ಮೈಸೂರು, ಫೆ. 24: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಹಾಡಹಗಲೇ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಯಲಾಗಿದೆ.
ಗ್ರಾಮ ಪಂಚಾಯಿತಿ ಕಚೇರಿ ಸಮೀಪದಲ್ಲಿರುವ ಮನೆಯ ಮುಂಭಾಗದಲ್ಲಿ ಹತ್ತಿ ಕಡ್ಡಿ ಮೆದೆಯ ಕೆಳಭಾಗದಲ್ಲಿ ಸಮೀಪದ ಜಮೀನುಗಳ ಕಡೆಯಿಂದ ಆಗಮಿಸಿದ ಚಿರತೆ ಬಂದು ವಾಸ್ತವ್ಯ ಹೂಡಿ ಜನಸಾಮಾನ್ಯರಲ್ಲಿ ಭಯ ಉಂಟು ಮಾಡಿತ್ತು.
ತಕ್ಷಣ ಅರಣ್ಯ ಇಲಾಖೆಯವರಿಗೆ ವಿಚಾರ ತಿಳಿಯುತ್ತಿದ್ದಂತೆ ಶಾಲಿನಿ ತಂಡದವರು ಚಿರತೆಯನ್ನು ಸೆರೆಹಿಡಿಯಲು ಪ್ರಯತ್ನ ನಡೆಸಿದರೂ ರಾತ್ರಿಯಾದರೂ ಸಫಲರಾಗಲಿಲ್ಲ. ಕೊನೆಗೂ ಚಿರತೆ ಸೆರೆ ಸಿಕ್ಕಿದೆ.