ಕಳೆದ 11 ತಿಂಗಳುಗಳಲ್ಲಿ, ಬಸವರಾಜ್ ಬೊಮ್ಮಾಯಿ(Basavaraj Bommai) ಅವರು ಒಬ್ಬ ನಿಷ್ಪರಿಣಾಮಕಾರಿ ಮುಖ್ಯಮಂತ್ರಿಯಾಗಿ(Chiefminister) ವರ್ತಿಸಿದ್ದಾರೆ.
ಶ್ರೀ ಬೊಮ್ಮಾಯಿ – ನಾನು ಹೆಚ್ಚು ಕೆಲಸ ಮಾಡಿ ಮತ್ತು ಕಡಿಮೆ ಮಾತಾಡುತ್ತೇನೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದವರು.
ಈಗ ಏನೂ ಕೆಲಸ ಮಾಡದೇ, ಅದರಿಂದಾಗುತ್ತಿರುವ ಪರಿಣಾಮಗಳ ಬಗ್ಗೆಯೂ ಕೂಡ ಹೇಳುತ್ತಿಲ್ಲ. ಅವರು ಹೈಕಮಾಂಡ್ನ ನಿರ್ಬಂಧದಿಂದ ಒಬ್ಬ ನಿಷ್ಪರಿಣಾಮಕಾರಿ ಮುಖ್ಯಮಂತ್ರಿಯಾಗಿದ್ದಾರೋ ,

ಸ್ವಂತ ವರ್ಚಸ್ಸಿನ ಕೊರತೆಯಿಂದಲೋ ಅಥವಾ ಈ ಎರಡೂ ಕಾರಣಗಳಿಂದಲೋ? ಎಂದು ನಟ(Actor) ಮತ್ತು ಸಾಮಾಜಿಕ ಕಾರ್ಯಕರ್ತ(Social Activist) ಚೇತನ್(Chethan Ahimsa) ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ(Facebook) ಈ ಕುರಿತು ಬರೆದುಕೊಂಡಿರುವ ಅವರು, ನಾನು ಹೆಚ್ಚು ಕೆಲಸ ಮಾಡಿ, ಕಡಿಮೆ ಮಾತನಾಡುತ್ತೇನೆ ಎಂದು ಹೇಳಿದ್ದರು. ಆದರೆ ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. https://vijayatimes.com/bjp-takes-over-siddaramaiah-dks/
ಬಸವರಾಜ್ ಬೊಮ್ಮಾಯಿ ಆಡಳಿತ ತೃಪ್ತಿ ನೀಡಿಲ್ಲ ಎಂಬರ್ಥದಲ್ಲಿ ನಟ ಚೇತನ್ ಬರೆದುಕೊಂಡಿದ್ದಾರೆ.
ಇದೇ ವೇಳೆ ಇನ್ನೊಂದು ಪೋಸ್ಟ್ನಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ಪಕ್ಷಗಳನ್ನು ಟೀಕಿಸಿದ್ದು, ದೇಶಪ್ರೇಮದ ವಿಷಯದಲ್ಲಿ, ನಾವು ಸಮಾನತಾವಾದಿಗಳು ನಮ್ಮ ದೇಶ ಮತ್ತು ಜನರ ಒಳಿತಿಗಾಗಿ ಕಾಳಜಿ ವಹಿಸುವ ರೀತಿಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ವಹಿಸುವುದಿಲ್ಲ.