ಉತ್ತರ ಪ್ರದೇಶ ಡಿ 4 : ಕೊವೀಡ್ ಆತಂಕ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದರೆ ಸ್ವತಃ ವೈದ್ಯರೆ ಕೋವಿಡ್ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿರುವ ಘಟನೆನಡೆದಿದೆ. ಕೋವಿಡ್-19ನಿಂದ ಖಿನ್ನತೆಗೆ ಒಳಗಾದ ವೈದ್ಯನೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಮಾಡಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸುಶೀಲ್ ಕುಮಾರ್ ಎಂಬುವವರು ತಮ್ಮ ಪತ್ನಿ ಚಂದ್ರಪ್ರಭಾ(48), ಮಗ ಶಿಖರ್ ಸಿಂಗ್(18) ಹಾಗೂ ಮಗಳು ಖುಷಿ ಸಿಂಗ್ ಅವರನ್ನು ಕೊಂದಿದ್ದಾರೆ.
“ಕೋವಿಡ್-19 ಯಾರನ್ನೂ ಉಳಿಸುವುದಿಲ್ಲ. ಕೊರೋನಾದಿಂದಾಗಿ ಮೃತ ದೇಹಗಳನ್ನು ನೋಡಿ ಬೇಸರಗೊಂಡಿದ್ದೇನೆ. ತಮ್ಮ ಪತ್ನಿ ಮಕ್ಕಳನ್ನು ಕೋವಿಡ್ ನಿಂದ ಮುಕ್ತಗೊಳಿಸಲು ಕೊಲೆ ಮಾಡುತ್ತಿದ್ದೇನೆ” ಎಂದು ಆರೋಪಿ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಾನೆ.