Mandya: ಒಂದೆಡೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ ಎಂಬ ಗಂಭೀರ ಸಮಸ್ಯೆ ಕೇಳಿಬರುತ್ತಿರುವ (Feticide Case in Mandya) ನಡುವೆಯೇ ಹೆಣ್ಣು ಭ್ರೂಣ ಹತ್ಯೆ (feticide) ವಿಚಾರ ಕೂಡ
ಸದ್ದು ಮಾಡುತ್ತಿದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಪದೇ ಪದೆ ಹೆಣ್ಣು ಮಕ್ಕಳ ಭ್ರೂಣ ಹತ್ಯೆಯ ಸುದ್ದಿ ಕೇಳಿ ಬರುತ್ತಲೇ ಇದೆ. ಆರು ತಿಂಗಳ ಬಳಿಕ ಮತ್ತೊಮ್ಮೆ ನಾಡಿನೆದುರು ಸಕ್ಕರೆ ನಾಡು
ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಕಾನೂನುಗಳಿದ್ದರೂ, ಜಾಗೃತ ದಳಗಳನ್ನು ರಚಿಸಿದ್ದರೂ ಕೃತ್ಯ ತಡೆಯಲಾಗುತ್ತಿಲ್ಲ ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
2023ರ ನವೆಂಬರ್ನಲ್ಲಿ ಬೆಂಗಳೂರಿನ (Bengaluru) ಬೈಯ್ಯಪ್ಪನಹಳ್ಳಿ ಪೊಲೀಸರು ಪತ್ತೆ ಹೆಚ್ಚಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲೂ ಮಂಡ್ಯ ಜಿಲ್ಲೆಗೆ ಕಪ್ಪು ಚುಕ್ಕೆ ಅಂಟಿತ್ತು. ಮಂಡ್ಯ ತಾಲೂಕು
ಹಾಡ್ಯ-ಹುಳ್ಳೇನಹಳ್ಳಿ ನಡುವಿನ ಆಲೆಮನೆಯಲ್ಲಿ ನಡೆಯುತ್ತಿದ್ದ ಹೆಣ್ಣುಲಿಂಗ ಭ್ರೂಣ ಪತ್ತೆ ಕಾರ್ಯ ನಡೆಸಿ, ಮೈಸೂರಿನ (Mysore) ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಹತ್ಯೆ ಮಾಡಲಾಗುತ್ತಿತ್ತು.
ಈ ಪ್ರಕರಣದಲ್ಲಿ ಶಾಮೀಲಾದ 10ಕ್ಕೂ ಹೆಚ್ಚು ಮಂದಿಯನ್ನು ಬೆಂಗಳೂರು (Feticide Case in Mandya) ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಘಟನೆಯ ನೆನಪು ಮಾಸುವ ಮುನ್ನವೇ ಪಾಂಡವಪುರದ ಆರೋಗ್ಯ ಇಲಾಖೆಯ (Health Department) ಕ್ವಾರ್ಟಸ್ನಲ್ಲೇ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಇದು ಆರೋಗ್ಯ
ಇಲಾಖೆಯ ಕಾರ್ಯಕ್ಷಮತೆಯನ್ನೇ ಪ್ರಶ್ನಿಸುವಂತಿದೆ. ಗಂಡು ಮಗುವೇ ಬೇಕೆಂಬ ದಂಪತಿ, ಕುಟುಂಬಗಳ ಪ್ರತಿಷ್ಠೆಯಿಂದ ಜಿಲ್ಲೆಯ ಗೌರವ ಮಣ್ಣುಪಾಲಾಗುತ್ತಿದೆ.
ಆರು ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಹಾಡ್ಯ-ಹುಳ್ಳೇನಹಳ್ಳಿ (Hadya-Hullenahalli) ಪ್ರಕರಣದ ಹಿನ್ನೆಲೆಯಲ್ಲಿಎಚ್ಚೆತ್ತಿದ್ದ ಜಿಲ್ಲಾಡಳಿತ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯಂತಹ ಪ್ರಕರಣಗಳು ನಡೆಯದಂತೆ
ತೀವ್ರ ನಿಗಾ ವಹಿಸಲು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತ ದಳಗಳನ್ನು ರಚಿಸಿತ್ತು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ
(PDO) ಅಧ್ಯಕ್ಷತೆಯಲ್ಲಿ ಜಾಗೃತ ದಳಗಳು ರಚನೆಯಾಗಿದ್ದರೂ ಪಾಂಡವಪುರದಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿ: ಸದ್ಯದಲ್ಲೇ ಮತ್ತೊಂದು ಸಿಡಿ ಹೊರಬರುತ್ತದೆ ಕಾಯುತ್ತಿರಿ ಎಂದ ಬಸನಗೌಡ ಪಾಟೀಲ್ ಯತ್ನಾಳ್