ರಾಜ್ಯದ ಪ್ರತಿ ಹಳ್ಳಿಯ ೧೦ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದಿಂದ ಬಂಪರ್ ಗಿಫ್ಟ್ !

Bengaluru: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್(D.K.Shivakumar) ಅವರು ಈಗಾಗಲೇ ಅನೇಕ ಉಚಿತ ಯೋಜನೆಗಳನ್ನು (DKS gifted TV) ಘೋಷಣೆ ಮಾಡಿದ್ದಾರೆ.

ಆದರೆ ಇದೀಗ ಪಕ್ಷ ಘೋಷಣೆ ಮಾಡಿದ ಭರವಸೆಗಳನ್ನು ಹೆಚ್ಚು ಜನರಿಗೆ ತಲುಪಿಸುವ, ಪ್ರತಿ ಹಳ್ಳಿಯ ೧೦ ಕಾಂಗ್ರೆಸ್‌ಕಾರ್ಯಕರ್ತರಿಗೆ ಎಲ್‌ಇಡಿ (LED)ಟಿವಿಯನ್ನು

ಉಚಿತವಾಗಿ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ ಘೋಷಣೆ ಮಾಡಿದ್ಧಾರೆ.

D.K.Shivkumar

ಈ ಕುರಿತು ಮಾದ್ಯಮಗಳಿಗೆ ಮಾಹಿತಿ ನೀಡಿರುವ ಡಿ.ಕೆ.ಶಿವಕುಮಾರ ಅವರು, ಕಾಂಗ್ರೆಸ್‌ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ (Unit)ಉಚಿತ ವಿದ್ಯುತ್,

ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ ಮತ್ತು ಬಿಪಿಎಲ್‌ಕಾರ್ಡ್ಹೊಂದಿರುವವರಿಗೆ(BPL Card) 10ಕೆಜಿ ಉಚಿತ ಅಕ್ಕಿ ನೀಡುವ ಭರವಸೆಗಳನ್ನು ನೀಡಿದ್ದೇವೆ.

https://youtu.be/eRj4HpjlyFE

ಕಾಂಗ್ರೆಸ್‌ಪಕ್ಷ ನೀಡಿರುವ ಈ ಗ್ಯಾರಂಟಿಗಳನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಸಲುವಾಗಿ ನಮ್ಮ ಕಾರ್ಯಕರ್ತರಿಗೆ ಒಂದು ಟಾಸ್ಕ್ನೀಡಿದ್ದೇವೆ. ನಮ್ಮ ಭರವಸೆಗಳನ್ನು ಒಳಗೊಂಡಿರುವ ಭಿತ್ತಿಪತ್ರವನ್ನು ಜನರಿಗೆ ನೀಡಿ,

ಅವರಿಗೆ ಅದರ ಕುರಿತು ವಿವರಿಸಿ, ಅವರಿಂದ ಸಹಿ ಮಾಡಿಕೊಂಡು ಬರಬೇಕು. ಹೀಗೆ ಹೆಚ್ಚು ಜನರಿಗೆ ನಮ್ಮ ಭರವಸೆಗಳನ್ನು ತಲುಪಿಸಿದವರಿಗೆ ಟಿವಿಯನ್ನು ಉಡುಗರೆಯಾಗಿ ನೀಡಲಾಗುವುದು.

Congress

ಇನ್ನು ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ಮತ್ತು ಬಿಜೆಪಿಯವರು ಜನರಿಗೆ ದುಡ್ಡು ಹಂಚುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಮತದಾರರಿಗೆ ನಾನು ಹೇಳುವುದಿಷ್ಟೇ,

ಯಾರೇ ಹಣ ಕೊಟ್ಟರು ತೆಗೆದುಕೊಳ್ಳಿ, ಆದರೆ ನಿಮ್ಮ ಮತವನ್ನು ಮಾತ್ರ ಕಾಂಗ್ರೆಸ್‌ಪಕ್ಷಕ್ಕೆ ಹಾಕಿ. ಸದ್ಯ ರಾಜ್ಯದಲ್ಲಿ (DKS gifted TV) ಕಾಂಗ್ರೆಸ್‌ಪರವಾಗಿ ಜನಾಭಿಪ್ರಾಯವಿದೆ.

2023ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್‌(Congress)ಪಕ್ಷವೇ ಅಧಿಕಾರಕ್ಕೆ ಬರಲಿದೆ. ನಾವು ಅಧಿಕಾರಕ್ಕೆ ಬಂದರೆ ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ರಾಜ್ಯ ಕಾಂಗ್ರೆಸ್‌ನ(Congress) ಟಿವಿ ನೀಡುವ ಕಾರ್ಯಕ್ರಮವನ್ನು ಟೀಕಿಸಿರುವ ರಾಜ್ಯ ಬಿಜೆಪಿ, ನೋಟು ಕೊಟ್ಟು ಓಟು ಹಾಕಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ಈಗ ಟಿವಿ (TV)ಕೊಡಲು ಹೊರಟಿದೆ.

ರಾಜ್ಯ ಕಾಂಗ್ರೆಸ್‌ಪರ ಪ್ರಚಾರ ಮಾಡಲು ಕಾರ್ಯಕರ್ತರೇ ಇಲ್ಲದ ಕಾರಣ, ಬಹುಮಾನ ಘೋಷಿಸಿ ಕಾರ್ಯಕರ್ತರನ್ನು ಕರೆತರಬೇಕಾದ ದುಸ್ಥಿತಿಗೆ ಬಂದಿದೆ.

ರಾಜ್ಯದಲ್ಲಿ ಕೈ ಪಕ್ಷವನ್ನು ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸುವ ದಿನಗಳೂ ಬರಲಿವೆ ಎಂದು ಲೇವಡಿ ಮಾಡಿದೆ.

Exit mobile version