ದಲಿತರು ಮನುವಾದಿ ಬಿಜೆಪಿಯವರನ್ನು ಮನೆಯೊಳಗೆ ಸೇರಿಸದೆ ಸ್ವಾಭಿಮಾನ ಕಾಪಾಡಿಕೊಳ್ಳಬೇಕು : ಕಾಂಗ್ರೆಸ್

Congress

Politics : ಹೋಟೆಲ್ ಅಡುಗೆ, ಮಿನರಲ್ ವಾಟರ್ ಬಾಟಲ್ಗಳು, ಹೊಸದಾಗಿ ತರಿಸಿದ ಪ್ಲೇಟುಗಳು, ಮನೆ ಮಾತ್ರ ದಲಿತರದ್ದು. ಇದು ದಲಿತರ ಮನೆ ಊಟ ಎಂಬ ಕಪಟ ನಾಟಕದಲ್ಲಿ ಬಿಜೆಪಿ(BJP) ಮಾಡಿದ ಅಸಲಿ ಅಸ್ಪೃಶ್ಯತೆಯ ಆಚರಣೆ.

ದಲಿತರು ಮನುವಾದಿ ಬಿಜೆಪಿಯವರನ್ನು ಮನೆಯೊಳಗೆ ಸೇರಿಸದೆ (Congress Points Out BJP) ಸ್ವಾಭಿಮಾನ ಕಾಪಾಡಿಕೊಳ್ಳಬೇಕು.

ಬಾಬಾ ಸಾಹೇಬರ ಆಶಯವನ್ನು ಎತ್ತಿ ಹಿಡಿಯಬೇಕು. ಬಿಜೆಪಿಯವರ “ದಲಿತರ ಮನೆ ಊಟ” ಎಂಬ ಕಾರ್ಯಕ್ರಮ ದಲಿತರು ಇನ್ನೂ ಅಸ್ಪೃಶ್ಯರು ಎಂದು ತೋರಿಸುವುದೇ ಆಗಿದೆ. ದಲಿತರ ಮನೆಗೆ ಹೋದ ಬಿಜೆಪಿ ನಾಯಕರು ಅಸ್ಪೃಶ್ಯತೆ ಆಚರಿಸಿ ಬಂದಿದ್ದಾರೆ.

ದಲಿತರ ಮನೆಯ ಊಟ ಅಷ್ಟೇ ಅಲ್ಲ, ಅವರ ಮನೆಯ ತಟ್ಟೆ, ಲೋಟಗಳನ್ನೂ ಬಿಜೆಪಿಯವರು ಅಶುದ್ಧ, ಮೈಲಿಗೆ ಎಂದು ಭಾವಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ (State Congress) ಟೀಕಿಸಿದೆ. ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌,

https://youtu.be/zk9A6mmuuEs GATE CRASH| ಆಸ್ಪತ್ರೆಯಲ್ಲಾ ಲಂಚಕೂಪ!

ಕಳೆದ 8 ವರ್ಷದಲ್ಲಿ ಪತ್ರಿಕಾಗೋಷ್ಠಿ ಕರೆದು ಪ್ರಶ್ನೆಗಳಿಗೆ ಉತ್ತರಿಸಲಾಗದ ಪುಕ್ಕಲು ಗುರು ಯಾರು? ಚೀನಾ ಅತಿಕ್ರಮಣದ ಬಗ್ಗೆ ಮಾತಾಡದೆ, ಚೀನಾ ಎಂಬ ಹೆಸರನ್ನೂ ಹೇಳದಿರುವ ಪುಕ್ಕಲು ಗುರು ಯಾರು? ದೇಶದಲ್ಲಿನ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ತುಟಿ ಬಿಚ್ಚದ ಪುಕ್ಕಲು ಗುರು ಯಾರು?

ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಸ್ಮಾರಕ ನಿರ್ಮಿಸುತ್ತೇವೆ ಎಂದಿತ್ತು ಬಿಜೆಪಿ. ಸ್ಮಾರಕ ಇರಲಿ, ಒಂದು ಕಲ್ಲನ್ನೂ ಇಡಲಿಲ್ಲ ಈ ಭ್ರಷ್ಟ ಸರ್ಕಾರ, ಚಿತ್ರದುರ್ಗದ ಪ್ರವಾಸೋದ್ಯಮ ಉತ್ತೇಜನಕ್ಕೆ ನಯಾಪೈಸೆ ಕೆಲಸ ಮಾಡಲಿಲ್ಲ.

ಚುನಾವಣೆಗೆ ಹೊಸ ಸುಳ್ಳು ಹೇಳುವ ಮೊದಲು ಹಳೆ ಸುಳ್ಳುಗಳ ಲೆಕ್ಕ (Congress Points Out BJP) ಕೊಡುವಿರಾ? ಎಂದು ಪ್ರಶ್ನಿಸಿದೆ.

‘ದೊರೆ’ಯ ಅನ್ಯಾಯ ನೋಡಿ. ರಸಗೊಬ್ಬರ – 5% GST, ಟ್ರ್ಯಾಕ್ಟರ್ – 12% GST, ಕೀಟನಾಶಕಗಳು – 18%, GST ದೇಶಕ್ಕೆ ಅನ್ನ ನೀಡುವ ಅನ್ನದಾತರಿಂದ ಬಿಜೆಪಿ ಹಣ ಸಂಗ್ರಹಿಸುತ್ತಿದ್ದರೆ,

ಭಾರತ್ ಜೋಡೋ ಯಾತ್ರೆ ರೈತರ ಪರ ಧ್ವನಿ ಎತ್ತುತ್ತಿದೆ. ನಾವು ರೈತರ ಜೊತೆ ಇದ್ದೆವು, ಇದ್ದೇವೆ ಮತ್ತು ಇರುತ್ತೇವೆ.

ಇದನ್ನೂ ಓದಿ : https://vijayatimes.com/floating-pillar-in-india/

‘ರಾಮಾಯಣ’ವನ್ನು ಆವರಿಸಿರುವುದು ರಾಮನ ವನವಾಸದ ಯಾತ್ರೆ, ವನವಾಸದ ಉದ್ದಕ್ಕೂ ಭಾರತವನ್ನು ಅನ್ವೇಷಿಸುತ್ತಾ, ಭಾರತದ ವೈವಿದ್ಯತೆಗಳು ಆಸ್ವಾದಿಸುತ್ತಾ,

ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ನಡೆಯುತ್ತಾನೆ ರಾಮ ಶ್ರೀ ರಾಹುಲ್‌ ಗಾಂಧಿ ಅವರು ಕೂಡ ಭಾರತದ ಶ್ರೇಷ್ಠತೆಯನ್ನು ಅನ್ವೇಷಿಸುತ್ತಾ ನಡೆಯುತ್ತಿದ್ದಾರೆ ಎಂದಿದೆ.

Exit mobile version