Dharwad: ನೇಹಾ ಹಿರೇಮಠ್ ಹತ್ಯೆ (Neha Hiremath Murder Case) ಪ್ರಕರಣ ಮಾಸುವ (Dharwad Crime News Update) ಮುನ್ನವೇ, ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಅದೇ
ಮಾದರಿಯ ಮತ್ತೊಂದು ಪ್ರಕರಣ ನಡೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿರುವ,
ಕೇಶ್ವಾಪುರದ ಬಳಿಯ ಹಣ್ಣಿನ ವ್ಯಾಪಾರಿ ಅಫ್ತಾಬ್ ಶಿರಹಟ್ಟಿ (Aftab Shirahatti) ಎಂಬ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ (Keshwapura) ಪೊಲೀಸರು ಆರೋಪಿ ಅಫ್ತಾಬ್ ಶಿರಹಟ್ಟಿಯನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸ್ಥಳೀಯ ನ್ಯಾಯಾಲಯ
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ಬಗ್ಗೆ ಯುವತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರ ಈ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ.
ಯುವತಿಯ ಹೇಳಿಕೆಯಲ್ಲಿ ಏನಿದೆ..?
ಅಫ್ತಾಬ್ ಮತ್ತು ನನಗೆ ಕಳೆದ 2 ವರ್ಷದಿಂದ ಪರಿಚಯ ಇತ್ತು. ನನ್ನ ಮುಸ್ಲಿಂ (Muslim) ಗೆಳತಿ ಅಫ್ತಾಬ್ ನನ್ನು ಪರಿಚಯ ಮಾಡಿಕೊಟ್ಟಿದ್ದಳು. ಪರಿಚಯವಾದ ನಂತರ ಅಫ್ತಾಭ್ ನನ್ನನ್ನು ಪ್ರೀತಿ ಮಾಡು
ಎಂದು ನನ್ನ ಹಿಂದೆ ಬಿದ್ದಿದ್ದ. ನನ್ನ ಹುಟ್ಟುಹಬ್ಬದಂದು ಬಲವಂತವಾಗಿ ಗಿಫ್ಟ್ ಕೊಟ್ಟಿದ್ದ. ಆದರೆ ನೇಹಾ ಹಿರೇಮಠ ಹತ್ಯೆಯ ಪ್ರಕರಣ ನಂತರ ನನಗೆ ಭಯ ಆಗಿ, ಅವನ ಗೆಳೆತನ ಕಳೆದುಕೊಳ್ಳಲು ನಿರ್ಧಾರ
ಮಾಡಿ ಈ ವಿಚಾರವನ್ನು ಅಫ್ತಾಬ್ಗೆ ಹೇಳಿದೆ. ನಾನು ಅವನ ಅಂಗಡಿ ಹತ್ತಿರ ಬಂದು (Dharwad Crime News Update) ಅವನು ನೀಡಿದ ಗಿಫ್ಟ್ ವಾಪಸ್ ನೀಡಿದೆ.
ಬಳಿಕ ಆತ ಸಿಟ್ಟಿನಿಂದ ನನ್ನ ಮೇಲೆ ಹಲ್ಲೆ ನಡೆಸಿದ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವನನ್ನು ಹಿಡಿದು ಪೊಲೀಸ್ ಒಪ್ಪಿಸಿದ್ದಾರೆ. ಇನ್ನು ಸ್ಥಳೀಯರ ಹೇಳಿಕೆ ಪ್ರಕಾರ ಅಫ್ತಾಬ್ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ
ಎಂದು ತಿಳಿದು ಬಂದಿದ್ದು, ಯುವತಿ ಕುಟುಂಬಸ್ಥರು ಮತ್ತೊಂದು ಹೆಚ್ಚುವರಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣಡೆ ನಡೆಸುತ್ತಿದ್ದಾರೆ.
ಇದನ್ನು ಓದಿ: “ಆ ಮನುಷ್ಯನಿಗೆ ನನ್ನ ಸಲಾಮ್” – ರಾಹುಲ್ ಗಾಂಧಿಯ ಗುಣಗಾನ ಮಾಡಿದ ನಟ ಕಿಶೋರ್..!