ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳಲು ಆರ್‌ಎಸ್ಎಸ್ ಕಾರಣ

ಬೆಂಗಳೂರು ಅ 12 :  ಬಿಎಸ್‌ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಆರ್‌ಎಸ್‌ಎಸ್‌ ಕಾರಣ. ಆರ್‌ಎಸ್‌ಎಸ್‌ ಬಗ್ಗೆ ನನ್ನ ಹೇಳಿಕೆ ಹಿಟ್ ಆ್ಯಂಡ್ ರನ್ ಅಲ್ಲ. ನಾನು ಸೂಕ್ತ ಮಾಹಿತಿ ಇಟ್ಟುಕೊಂಡೇ ಮಾತನಾಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಹೇಳಿಕೆ ಬಗ್ಗೆ ಹೆಚ್‌ಡಿಕೆ ಜೊತೆ ಮಾತನಾಡುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಎಸ್‌ವೈ ಅವರ ಅಧಿಕಾರ ಹೋಗಲು ಆರ್‌ಎಸ್‌ಎಸ್‌ ನವರೇ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರದ ಬಗ್ಗೆ ಪಾಪ ಅವರು ಮಾತನಾಡ್ತರಂತಾ. ಆರ್‌ಎಸ್‌ಎಸ್‌ ಬಗ್ಗೆ ನಾನೇನು ಪ್ರಾರಂಭ ಮಾಡಿದ್ದೀನಿ ಅದು ಹಿಟ್ ಅಂಡ್ ರನ್ ಅಲ್ಲಾ. ಈ ಬಗ್ಗೆ ಸೂಕ್ತ ಮಾಹಿತಿ ಜೊತೆಗೆ ಮಾತಾಡಿದ್ದೀನಿ” ಎಂದು ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ

ಬಿಎಸ್‌ವೈ ಅವರ ಅಧಿಕಾರ ಹೋಗಲು ಆರ್‌ಎಸ್‌ಎಸ್‌ನವರೇ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರದ ಬಗ್ಗೆ ಪಾಪ ಅವರು ಮಾತನಾಡ್ತರಂತಾ. ಆರ್‌ಎಸ್‌ಎಸ್‌ ಬಗ್ಗೆ ನಾನೇನು ಪ್ರಾರಂಭ ಮಾಡಿದ್ದೀನಿ ಅದು ಹಿಟ್ ಅಂಡ್ ರನ್ ಅಲ್ಲಾ. ಈ ಬಗ್ಗೆ ಸೂಕ್ತ ಮಾಹಿತಿ ಜೊತೆಗೆ ಮಾತಾಡಿದ್ದೀನಿ ಎಂದು ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದ. ಆರ್‌ಎಸ್‌ಎಸ್‌ ಪ್ರಚಾರಕರೇ ಒಬ್ಬ ಲೇಖಕರ ಮುಂದೆ ಹೇಳಿರುವುದನ್ನು ನಾನು ಹೇಳಿದ್ದೇನೆ. ನಾನು ವಾಸ್ತವತೆಯ ಆಧಾರದಲ್ಲಿ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Exit mobile version