Chikkamagalauru: ಶೃಂಗೇರಿ (FIR-Contractor of Sringeri Mutt) ಮಠದ ಗುತ್ತಿಗೆದಾರ ಸಂದೀಪ್ ಅವರು, ಶೃಂಗೇರಿ ಮಠದಿಂದ ನಿರ್ಮಾಣವಾಗುತ್ತಿರುವ ಕಾಮಗಾರಿಗಾಗಿ ಅರಣ್ಯ
ನಾಶಪಡಿಸಿರುವ ಆರೋಪದ ಮೇಲೆ ಅವರ ವಿರುದ್ಧ FIR ದಾಖಲಿಸಲಾಗಿದೆ.
ಶೃಂಗೇರಿ ಸಮೀಪದ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ ಶಂಕರಾಚಾರ್ಯರ (Shankaracharya) ಪ್ರತಿಮೆ ಬಳಿ ಕಟ್ಟಡ ನಿರ್ಮಾಣ ಕಾಮಗಾರಿಗೆ JCB ಬಳಸಿ ಕಾಮಗಾರಿ ಮಾಡಿದ ಹಿನ್ನೆಲೆ ರಸ್ತೆಗೆ
ಅಡ್ಡಲಾಗಿ ಗುಡ್ಡದ ಮಣ್ಣು ಕುಸಿದು ಬಿಳುತ್ತಿದೆ. ಸದ್ಯ ಕಾಮಗಾರಿಗೆ ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ FIR ಹಾಕಲಾಗಿದೆ.
ಶೃಂಗೇರಿ ಮಠ (Sringeri Mutt) ದಿಂದ ನಿರ್ಮಾಣವಾಗಿರುವ ಶಂಕರಾಚಾರ್ಯರ ಪ್ರತಿಮೆ ಬಳಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕೆಳ ಭಾಗದಲ್ಲಿ ಮಣ್ಣು ಕುಸಿತ ಹಿನ್ನೆಲೆ ಮರಗಳ ಕಡಿದು
ಕಾಂಪೌಂಡ್ (Compound) ಗೋಡೆ ನಿರ್ಮಾಣ ಮಾಡಲಾಗಿದೆ. ಶೃಂಗೇರಿ ಸಮೀಪದ ಮಾರುತಿ ಬೆಟ್ಟದಲ್ಲಿ ಗುಡ್ಡದ ಮೇಲೆ JCB ಬಳಸಿ ಕಾಮಗಾರಿ ಮಾಡಿದ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಗುಡ್ಡದ
ಮಣ್ಣು ಕುಸಿದು (FIR-Contractor of Sringeri Mutt) ಬಿಳುತ್ತಿದೆ.
ಸದ್ಯ ಕಾಮಗಾರಿಗೆ ಗುಡ್ಡ ನಾಶ, ಮರಗಳ ಕಡಿತ ಹಿನ್ನೆಲೆ ಶೃಂಗೇರಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲಿ FIR ದಾಖಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಶೃಂಗೇರಿ RFO ಶೃತಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅರಣ್ಯ ಇಲಾಖೆ ಜನವರಿ 2 ರಂದೇ FIR ದಾಖಲಿಸಿ ತನಿಖೆ ನಡೆಸುತ್ತಿದೆ. ನೂರಾರು ಮರಗಳ ಕಡಿತ, ಗುಡ್ಡ ನಾಶವಾದ ಹಿನ್ನೆಲೆ ಸ್ವಯಂ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ. ಗುತ್ತಿಗೆದಾರ ಸಂದೀಪ್ (Sandeep) ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು
ಚಿಕ್ಕಮಗಳೂರು (Chikkamagalauru) ಜಿಲ್ಲೆಯ ಪ್ರವಾಸಿ ತಾಣ, ಪ್ರಸಿದ್ಧ ದೇವಾಲಯಗಳಿಗೆ 2023ರಲ್ಲಿಯೇ 80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಚಿಕ್ಕಮಗಳೂರು
ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಗಿಲೆತ್ತರದ ಬೆಟ್ಟಗಳು, ಪ್ರಪಾತಗಳು, ಜಲಪಾತಗಳು, ಹುಲ್ಲುಗಾವಲುಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ವೈವಿಧ್ಯಮಯ
ಪ್ರದೇಶಗಳಿರುವ ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಡಿಸೆಂಬರ್ (December) ಒಂದೇ ತಿಂಗಳಿನಲ್ಲಿ 11 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಹೆಚ್ಚಿನ ಪ್ರವಾಸಿಗರು ಮಹಿಳೆಯರೇ ಎಂಬುದು ವಿಶೇಷವಾಗಿದೆ.