ಮತಾಂಧರ ಘೋರ ಕೃತ್ಯಗಳನ್ನು ಪ್ರಶ್ನೆ ಮಾಡಿದ್ರೆ ಸಿದ್ದರಾಮಯ್ಯ ಉತ್ತರಿಸುವುದೇಕೆ?

BJP

ಸಿದ್ದರಾಮಯ್ಯ(Siddaramaiah) ಅವರಿಗೂ ಟಿಪ್ಪು ಸುಲ್ತಾನ್(Tippu Sulthan), ಘೋರಿ, ಘಜನಿಗಳಿಗೂ ಇರುವ ಸಂಬಂಧವಾದರೂ ಏನು? ಈ ಮತಾಂಧರು ಎಸಗಿದ ಘೋರ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಸಿದ್ದರಾಮಯ್ಯ ಅವರು ಉತ್ತರಿಸುವುದೇಕೆ?

ಹಿಂದೂ ನರಮೇಧ ನಡೆಸಿದವರ ಸಮರ್ಥನೆಗೆ ಸಿದ್ದರಾಮಯ್ಯ ಜಿಪಿಎ ಪಡೆದುಕೊಂಡಿದ್ದಾರಾ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ ಅಧಿಕಾರದಲ್ಲಿದ್ದಾಗ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿನ ನೂರಾರು ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು. ಮತಾಂಧರೊಂದಿಗೆ ಮತರಾಜಕಾರಣಕ್ಕೆ ಮೀರಿದ ಬೇರೆಯದೇ ಸಂಬಂಧ ಇರಬಹುದೆಂದು ಜನರು ಅನುಮಾನಿಸುತ್ತಿದ್ದಾರೆ, ನಿಜವೇ? ಎಂದು ಬಿಜೆಪಿ ಪ್ರಶ್ನೆ ಮಾಡಿದ್ದು,

‘ನಾಡ ವಿರೋಧಿ ಕಾಂಗ್ರೆಸ್’ ಎಂಬ ಹ್ಯಾಷ್‍ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಟಿಪ್ಪು ಕೊಡುಗೆ ಹೆಚ್ಚೋ, ಮೈಸೂರು ಅರಸರ ಕೊಡುಗೆ ಅನನ್ಯವೋ? ಈ ಬಗ್ಗೆ ಸಿದ್ದರಾಮಯ್ಯನವರು ಮಾತನಾಡಿದ ಉದಾಹರಣೆ ಇದೆಯೇ? ಕನ್ನಂಬಾಡಿ ಕಟ್ಟೆ(KRS) ಕಟ್ಟಿಸಿದ ಒಡೆಯರ್ ಕೊಡುಗೆಯನ್ನೇ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರ ಏಕೆ ಆದರ್ಶ ಪುರುಷ? ಟಿಪ್ಪುವಿನ ಜೊತೆ ರಹಸ್ಯ ಸಂಬಂಧ ಇದೆಯೇ? ಸಿದ್ದರಾಮಯ್ಯನವರೇ, ಸ್ವಯಸೇವಕರಾಗಿರುವ ಹಿನ್ನಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ನಿಮಗೆ ಉತ್ತರಿಸುತ್ತಿದ್ದಾರೆ.

ನಿಮಗೆ ಅದನ್ನೇ ತಡೆದುಕೊಳ್ಳಲಾಗಿದ್ದರೆ ಹೇಗೆ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಪ್ರಶ್ನೆ ಹಾಗೂ ಕಾಂಗ್ರೆಸ್ ಮುಚ್ಚಿಟ್ಟ ಕೆಲ ಸತ್ಯಗಳ ಬಗ್ಗೆ ಉತ್ತರ ನೀಡಲು ಸಿದ್ಧರಿದ್ದೀರಾ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Exit mobile version