ಕಾಂಗ್ರೆಸ್ಗೆ ವೋಟು ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ: ಡಿಕೆಶಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗ ಬೆದರಿಕೆ!

Bengaluru: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ (BJP Tweet Against DKS) ಡಿಕೆ ಸುರೇಶ್ಗೆ (D.K Suresh) ನೀವು ವೋಟು ಹಾಕದಿದ್ದರೆ, ನಿಮಗೆ ನೀರು

ಕೊಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತ ವಿಡಿಯೋವೊಂದನ್ನು

ರಾಜ್ಯ ಬಿಜೆಪಿ (BJP) ಟ್ವೀಟರ್ನಲ್ಲಿ (BJP Tweet Against DKS) ಪೋಸ್ಟ್ ಮಾಡಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ವೊಂದರ ನಿವಾಸಿಗಳ ಸಭೆ ನಡೆಸಿದ ವೇಳೆ ಡಿಕೆ ಶಿವಕುಮಾರ್ (D K Shivakumar) ಈ ರೀತಿಯ ಬೆದರಿಕೆ ಹಾಕಿದ್ದಾರೆ

ಎನ್ನಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್ಗಳ (Kotwal Brothers) ಗೂಂಡಾಗಿರಿ ದಿನೇ ದಿನೇ

ಹೆಚ್ಚಾಗುತ್ತಿದೆ. ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು.

ಇಂದು ಅಪಾರ್ಟ್ಮೆಂಟ್ (Apartment) ನಿವಾಸಿಗಳ ಸಭೆ ನಡೆಸಿ ನೀವು ಡಿಕೆ ಸುರೇಶ್ಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕು ಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಸಿಎಂ ಡಿಕೆ

ಶಿವಕುಮಾರ್ ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಜನತೆ ಏಪ್ರಿಲ್ (April) 26 ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ -ನಿಶ್ಚಿತ-ಖಂಡಿತ ಎಂದಿದೆ.

ಇನ್ನೊಂದು ಟ್ವೀಟ್ನಲ್ಲಿ, ಕೊತ್ವಾಲ್ ಬ್ರದರ್ಸ್ ‘ಆ ದಿನಗಳ’ ಗೂಂಡಾಗಿರಿ ಮುಂದುವರೆಸಿದ್ದಾರೆ. ತೋಟವನ್ನು ಸುಟ್ಟುವರು ನಾವು, ನಿನ್ನನ್ನೂ ಸುಟ್ಟು ಹಾಕುವುದು ಕಷ್ಟವೇ ಎಂದು ಧಮ್ಕಿ ಹಾಕಿ ಈಗ ಕುಣಿಗಲ್

ತಾಲೂಕಿನ ರೈತ ಪ್ರೇಮ್ ಕುಮಾರ್ (Prem Kumar) ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಕೊತ್ವಾಲ್ ಬ್ರದರ್ಸ್. ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಗಂಡೆದೆ

ಇದ್ದರೆ ನೇರವಾಗಿ ಹೋರಾಡಿ. ಅದು ಬಿಟ್ಟು ಸೋಲುವ ಪುಕ್ಕಲತನದಲ್ಲಿ ಹೇಡಿಯಂತೆ ಪೊಲೀಸರನ್ನು ಬಳಸಿಕೊಂಡು ಅಮಾಯಕ ರೈತರನ್ನು ಬೆದರಿಸಬೇಡಿ.

ಅಧಿಕಾರವಿದೆ, ರೌಡಿಗಳ ಬಳಗವಿದೆ, ಹಣವಿದೆ ಎಂದು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯಲಿದ್ದೇವೆ ಎಂದು “ಗುಲಾಮಿ ಕೊತ್ವಾಲ್ ಗ್ಯಾಂಗ್” (Gulami Kotwal Gang) ತೋರಿಸಿಕೊಟ್ಟಿದೆ

ಎಂದು ಕಿಡಿಕಾರಿದೆ.

ಇದನ್ನು ಓದಿ: ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

Exit mobile version