ಬೆಂಗಳೂರು, ಮೇ. 03: ಸೋಲುಗಳು ಜೀವನದ ಒಂದು ಭಾಗ, ಜೀವನದಲ್ಲಿ ಇಂತಹ ಸೋಲುಗಳನ್ನು ಬಹಳ ನೋಡಿದ್ದೇನೆ ಎಂದು ತಮಿಳುನಾಡಿನ ಅರವಕುರುಚಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಣ್ಣಾಮಲೈ ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭಾಗೆ ಆಯ್ಕೆ ಬಯಸಿ ಅರವಕುರುಚಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಣ್ಣಾಮಲೈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೋಲುಗಳು ಜೀವನದ ಒಂದು ಭಾಗ, ಜೀವನದಲ್ಲಿ ಇಂತಹ ಸೋಲುಗಳನ್ನು ಬಹಳ ನೋಡಿದ್ದೇನೆ ಎಂದಿದ್ದಾರೆ.
ನಾನು ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಿಲ್ಲ. ಅರವಕುರುಚಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ಬಿಜೆಪಿ ಪರವಾಗಿ ಮತ ನೀಡಿದ 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳು. ಪುಟಿದೇಳುವ ಸಮಯ ಇದಾಗಿದ್ದು, ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕವಾಗಿ ಕೆಲಸ ಮುಂದುವರಿಸಬೇಕಿದೆ ಎಂದು ತಿಳಿಸಿದ್ದಾರೆ.
ಕರ್ನಾಟದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ, ತನ್ನ ಸೇವೆಗೆ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಸೇರಿದ ಅವರು ತಮಿಳುನಾಡಿನ ಅರವಕುರುಚಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಕ್ಷೇತ್ರದ ಮತದಾರರು ಕೈಹಿಡಿಯದ ಹಿನ್ನೆಲೆಯಲ್ಲಿ ಸೋಲನುಭವಿಸಿದ್ದರು.