Karnataka: ಪಕ್ಕದ ರಾಜ್ಯ ಕೇರಳದಲ್ಲಿ ಕೋವಿಡ್ (Covid Guidelines – Kar Govt) 19 ರೂಪಾಂತರ ಪ್ರಕರಣ ಹಿನ್ನೆಲೆ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದ್ದು,
ಸಾರ್ವಜನಿಕರು ನಿಯಮಗಳನ್ನು ಪಾಲಿಸುವಂತೆ (Covid Guidelines – Kar Govt) ಸಲಹೆಯನ್ನು ನೀಡಿದೆ.
ಕೇರಳದಲ್ಲಿ (Kerala) ಕೋವಿಡ್-19 ರೂಪಾಂತರಿ ಜೆಎನ್1 (JN1) ಪ್ರಕರಣ ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ (Karnataka) ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ
ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳವಂತೆ ಸೂಚನೆ ನೀಡಲಾಗಿದೆ. ಕೇರಳ ಗಡಿ ಜಿಲ್ಲೆಗಳಾದ ಕೊಡಗು (Kodagu), ಮಂಗಳೂರು, ಚಾಮರಾಜನಗರದ ಭಾಗಗಳಲ್ಲಿ ಹೆಚ್ಚಿನ ನಿಗಾ ಇಡುವಂತೆ
ಸೂಚಿಸಲಾಗಿದ್ದು, ಕೇರಳದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡುವಂತೆ ಆದೇಶ
ಆರೋಗ್ಯ ಇಲಾಖೆ ಹೊರಡಿಸಿದ ಕೋವಿಡ್ ಮಾರ್ಗಸೂಚಿ:
60 ವರ್ಷಮೇಲ್ಪಟ್ಟ ಹಾಗೂ ಎಲ್ಲಾ ಹಿರಿಯ ನಾಗರೀಕರು ಅದರಲ್ಲೂ ಕಿಡ್ನಿ (Kidney), ಹೃದಯ, ಲಿವರ್ ಸಮಸ್ಯೆ ಸೇರಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಎದೆ
ಹಾಲುಣಿಸುವ ತಾಯಂದಿರು, ಹೊರಗಿನ ಸ್ಥಳಗಳಿಗೆ ಹೋಗುವಾಗ ಮಾಸ್ಕನ್ನು (Mask) ಕಡ್ಡಾಯವಾಗಿ ಧರಿಸಬೇಕು.
ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಮತ್ತು ಗಾಳಿ- ಬೆಳಕಿನ ವ್ಯವಸ್ಥೆಯಿಲ್ಲದ ಜಾಗಗಳಿಗೆ ತೆರಳದೆ ದೂರ ಇರುವುದು ಸೂಕ್ತವಾಗಿದ್ದು, ಜ್ವರ, ಕೆಮ್ಮು, ನೆಗಡಿ, (Fever, Cough, Cold) ಇತ್ಯಾದಿ
ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಅಷ್ಟೇ ಅಲ್ಲದೆ, ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು.
ದೈಹಿಕ ಸ್ವಚ್ಛತೆಯನ್ನು ಕಾಪಾಡಬೇಕು. ಆಗಾಗ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಉತ್ತಮ. ಈ ವೇಳೆ ಹಿರಿಯ
ನಾಗರಿಕರು ಮತ್ತು ಅನಾರೋಗ್ಯ ಪೀಡಿತರನ್ನು ಭೇಟಿ ಮಾಡುವುದನ್ನು ತಪ್ಪಿಸಬೇಕು.
ಇನ್ನು ವಿದೇಶ ಪ್ರಯಾಣ ಮಾಡುವ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕಾಗಿದ್ದು, ವಿಮಾನ ನಿಲ್ದಾಣದಲ್ಲಿ (Airport) ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ
ಪ್ರಕಟಿಸಲಾಗಿದ್ದು, ಕೋವಿಡ್ ರೂಪಾಂತರ ಪ್ರಕರಣ ಪತ್ತೆ ಹಿನ್ನೆಲೆ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಸಚಿವ ದಿನೇಶ್ ಗುಂಡೂರಾವ್ (Dinesh Gundurao) ನಿನ್ನೆ ಮನವಿ ಮಾಡಿದ್ದರು. ಗಡಿ ಭಾಗದಲ್ಲಿ ಹೆಚ್ಚು ಟೆಸ್ಟಿಂಗ್ ವ್ಯವಸ್ಥೆ ಮಾಡುವ ಬಗ್ಗೆಯೂ ಮಾಹಿತಿಯನ್ನು ನೀಡಿದ್ದರು.
ಕೇರಳದಲ್ಲಿ ಪತ್ತೆಯಾಗಿರುವ ಜೆಎನ್1 ಕೋವಿಡ್ ಉಪಪ್ರಭೇದದ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George), ಆತಂಕ ಪಡಬೇಕಾದ ಅಗತ್ಯವಿಲ್ಲ. ಅದೊಂದು
ಉಪಪ್ರಭೇದವಾಗಿದ್ದು, ಕೇರಳದಲ್ಲಿ ಅದನ್ನು ಈಗ ಪತ್ತೆ ಹಚ್ಚಲಾಗಿದೆ. 2-3 ತಿಂಗಳುಗಳ ಹಿಂದೆ ಸಿಂಗಾಪುರ (Singapura) ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಗಾಗಿದ್ದ ಭಾರತೀಯರಲ್ಲಿ ಈ
ಪ್ರಭೇದ ಪತ್ತೆಯಾಗಿತ್ತು.
ಭಾರತದ ಇತರೆ ರಾಜ್ಯಗಳಲ್ಲಿಯೂ ಈ ವೈರಸ್ (Virus) ಹರಡಿದ್ದು, ಆದರೆ ಕೇರಳವು ಮೊದಲೇ ಪತ್ತೆ ಹಚ್ಚಿದೆ. ರಾಜ್ಯದ ಆರೋಗ್ಯ ವ್ಯವಸ್ಥೆ ಉತ್ತಮವಾಗಿರುವುದರಿಂದ ಜಿನೊಮಿಕ್ ಸೀಕ್ವೆನ್ಸಿಂಗ್
(Genomic Sequencing) ಮೂಲಕ ಅದನ್ನು ನಾವು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ: ಉಪ ರಾಷ್ಟ್ರಪತಿಯನ್ನೇ ಅಣುಕಿಸಿದ ಟಿಎಂಸಿ ಸಂಸದ, ಅದನ್ನ ವಿಡಿಯೋ ಮಾಡಿದ ರಾಹುಲ್ ಗಾಂಧಿ: ಛೀಮಾರಿ ಹಾಕಿದ ಉಪ ರಾಷ್ಟ್ರಪತಿ
ಭವ್ಯಶ್ರೀ ಆರ್ ಜೆ