Bengaluru:ಸಾಮಾಜಿಕ ಜಾಲತಾಣಗಳಲ್ಲಿ ಕೈ ಮತ್ತು ಕಮಲ ಪಕ್ಷಗಳ ನಡುವೆ ತೀವ್ರ (Congress Party vs BJP Party) ಚರ್ಚೆಗೆ ಗ್ರಾಸವಾದ ಕಾಂಗ್ರೆಸ್ ನ ಚೊಂಬು ಜಾಹೀರಾತು ಇದೀಗ
ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಅಷ್ಟಕ್ಕೂ ಕಾಂಗ್ರೆಸ್ ಸರ್ಕಾರ ದಿನಪತ್ರಿಕೆಯ ಮುಖಪುಟ ಒಂದರಲ್ಲಿ ಸ್ಟೀಲ್ ಚೊಂಬಿನ (Steel Mug) ಚಿತ್ರ ಹಾಕಿ ಅದರ ಕೆಳಗೆ ಕರ್ನಾಟಕಕ್ಕೆ ಮೋದಿ ಸರ್ಕಾರ (Modi Govt) ಕೊಟ್ಟ ಕೊಡುಗೆ ಚೊಂಬು!
ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು. ರೈತರ ಆದಾಯ ಡಬಲ್ (Double the income of farmers) ಮಾಡುವ ಚೊಂಬು.ತೆರಿಗೆ ಹಂಚಿಕೆಯಲ್ಲಿ ಚೊಂಬು.ಬರ/ನೆರೆ ಪರಿಹಾರದಲ್ಲಿ
ಚೊಂಬು. 27 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು.ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು (Congress Party vs BJP Party) ನೀಡೋಣ ಇದೇ
ಚೊಂಬು ! ಎಂದು ಜಾಹೀರಾತು ನೀಡಿತ್ತು. #ಬಿಜೆಪಿಚೊಂಬುಕಾಂಗ್ರೆಸ್ ನ ಜಾಹೀರಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಸೇರಿದಂತೆ ಅನೇಕ ಕಾಂಗ್ರೆಸ್
ಮುಖಂಡರು ಪೋಸ್ಟ್ ಮಾಡಿ ಕೇಂದ್ರ ಸರ್ಕಾರ ಕರ್ನಾಟಕ ಮತ್ತು ಕನ್ನಡಿಗರ ಕೈಗೆ ಚೊಂಬು ನೀಡಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್ ನ ಈ ಜಾಹೀರಾತಿನ ವಿರುದ್ಧ ಮುಗಿಬಿದ್ದಿರುವ ಬಿಜೆಪಿಗರು
ಕಾಂಗ್ರೆಸ್ ರಾಜ್ಯದ ಪಾಲಿಗೆ ನೀಡಿರುವುದು ಖಾಲಿ ಚೊಂಬು ಎಂದು ತಿರುಗೇಟು ನೀಡಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ ಶುರುವಾಗಲಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ಕ್ಷೇತ್ರಗಳಲ್ಲಿ
ಕಾಂಗ್ರೆಸ್ ಭರ್ಜರಿ ಪ್ರಚಾರ ಆರಂಭಿಸಿದೆ. ನರೇಂದ್ರ ಮೋದಿ ಹೆಸರೇಳಿಕೊಂಡು ಮತಯಾಚನೆ ಮಾಡುವ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್ ಜಾಹೀರಾತಿನ ಮೂಲಕ ಪ್ರಚಾರ ಆರಂಭಿಸಿದೆ.
ಬೆಂಗಳೂರಿನ ಜನತೆಗೆ ಬಿಜೆಪಿಯಿಂದ ಚೊಂಬು ಹಾಗೆ ನಿಮ್ಮ ಕಾಂಗ್ರೆಸ್ ಸರ್ಕಾರದಿಂದ ಸಿಕ್ಕಿದ್ದು ಬರೀ ಬಾಂಬು. ಮತಾಂಧರು ರಾಜ್ಯದೆಲ್ಲೆಡೆ ಹಿಂದೂಗಳ ಮೇಲೆ ಅಟ್ಟಹಾಸ ಮೆರೆಯಿತ್ತಿರುವುದಕ್ಕೆ ಕಾರಣ
ನಿಮ್ಮ ಕಾಂಗ್ರೆಸ್ ಸರ್ಕಾರದ ಒಲೈಕೆಯಿಂದ ಅವರಿಗೆ ಬಂದಿರುವ ಕೊಂಬು. ಕಾವೇರಿಯ ನೀರನ್ನು ಬೇಕಾಬಿಟ್ಟಿ ತಮಿಳುನಾಡಿಗೆ ಹರಿಸಿ ನಿಮ್ಮ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕೊಟ್ಟಿದ್ದು ಖಾಲಿ ಚೊಂಬು.
ಗರೀಬಿ ಹಠಾವೋ (Gareebi Hatao) ಎಂದು 60 ವರ್ಷಗಳಿಂದ ಮೊಸಳೆ ಕಣ್ಣೀರು ಸುರಿಸಿ ಕಡೆಗೆ ನಿಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟಿದ್ದು ಖಾಲಿ ಜೇಬು. ಜೂನ್ 4ರ ನಂತರ ನಿಮ್ಮ
ಇಂಡಿ ಮೈತ್ರಿಕೂಟದ ಭ್ರಷ್ಟ ನಾಯಕರ ಗತಿ ಜೈಲಿನಲ್ಲಿ ಚಾಪೆ ದಿಂಬೆ ಗತಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ತಮ್ಮ ಎಕ್ಸ್ ಖಾತೆಯಲ್ಲಿ ಕರ್ನಾಟಕ ಸರ್ಕಾರದ ಕೊಡುಗೆ ಬಗ್ಗೆ ಕುಟುಕಿದ್ದಾರೆ.
ಇದನ್ನು ಓದಿ: ಅಚ್ಚೇ ದಿನ್ ಆಯೇಗಾ ಮಾತಿಗಷ್ಟೇ , ಇದುವರೆಗೂ ಒಳ್ಳೆದಿನ ಬರಲಿಲ್ಲ: ಸಿದ್ಧರಾಮಯ್ಯ