಯ ಒಬ್ಬ ನಾಗರಿಕನು RCC ಮನೆ ಕಟ್ಟುವಾಗ ಕಬ್ಬಿಣದ ಸಲಾಕೆಯನ್ನು 16/20 ಇಂಚಿನ ಸಲಾಕೆಯನ್ನು ಉಪಯೋಗಿಸುತ್ತಾನೆ. ಸರ್ಕಾರದ ಇಷ್ಟು ದೊಡ್ಡ ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯಲ್ಲಿ ಬಳಸಿದ ಕಬ್ಬಿಣದ ಸಲಹೆಯ ಇಂಚು 8-10-12 ಅಲ್ಲವೇ?( ಕಾಮಗಾರಿಯ ಕಿಂಡಿ ಅಣೆಕಟ್ಟಿನ ತಡೆಗೋಡೆಯ ಹಾಗೂ ಸೇತುವೆಯ ತಡೆಗೋಡೆಯಲ್ಲಿ ಕಾಣುವ ಕಬ್ಬಿಣದ ಸಲಾಕೆಯನ್ನು ಗಮನಿಸಬೇಕಾಗಿದೆ)

ಈ ಕಾಮಗಾರಿಯಲ್ಲಿ ಕನಿಷ್ಠ ಎಂದರು 30 ಇಂಚಿನ ಮೇಲ್ಪಟ್ಟ ಕಬ್ಬಿಣದ ಸಲಾಕೆಯನ್ನು ಉಪಯೋಗಿಸಬೇಕಿತ್ತು ಹಾಗೂ ತುರ್ತು ಸ್ಥಳಕ್ಕೆ ಆಗಮಿಸಿ ವೀಕ್ಷಣೆಯನ್ನು ಮಾಡಿ. ಯಾವುದೇ ದುರಂತ ನಡೆಯುವ ಮೊದಲು ಅಧಿಕಾರಿ ವರ್ಗದವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿ ವಿನಂತಿ” ಎಂದು ಪ್ರಕಟಿಸಿತ್ತು.

Dakshina Kannada

ಸಾಮಾಜಿಕ ಜಾಲತಾಣದಲ್ಲಿ ನಮ್ಮ ವರದಿ ನೋಡಿ ಎಚ್ಚೆತ್ತುಕೊಂಡ ಕರ್ನಾಟಕ ಸರಕಾರದ ಸಣ್ಣ ನೀರಾವರಿ ಇಲಾಖೆಯ ಉಪ ವಿಭಾಗದ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಶ್ರೀ ಶಿವ ಪ್ರಸನ್ನ ಹಾಗೂ ಕಾಮಗಾರಿ ನಡೆಸುವ ಗುತ್ತಿಗೆದಾರರ ಜೊತೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಕಾಮಗಾರಿಯು ಬೇಜವಾಬ್ದಾರಿಯಿಂದ ಹಾಗೂ ಭೀಕರ ಮಳೆಯಿಂದಲೂ ಭಾಗಶಃ ತಡೆಗೋಡೆಯು ನಾಶವಾಗಿದೆ ಎಂದು ತಿಳಿಸಿದರು. ತಕ್ಷಣವೇ ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು.


ನಾಶವಾದ ತಡೆಗೋಡೆಯನ್ನು ಅಡಿಪಾಯದಿಂದಲೇ ಹೊಡೆದು ತೆಗೆದು. ಬಲಿಷ್ಠವಾದ ಅಡಿಪಾಯದೊಂದಿಗೆ ಪುನರ್ ನಿರ್ಮಿಸಲು ಆದೇಶಿಸಿದರು. ಸೇತುವೆಯ ಪ್ರಥಮ ಬುಡದ ಹತ್ತಿರ ಹಾಗೂ ಸೇತುವೆಯ ಕೊನೆಯ ಬುಡದ ಹತ್ತಿರ ಹೆಚ್ಚುವರಿ ಬಲಿಷ್ಠವಾದ ಭೀಮಗಳನ್ನು ನಿರ್ಮಾಣ ಮಾಡಲು ಆದೇಶಿಸಿದರು.

Tags: BantwalaDakshina Kannada

Related News

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ
ದೇಶ-ವಿದೇಶ

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ

September 26, 2023
ಕರ್ನಾಟಕಕ್ಕೆ ಮತ್ತೆ ಹಿನ್ನಡೆ : ಕಾವೇರಿ ನೀರನ್ನು ತಮಿಳುನಾಡಿಗೆ ಪುನಃ 18 ದಿನಗಳ ಕಾಲ ಬಿಡುವಂತೆ CWRC ಆದೇಶ
ದೇಶ-ವಿದೇಶ

ಕರ್ನಾಟಕಕ್ಕೆ ಮತ್ತೆ ಹಿನ್ನಡೆ : ಕಾವೇರಿ ನೀರನ್ನು ತಮಿಳುನಾಡಿಗೆ ಪುನಃ 18 ದಿನಗಳ ಕಾಲ ಬಿಡುವಂತೆ CWRC ಆದೇಶ

September 26, 2023
ರಾಜಕೀಯ ಪಕ್ಷವಾಗಿ ಯೋಚನೆ ಮಾಡದೆ ಕನ್ನಡಿಗರು ಎಂಬ ವಿಶಾಲ ಮನೋಭಾವವನ್ನು ತೋರಿಸಬೇಕು – ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ರಾಜಕೀಯ ಪಕ್ಷವಾಗಿ ಯೋಚನೆ ಮಾಡದೆ ಕನ್ನಡಿಗರು ಎಂಬ ವಿಶಾಲ ಮನೋಭಾವವನ್ನು ತೋರಿಸಬೇಕು – ಸಿಎಂ ಸಿದ್ದರಾಮಯ್ಯ

September 26, 2023
ರಾಜ್ಯದ 550 ಐತಿಹಾಸಿಕ ಸ್ಮಾರಕಗಳನ್ನು ಖಾಸಗಿಯವರಿಗೆ ದತ್ತು ನೀಡಲು ಮುಂದಾದ ರಾಜ್ಯ ಸರ್ಕಾರ..!
ಪ್ರಮುಖ ಸುದ್ದಿ

ರಾಜ್ಯದ 550 ಐತಿಹಾಸಿಕ ಸ್ಮಾರಕಗಳನ್ನು ಖಾಸಗಿಯವರಿಗೆ ದತ್ತು ನೀಡಲು ಮುಂದಾದ ರಾಜ್ಯ ಸರ್ಕಾರ..!

September 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.