Bengaluru: ಬಹುದಿನಗಳ ನಂತರ ಸಾಕಷ್ಟು ಅಳೆದುತೂಗಿ ಬಿಜೆಪಿ ಹೈಕಮಾಂಡ್ (bjp choice opposition leader) ಬಿ.ಎಸ್.ಯಡಿಯೂರಪ್ಪನವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿವೈ
ವಿಜಯೇಂದ್ರ (B.Y.Vijayendra) ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ವಿಪಕ್ಷ ನಾಯಕ ಯಾರಾಗ್ತಾರೆ
ಎಂಬ ಕುರಿತು ಭಾರೀ ಲೆಕ್ಕಾಚಾರ ಶುರುವಾಗಿದೆ. ಲಿಂಗಾಯತ ಸಮುದಾಯದ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ಒಕ್ಕಲಿಗ ಅಥವಾ ಹಿಂದುಳಿದ ಸಮುದಾಯಕ್ಕೆ ವಿಪಕ್ಷ
ನಾಯಕನ ಸ್ಥಾನ ಒಲಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಂದೆ ಮೂರು ಆಯ್ಕೆಗಳಿವೆ.
ಆಯ್ಕೆ – 1 : ಒಕ್ಕಲಿಗ ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ
ಮೂಲಗಳ ಪ್ರಕಾರ, ಒಕ್ಕಲಿಗ ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು. ಈ ರೇಸ್ನಲ್ಲಿ ಶಾಸಕ ಅಶ್ವತ್ಥ ನಾರಾಯಣ, ಆರ್. ಅಶೋಕ (R.Ashok) ಮತ್ತು ಆರಗ ಜ್ಞಾನೇಂದ್ರ
ಅವರಿದ್ದಾರೆ. ಇವರಲ್ಲಿ ಅಶ್ವತ್ಥ ನಾರಾಯಣ ಅವರ ಹೆಸರು ಮಂಚೂಣಿಯಲ್ಲಿದೆ. ಈ ಮಧ್ಯೆ ಅಶ್ವತ್ಥ ನಾರಾಯಣ (Ashwath Narayana) ಮತ್ತು ಆರ್. ಅಶೋಕ ನಡುವೆ ಸ್ಪರ್ಧೆ ಶುರುವಾಗಿದೆ.
ಆದರೆ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು (bjp choice opposition leader) ಕಾದುನೋಡಬೇಕಿದೆ.
ಆಯ್ಕೆ 2 : ಒಬಿಸಿ ಸಮುದಾಯಕ್ಕೆ ಅವಕಾಶ
ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಹೊಂದಿರುವ ಜೆಡಿಎಸ್ನೊಂದಿಗೆ (JDS) ಮೈತ್ರಿ ಮಾಡಿಕೊಂಡಿರುವುದರಿಂದ ಒಕ್ಕಲಿಗ ಮತಗಳಿಗಿಂತ ಹಿಂದುಳಿದ ಸಮುದಾಯಗಳ ಮತ ಸೆಳೆಯಲು ಆ
ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆಗ ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಅವರನ್ನು ಪಕ್ಷ ಪರಿಗಣಿಸಬಹುದು.
ಆಯ್ಕೆ – 3 : ಕುಮಾರಸ್ವಾಮಿಗೆ ವಿಪಕ್ಷ ನಾಯಕನ ಸ್ಥಾನ
ಲಿಂಗಾಯತ ಸಮುದಾಯದ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಜೆಡಿಎಸ್ ನಾಯಕ ಹಾಗೂ ಪ್ರಬಲ ಒಕ್ಕಲಿಗ ನಾಯಕ ಎಚ್.ಡಿ. ಕುಮಾರಸ್ವಾಮಿ (H.D.Kuamarswamy) ಅವರಿಗೆ
ವಿಪಕ್ಷ ನಾಯಕನ ಸ್ಥಾನ ನೀಡಿದರೆ, ಎರಡು ಸಮುದಾಯಗಳ ಮತಗಳ ಮೇಲೆ ಹಿಡಿತ ಸಾಧಿಸಬಹುದು ಎಂಬ ಲೆಕ್ಕಾಚಾರವು ಬಿಜೆಪಿಯಲ್ಲಿದೆ. ಆಗ ಬಿಜೆಪಿಯ ಒಕ್ಕಲಿಗ ಅಸ್ತ್ರಕ್ಕೆ ಮತ್ತಷ್ಟು ಬಲ
ಕೊಟ್ಟತಾಗಬಹುದು. ಆದರೆ, ಈ ಸಾಧ್ಯತೆ ತೀರಾ ಕಡಿಮೆಯಿದೆ. ಆದರೂ ಕಾದು ನೋಡಬೇಕಷ್ಟೆ.
ಇದನ್ನು ಓದಿ: ಮಂಗನ ದಾಳಿಯಿಂದ ವ್ಯಕ್ತಿಯ ಸಾವು : ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ