ಜಮೀರ್ ಖಾನ್ ಮೊದಲು ನಿಮ್ಮ ಧರ್ಮದ ಗಂಡಸರಿಗೆ ಹೇಳ್ಕೊಡ್ರೀ ಬುದ್ದಿನಾ : ಭಾರತೀ ಶೆಟ್ಟಿ!

politics

ರಾಜ್ಯ ರಾಜಕಾರಣದಲ್ಲಿ ಒಂದಲ್ಲ ಒಂದು ವಾದಗಳು, ವಿವಾದಗಳು ಕೇಳಿಬರುವುದು ನಮಗೆಲ್ಲಾ ಹೊಸ ವಿಷಯವೆನಲ್ಲಾ, ಅದು ತಿಳಿದಿರುವ ವಿಚಾರವೇ ಸರಿ. ಸದ್ಯ ಇದೇ ಹಾದಿಯಲ್ಲಿ ಮತ್ತೊಂದು ಮಾತಿನ ಜಟಾಪಟಿ ಬುಗಿಲೆದಿದ್ದು, ಶಾಸಕ ಜಮೀರ್ ಖಾನ್ ಅವರ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿರುವ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತಿನ ಚಾವಟಿ ಬೀಸಿದ್ದಾರೆ. ಹೌದು, ಶಾಸಕ ಜಮೀರ್ ಖಾನ್ ಅವರು ನೀಡಿದ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕರು ಸಿಡಿದಿದ್ದಾರೆ.

ಈ ಪೈಕಿ ಪರಿಷತ್ ಸದಸ್ಯೆಯಾದ ಭಾರತಿ ಶೆಟ್ಟಿ ಅವರು ಮೊದಲು ಜಮೀರ್ ಖಾನ್ ಅವರೇ, ನಿಮ್ಮ ಧರ್ಮದ ಗಂಡಸರಿಗೆ ಮೊದಲು ಬುದ್ದಿ ಕಲಿಸುವುದು ಅಗತ್ಯ ಎಂದು ಹೇಳುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದದ ಸುಳಿಯಲ್ಲಿ ಸಿಲುಕಿಕೊಂಡ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಭಾರತಿ ಶೆಟ್ಟಿ ಅವರು, “ಜಮೀರ್ ಖಾನ್ ಅವರಿಗೆ ಕುಟುಂಬಗಳಲ್ಲಿ ಯಾವ ಸಂಬಂಧಗಳು ಹೇಗೆ ಇರಲಿದೆ, ಯಾವುದಕ್ಕೆ ಏನು ಅರ್ಥ ಎಂಬುದು ಸರಿಯಾಗಿ ತಿಳಿದಿಲ್ಲ! ಸೌಂದರ್ಯ ನೋಡುವ ವಿಚಾರದಲ್ಲಿ ಮೊದಲು ದೃಷ್ಟಿ ಸರಿಯಾಗಬೇಕು!

ನಾವೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಂಬಂಧಗಳಿಗೆ ಹೆಚ್ಚು ಆದ್ಯತೆ, ಪ್ರಾಮುಖ್ಯತೆ ನೀಡುತ್ತೇವೆ. ನಮ್ಮಲ್ಲಿ ಅಮ್ಮ, ಅಪ್ಪ, ಅಕ್ಕ, ತಂಗಿ, ಅಣ್ಣ, ಗಂಡ ಎಂದು ಹೇಳುವ ಪ್ರತಿಯೊಂದು ಸಂಬಂಧಗಳ ನಡುವೆ ನಾವು ಬೆಳೆದು ಬಂದಿರುತ್ತೇವೆ. ನಮಗಿಂತ ಹೆಚ್ಚಾಗಿ ಅವರ ಧರ್ಮದ ಗಂಡಸರಿಗೆ ಬುದ್ದಿಯನ್ನು ತಿದ್ದಲಿ ಎಂದು ಟಾಂಗ್ ನೀಡಿದ್ದಾರೆ. ತಮ್ಮ ಹೇಳಿಕೆ ವಿರುದ್ಧ ಮಾತಿನ ಜಟಾಪಟಿ ಸುರಿಮಳೆಗೈದ ಬೆನ್ನಲ್ಲೇ ಶಾಸಕ ಜಮೀರ್ ಖಾನ್ ಸದ್ಯ ಉಲ್ಟಾ ಹೊಡೆದಿದ್ದಾರೆ.

ನಾನು ಹಿಜಾಬ್ ಧರಿಸುವುದು ಹೆಣ್ಣು ಮಕ್ಕಳಿಗೆ ಸುರಕ್ಷತೆ ಎಂಬ ದೃಷ್ಟಿಕೋನದಲ್ಲಿ ಹೇಳಿದ್ದು ಎಂದು ಹೇಳಿದ್ದಾರೆ. ಇದನ್ನು ಕೇಳಿದ ಬಳಿಕ ಮತ್ತಷ್ಟು ವಾದ-ವಿವಾದಗಳು ನಡೆಯುತ್ತಿದ್ದು, ಹಲವು ನಾಯಕರು ಜಮೀರ್ ಖಾನ್ ಅವರೇ ಹಿಜಾಬ್ ಹಿಂದೆ ಯಾವುದೋ ದೊಡ್ಡ ಜಾಲವೇ ಕೆಲಸ ಮಾಡ್ತಿದೆ, ಅದರ ಬಗ್ಗೆ ಗಮನಹರಿಸಿ ಎಂಬ ಮಾತುಗಳನ್ನು ತಿಳಿಸಿದ್ದಾರೆ.

Exit mobile version