ಸಿದ್ದರಾಮಯ್ಯ ಕಾಡು ದಾರಿಯ ಮಧ್ಯೆಯೇ ರಾಹುಲ್ ಅವರನ್ನು ಸ್ವಾಗತಿಸಿದರು, ಡಿಕೆಶಿ ಬೆವರು – ಸಿದ್ದರಾಮಯ್ಯ ಹೆಸರು : ಬಿಜೆಪಿ

bjp

ರಾಹುಲ್ ಗಾಂಧಿ (Rahul Gandhi) ಅವರ ಬೆಳಗ್ಗಿನ ಉಪಹಾರದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivkumar) ಅವರನ್ನು ಸಿದ್ದರಾಮಯ್ಯ ಬಣ ನಿರ್ಲಕ್ಷಿಸಿತ್ತು.

ಬೇಯಿಸಲು ಡಿಕೆಶಿ ಬೇಕು, ತಿನ್ನುವುದು ಮಾತ್ರ ಸಿದ್ದರಾಮಯ್ಯ.

D K Shivakumar

ಡಿಕೆಶಿ ಅವರೇ ನಿಮ್ಮ ಸ್ಕ್ರಿಪ್ಟ್ ಅಲ್ಲೋಲ ಕಲ್ಲೋಲವಾಗಲು ಕಾರಣವೇನು? ರಾಹುಲ್ ಗಾಂಧಿ (BJP Slams DKS Siddaramaiah) ಅವರನ್ನು ಸ್ವಾಗತಿಸಲು ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಬಳಿ ಡಿ.ಕೆ.ಶಿವಕುಮಾರ ಕಾದು ಕುಳಿತಿದ್ದರು.

ಆದರೆ, ಡಿಕೆಶಿ ಮೇಲುಗೈ ಆಗುವುದನ್ನು ಸಹಿಸದ ಸಿದ್ದರಾಮಯ್ಯ, ಕಾಡು ದಾರಿಯ ಮಧ್ಯೆಯೇ ರಾಹುಲ್ ಅವರನ್ನು ಸ್ವಾಗತಿಸಿದರು.

ಇದನ್ನೂ ಓದಿ : https://vijayatimes.com/mallikarjun-kharge-resigns-rajyasabha/

ಡಿಕೆಶಿ ಬೆವರು – ಸಿದ್ದರಾಮಯ್ಯ ಹೆಸರು ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ರಾಹುಲ್ ಗಾಂಧಿಯ ಐಷಾರಾಮಿ ಕಂಟೇನರ್ ಯಾತ್ರೆ ಕರ್ನಾಟಕದಲ್ಲಿ (Karnataka) ಆರಂಭಗೊಂಡಿದೆ.

ಈ ಯಾತ್ರೆಯ ಆರಂಭದೊಂದಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನಡುವಿನ ಶೀತಲ ಸಮರ ಮತ್ತೆ ಜಗಜ್ಜಾಹೀರಾಗಿದೆ.

Rahul Gandhi

ರಾಹುಲ್ ಗಾಂಧಿ ಅವರೇ, ಭಾರತ ಜೋಡಿಸುವುದಕ್ಕಿಂತ ಇವರಿಬ್ಬರನ್ನು ಜೋಡಿಸುವುದರಲ್ಲೇ ಸುಸ್ತಾಯಿತೇ? ರಾಹುಲ್ ಗಾಂಧಿಗೆ ತ್ರಿವರ್ಣ ಧ್ವಜ ನೀಡುವಂತೆ ಸಿದ್ದರಾಮಯ್ಯ ಅವರಿಗೆ ನಿರೂಪಕರು ಮನವಿ ಮಾಡಿದ್ದರು.

ಆದರೆ ಸಿದ್ದರಾಮಯ್ಯ ಅವರನ್ನು ಲೆಕ್ಕಿಸದೆ ಡಿಕೆಶಿ ಅವರು ರಾಹುಲ್ ಗಾಂಧಿಗೆ ಧ್ವಜ ಹಸ್ತಾಂತರಿಸಿದರು.

https://fb.watch/fTCZHCFreh/ COVER STORY | ಪೋಷಕರೇ ಎಚ್ಚರ!

ಈ ಮೂಲಕ ನನ್ನನ್ನು ಸಭೆಗೆ ಕರೆದಿಲ್ಲ ಎಂದ್ದಿದ್ದ ಸಿದ್ದರಾಮಯ್ಯಗೆ ವೇದಿಕೆಯಲ್ಲೇ ಟಕ್ಕರ್ ನೀಡಿದ್ದೇ? ಎಂದು (BJP Slams DKS Siddaramaiah) ವ್ಯಂಗ್ಯವಾಡಿದೆ. ಇನ್ನು ನಿನ್ನೆ ರಾಜ್ಯಕ್ಕೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ “ಭಾರತ್‌ ಜೋಡೋ” ಯಾತ್ರೆ ಕಾಲಿಟ್ಟಿದ್ದು,

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿಗೆ ಸಾಥ್‌ ನೀಡಿದ್ದಾರೆ.

SIDDARAMAIAH
ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸ್ವಾಗತ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿ ದೇವನೂರು ಮಹದೇವ ಅವರು ಕೂಡಾ ಭಾಗವಹಿಸಿದ್ದರು.
Exit mobile version