ಗಾಜಾ ಪಟ್ಟಿಯಲ್ಲಿ ಹಮಾಸ್ 16 ವರ್ಷಗಳ ಆಳ್ವಿಕೆ ಕೊನೆ, ಗಾಜಾ ಇಸ್ರೇಲ್ ವಶ: ಇಸ್ರೇಲ್​​ ರಕ್ಷಣಾ ಸಚಿವ

ಹಮಾಸ್ (Hamas) ಗಾಜಾ ಪಟ್ಟಿಯನ್ನು 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್​​ ವಶವಾಗಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ (Gaza occupied by Israel)

ಯೋವ್ ಗ್ಯಾಲಂಟ್ (Yove gallant) ತಿಳಿಸಿದ್ದಾರೆ. ಹಮಾಸ್​​ ಗಾಜಾ ಪಟ್ಟಿ ಅಧಿಕಾರಿವನ್ನು ಕಳೆದುಕೊಂಡಿದ್ದು, ಉಗ್ರರು ದಕ್ಷಿಣದ ಕಡೆ ಪಲಾಯನವಾಗುತ್ತಿದ್ದಾರೆ. ನಾಗರಿಕರು ಹಮಾಸ್​​​​

ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು (Gaza occupied by Israel) ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಗಾಜಾ ಪಟ್ಟಿಯ (Gazapatti) ಅಧಿಕಾರಿವನ್ನು ಹಮಾಸ್​​ ಕಳೆದುಕೊಂಡಿದ್ದು, ಉಗ್ರರು ದಕ್ಷಿಣದ ಕಡೆ ಓಡಿ ಹೋಗುತ್ತಿದ್ದಾರೆ. ನಾಗರಿಕರು ಹಮಾಸ್​​​​ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು

ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಪ್ರಕಟ ಮಾಡಲಾಗಿದೆ. ಅಲ್ಲಿನ ಜನರಿಗೆ ಹಮಾಸ್​​​ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಹಮಾಸ್​​​ ಇಸ್ರೇಲ್ (Israel)​​​ ಮೇಲೆ ಅಕ್ಟೋಬರ್​ 6ರಂದು ದಾಳಿ ಮಾಡಿತ್ತು. ಈ ದಾಳಿಯಿಂದ 1,200 ಇಸ್ರೇಲ್​​ ನಾಗರಿಕರು ಸಾವನ್ನಪ್ಪಿದರು. ಜತೆಗೆ ಇಸ್ರೇಲ್​​​ ಸೇರಿ ಬೇರೆ ಬೇರೆ ದೇಶದ ನಾಗರಿಕರನ್ನು

ಒತ್ತೆಯಾಳುಗಾಗಿ ಇಟ್ಟುಕೊಂಡಿದ್ದರು. ಇದು ಇಸ್ರೇಲ್​​​ನ 75 ವರ್ಷದ ಇತಿಹಾಸದಲ್ಲಿ ನಡೆದ ಮಾರಣಾಂತಿಕ ಘಟನೆ ಎಂದು ಯೋವ್ ಗ್ಯಾಲಂಟ್ ಹೇಳಿದ್ದಾರೆ.

ಇಸ್ರೇಲ್​​​ ಹಮಾಸ್​​ಗೆ ಪ್ರತ್ಯುತ್ತರ ನೀಡಿದ್ದು, ಹಮಾಸ್​​ ಪ್ರಾರಂಭಿಸಿದನ್ನು ಇಸ್ರೇಲ್​​ ಅಂತ್ಯ ಮಾಡಲು ಮುಂದಾಗಿದೆ. 4000 ಕ್ಕೂ ಹೆಚ್ಚು ಹಮಾಸ್​​​​ ಉಸಿರು ನಿಲ್ಲಿಸಿದೆ. ಹಮಾಸ್​​​ ತಾಣಗಳ ಮೇಲೆ ಇಸ್ರೇಲ್​​

ದಾಳಿ ಮಾಡಿ ಧ್ವಂಸ ಮಾಡಿದೆ. ಒತ್ತೆಯಾಳುಗಳನ್ನು ರಕ್ಷಣೆ ಮಾಡಿ ಇಸ್ರೇಲ್​​​ಗೆ ಕರೆದುಕೊಂಡು ಬಂದಿದ್ದಾರೆ. ಇದೀಗ ಹಮಾಸ್​​​ ದೊಡ್ಡ ಬಲವಾಗಿದ್ದ ರಾಂಟಿಸ್ಸಿ (Rantissi) ಆಸ್ಪತ್ರೆಯ ನೆಲಮಾಳಿಗೆ ಮೇಲೆ

ಇಸ್ರೇಲ್​​ ದಾಳಿ ಮಾಡಿದೆ.

ಅಲ್ಲಿರುವ ಒತ್ತೆಯಾಳುಗಳನ್ನು ಕಾಪಾಡುವ ಕೆಲಸ ಮಾಡುತ್ತಿದ್ದು, ಹಮಾಸ್​​ನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೆ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್​​ ಹೇಳಿದೆ. ಇನ್ನು ಇಸ್ರೇಲ್​​​​

ಗಾಜಾದಲ್ಲಿರುವ ಹಮಾಸ್​​ ತಾಣಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೂ ಮುನ್ನ ಗಾಜಾ ಪಟ್ಟಿ ನಾಗರಿಕರನ್ನು ಜಾಗ ಖಾಲಿ ಮಾಡುವಂತೆ ಎಚ್ಚರಿಕೆಯನ್ನು ನೀಡಿತ್ತು.

ಇನ್ನು ಅನೇಕರು ಗಾಜಾದಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾದಲ್ಲಿ(Al Shifa) ಆಶ್ರಯ ಪಡೆದರು. ಆದರೆ ಅಲ್ಲಿ ಈಗಾಗಲೇ ಔಷಧಿ, ಆಹಾರ, ವಿದ್ಯುತ್​​ ಇಲ್ಲದೆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು

ಹೇಳಲಾಗಿದ್ದು, ಅನೇಕ ದೇಶಗಳು ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡುವಂತೆ ಹೇಳಿತ್ತು. ಆದರೆ ಈ ಒತ್ತಡವನ್ನು ಇಸ್ರೇಲ್​​​ ವಿರೋಧಿಸಲೇ ಬಂದಿದೆ. ಒಂದು ವೇಳೆ ಕದನ ವಿರಾಮವನ್ನು

ಪರಿಗಣಿಸಬೇಕಾದರೆ ಹಮಾಸ್ ಅಕ್ಟೋಬರ್ (October) 7 ರ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ 240 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಂದಿರುಗಿಸಬೇಕೆಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು

((Benjamin Netanyahu) ಖಡಕ್​​​ ಹೇಳಿದ್ದಾರೆ.

ಇದನ್ನು ಓದಿ: ಮೇಲ್ನೋಟಕ್ಕೆ ಸರಳರಾಮಯ್ಯ, ಒಳಗೆ ಐಶಾರಾಮಯ್ಯ: ಸಿದ್ದರಾಮಯ್ಯ ಅವರ ವಿರುದ್ಧ ಎಚ್‌ಡಿಕೆ ವಾಗ್ದಾಳಿ

Exit mobile version