Bengaluru: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಾಷಣವನ್ನು (Case Against Priyank Kharge) ತಿರುಚಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್
ಮಾಡಿರುವ ಕಾರಣ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ದೂರು ದಾಖಲಾಗಿದೆ.
ಕಿಸಾನ್ ಸಮ್ಮಾನ್ ಯೋಜನೆ (Kisan Samman Scheme) ಮೂಲಕ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ
ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ಹಣವನ್ನು ಕಡಿತ ಮಾಡಿದ್ದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದರು.
ಆದರೆ ಭಾಷಣದ ವಿಡಿಯೋವನ್ನ ತಮಗೆ ಬೇಕಾದಷ್ಟು ಮಾತ್ರ ಎಡಿಟ್ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಪೋಸ್ಟ್ ಮಾಡಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ.
ಪ್ರಧಾನಿ ಮೋದಿ ಅವರ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಕನ್ನಡಿಗರು ಪಾಪ ಮಾಡಿದವರು“ ಎನ್ನುವ ಪ್ರಧಾನಿ ಮೋದಿಯವರೇ, ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ?
ನಮ್ಮದೇ ದೇಶದವರನ್ನು ಅವಮಾನಿಸುವುದು ಮೋದಿಯವರ ಖಯಾಲಿಯೇ? ಹಿಂದೆ ಕೇರಳ (Kerala) ವನ್ನು ಸೊಮಾಲಿಯಕ್ಕೆ ಹೋಲಿಸಿದ್ದಿರಿ, ಈಗ ಕನ್ನಡಿಗರನ್ನು ಪಾಪಿಷ್ಠರು ಎಂದಿದ್ದೀರಿ. ಕನ್ನಡಿಗರು ಯಾವ
ಪಾಪ ಮಾಡಿದ್ದರು ಸ್ವಾಮಿ? ಭ್ರಷ್ಟ ಬಿಜೆಪಿಯನ್ನು (Case Against Priyank Kharge) ತಿರಸ್ಕರಿಸಿದ್ದು ಪಾಪವೇ?
40% ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರೀಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ? ಬರ ಪರಿಹಾರ ಕೊಡದೆ ಕೋರ್ಟ್ ಮೆಟ್ಟಿಲು ಹತ್ತುವಂತೆ ಮಾಡಿದ್ದೀರಲ್ಲ,
ಕನ್ನಡಿಗರು ಯಾವ ಪಾಪ ಮಾಡಿದ್ದರು? ಕನ್ನಡಿಗರ ಯಾವ ಪಾಪಕ್ಕೆ ಕರ್ನಾಟಕಕ್ಕೆ GST ವಂಚನೆ ಮಾಡಿದ್ದೀರಿ? ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡದಿರುವುದು ಕನ್ನಡಿಗರ ಯಾವ ಪಾಪಕ್ಕೆ?
15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ನೀಡದಿರುವುದು ಯಾವ ಪಾಪಕ್ಕೆ? ಮೋದಿಯವರೇ,
ಕರ್ನಾಟಕವು (Karnataka) ಪುಣ್ಯವಂತರ ನಾಡೇ ಹೊರತು ಪಾಪ ಮಾಡಿದವರ ನಾಡಲ್ಲ, ಇಲ್ಲಿ ಬಸವಣ್ಣ, ನಾರಾಯಣಗುರುಗಳು, ಕುವೆಂಪು, ಕನಕದಾಸರು (Kuvempu, Kanakadasa) ಸೇರಿದಂತೆ
ಹಲವು ಪುಣ್ಯವಂತರ ಹುಟ್ಟಿದ ಪುಣ್ಯದ ನಾಡು. ಇಂತಹ ಪುಣ್ಯದ ನಾಡು, ಕನ್ನಡ ನಾಡಿಗೆ ಕಾಲಿಟ್ಟು ಕನ್ನಡಿಗರನ್ನೇ ಅವಮಾನಿಸುವುದನ್ನು ಎಂದಿಗೂ ಸಹಿಸುವುದಿಲ್ಲ. ಕರ್ನಾಟಕದಲ್ಲಿ ಪಾಪಿಷ್ಠರು ಯಾರಾದರೂ
ಇದ್ದರೆ ಅವರೆಲ್ಲ ಬಿಜೆಪಿಯಲ್ಲಿ ಸೇರಿದ್ದಾರೆ ಎನ್ನುವುದನ್ನು ನೆನಪಿಡಿ ಎಂದಿದ್ದರು.
ಇದನ್ನು ಓದಿ: 2025ನೇ ಸಾಲಿನ UPSC ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ