ಮತಾಂಧರನ್ನು ‘ಬ್ರದರ್ಸ್’ ಎಂದು ಸಂಭಾಳಿಸುತ್ತಿರುವ ಕಾರಣ ಹಿಂದೂ ಯುವತಿಯರು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ: ಬಿಜೆಪಿ ಟೀಕೆ

ಮತಾಂಧರನ್ನು ʼಬ್ರದರ್ಸ್ʼ (Brothers) ಎಂದು ಕಾಂಗ್ರೆಸ್ ಸಂಭಾಳಿಸುತ್ತಿರುವ ಕಾರಣ (BJP vs Congress News) ಹಿಂದೂ ಯುವತಿಯರು, ಬಾಲಕಿಯರು ಬೀದಿಯಲ್ಲಿ ಹೆಣವಾಗಿ ಬೀಳುತ್ತಿದ್ದಾರೆ

ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ (BJP vs Congress News) ವಿರುದ್ದ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP), ಮತಾಂಧರನ್ನು ʼಬ್ರದರ್ಸ್ʼ ಎಂದು ಕಾಂಗ್ರೆಸ್ ಸಂಭಾಳಿಸುತ್ತಿರುವ ಕಾರಣ ಹಿಂದೂ ಯುವತಿಯರು, ಬಾಲಕಿಯರು ಬೀದಿಯಲ್ಲಿ ಹೆಣವಾಗಿ

ಬೀಳುತ್ತಿದ್ದಾರೆ. ಕರ್ನಾಟಕದಲ್ಲಿ ಲವ್ ಜಿಹಾದ್ ಸದ್ದೇ ಇಲ್ಲದಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಹಾದಿ ಮತಾಂಧರಿಂದ ಅತ್ಯಾಚಾರ, ಕೊಲೆಗಳು ಲವ್ ಜಿಹಾದ್

(Love Jihad) ವಿಫಲಗೊಂಡಾಗ ಆಗುತ್ತಿವೆ ಎಂದು ಟೀಕಿಸಿದೆ.

ಇನ್ನೊಂದು ಟ್ವೀಟ್ನಲ್ಲಿ, ಬೀದರ್ (Bidar) ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಎರಗಿದ ಮತಾಂಧ ಕಾಮುಕ ಮಾನಭಂಗ ಮಾಡಿದ್ದಾನೆ. ಇನ್ನಾದರೂ ನಾಡಿನ ಪ್ರಜ್ಞಾವಂತ ಮತದಾರರು ಎಚ್ಚೆತ್ತು ಕಾಂಗ್ರೆಸ್

ತೊಲಗಿಸಬೇಕಿದೆ. ಮತಿಗೆಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಜನಾಂದೋಲನ ನಡೆಸಬೇಕಿದೆ ಎಂದಿದೆ.

ಇನ್ನು ನೇಹಾ ಹಿರೇಮಠ ಹತ್ಯೆ ಖಂಡಿಸಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (J P Nadda) ಅವರು, ರಾಜ್ಯದಲ್ಲಿ ಮಿತಿ ಮೀರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ವಿದ್ಯಾರ್ಥಿನಿ

ನೇಹಾ ಹಿರೇಮಠ್ ಹತ್ಯೆ, ಹದಗೆಟ್ಟ ಕಾನೂನು ಸುವ್ಯವಸ್ಥೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏಪ್ರಿಲ್ (April) 24 ಸೋಮವಾರದಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಯಲಿದೆ.

ನೇಹಾ ಹಿರೇಮಠ್ (Neha Hiremath) ಅವರ ಶೋಕತಪ್ತ ತಂದೆ ತಾಯಿಯನ್ನು ಭೇಟಿ ಮಾಡಿ, ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ.

ಅವರ ಈ ದುಃಖದಲ್ಲಿ, ಇಡೀ ದೇಶವೇ ಅವರೊಂದಿಗೆ ಏಕತೆಯಿಂದ ನಿಲ್ಲುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಮಾಡಿದ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ತುಷ್ಟೀಕರಣ

ಪ್ರೇರಿತ ಇಂಥ ಹೇಳಿಕೆಗಳು ತನಿಖೆಯನ್ನು ದುರ್ಬಲಗೊಳಿಸುತ್ತದೆ. ನೇಹಾ ಹಿರೇಮಠ್ ಅವರ ತಂದೆ ತಾಯಿಗೆ ನ್ಯಾಯ ಕೊಡಿಸಲು ಭಾರತೀಯ ಜನತಾ ಪಾರ್ಟಿ ಬದ್ಧವಾಗಿದೆ, ನ್ಯಾಯಸಮ್ಮತ ತನಿಖೆಗಾಗಿ

ಇದನ್ನು ಸಿಬಿಐಗೆ (CBI) ವಹಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ. ಅವರ ಸಂಕಷ್ಟದ ಈ ಸಮಯದಲ್ಲಿ ನಾವು ಅವರ ಕುಟುಂಬದ ಜೊತೆಗಿದ್ದೇವೆ ಎಂದಿದ್ದಾರೆ.

ಇದನ್ನು ಓದಿ: ಚೊಂಬು ನೀಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡಿಗರೂ ಚೊಂಬು ನೀಡಬೇಕು : ಕಾಂಗ್ರೆಸ್ ನಿಂದ ವ್ಯಂಗ್ಯಭರಿತ ಜಾಹೀರಾತು ಪ್ರಕಟ

Exit mobile version