Bengaluru: ಸಿಲಿಕಾನ್ ಸಿಟಿ (Silicon City) ಎಂದೇ ಖ್ಯಾತಿಯಾಗಿರುವ ಬೆಂಗಳೂರಿನಲ್ಲಿ ಟ್ರಾಫಿಕ್ (GPS in Traffic Signal) ಸಮಸ್ಯೆ ತುಂಬಾ ಹೆಚ್ಚಾಗಿದೆ. ಹೆಚ್ಚು ವಾಹನಗಳ ಸಂಖ್ಯೆ ಇರುವುದರಿಂದ
ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಟ್ರಾಫಿಕ್ ದೊಡ್ಡ ಮಟ್ಟದಲ್ಲಿ ಕುಖ್ಯಾತಿಗಳಿಸಿದ್ದು, ವೀಕೆಂಡ್ (Weekend) ಅವಧಿಯಲ್ಲಿ ಬೆಂಗಳೂರು ಸಂಚಾರಿ ದಟ್ಟಣೆಯ ಫೋಟೋಗಳು
ವಿಡಿಯೋಗಳು ಸಾಕಷ್ಟು ಸದ್ದು ಮಾಡಿವೆ. ಇದರಿಂದ ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಪೊಲೀಸರು ಹೊಸ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದ್ದಾರೆ.
ಜಪಾನ್ (Japan) ತಂತ್ರಜ್ಞಾನದ ಟ್ರಾಫಿಕ್ ತಂತ್ರಜ್ಞಾನ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಲ್ಲಿ ನೂರು 190 ಕಿಲೋಮೀಟರ್ ಟನಲ್ ರೋಡ್ ನಿರ್ಮಾಣ ಮಾಡುವ ಪ್ರಸ್ತಾಪವು ಇದೆ.
ಹೆಚ್ಚಾಗುತ್ತಿರುವ ಟ್ರಾಫಿಕ್ ನ ಕಾರಣ ಬೆಂಗಳೂರು (Bengaluru) ನಗರದಲ್ಲಿ ಸಂಚಾರ ನಿಯಂತ್ರಿಸಲು ಟ್ರಾಫಿಕ್ ಪೊಲೀಸರಿಂದ ಸಾಧ್ಯವಾಗದಿಲ್ಲದ ಕಾರಣ ಅತ್ಯಾಧುನಿಕ ತಂತ್ರಜ್ಞಾನಗಳ ಮೊರೆ
ಹೋಗುತ್ತಿದ್ದು, ಇದರ ಜೊತೆಯಲ್ಲಿ ಬೆಂಗಳೂರು ನಗರದ ಹಲವಡೆ ಸುರಂಗ ಮಾರ್ಗಗಳನ್ನು (GPS in Traffic Signal) ನಿರ್ಮಾಣ ಮಾಡೋಕೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.
ನಗರದ ಟ್ರಾಫಿಕ್ (Traffic) ಸಮಸ್ಯೆಗಳನ್ನು ಬಗೆಹರಿಸಲು ಮತ್ತು ನಿಯಂತ್ರಿಸಲು ಆಗಾಗ ಕಾರಣ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಜಪಾನ್ ತಂತ್ರದ ತಂತ್ರಜ್ಞಾನ ಅಳವಡಿಸಲು ಸಜ್ಜಾಗಿದ್ದಾರೆ.
ಎಡ ತಿರುವು ಬಲ ತಿರುವಿಗೆ ಅವಕಾಶ ಸಿಗದೇ ವಾಹನಗಳು ಸಿಗ್ನಲ್ ಬಿದ್ದರೂ ಮುಂದಕ್ಕೆ ಸಾಗದಂತ ಸನ್ನಿವೇಶ ನಿರ್ಮಾಣವಾಗುತ್ತಿದೆ. ಜೊತೆಗೆ ಬೆಂಗಳೂರಿನಲ್ಲಿ ವಾಹನಗಳು ಪ್ರಮಾಣ ಕೂಡ ದಿನದಿಂದ.
ಹೆಚ್ಚಾಗುತ್ತಿರುವ ಕಾರಣ ಬೆಂಗಳೂರಿನ ಟ್ರಾಫಿಕ್ ಪೊಲೀಸರು ನಗರ ಕೇಂದ್ರ ಭಾಗಗಳಲ್ಲಿ ಸಂಚಾರದಟ್ಟಣೆ ತಪ್ಪಿಸುವುದಕ್ಕಾಗಿ ಜಪನ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಟ್ರಾಫಿಕ್ ಸಿಗ್ನಲ್ಗಳಲ್ಲಿ (Signal) ವಾಹನಗಳ ದಟ್ಟಣೆ ಆದರಿಸಿ ಸಿಗ್ನಲ್ ನಿಯಂತ್ರಣ ಮಾಡುವ ತಂತ್ರಜ್ಞಾನ ಇದಾಗಿದೆ. ಬೆಂಗಳೂರಿನ 28 ಪ್ರಮುಖ ವೃತ್ತಗಳಲ್ಲಿ ಜಾರಿಮಾಡಲಾಗಿದ್ದು, ಹೊಸ ತಂತ್ರಜ್ಞಾನವನ್ನು
ಅಳವಡಿಸಲು ಹಿಂದೆ ಸರ್ಕಾರ ನಿರ್ಧಾರ ಮಾಡಿತ್ತು. ಇದಕ್ಕಾಗಿ 28 ಸಿಗ್ನಲ್ ಗಳನ್ನು ಗುರುತಿಸಲಾಗಿತ್ತು. ಆ 28 ಸಿಗ್ನಲ್ ಗಳಿಗೆ ಇಂಟರ್ನೆಟ್ ಸಂಪರ್ಕ ಹಾಗೂ ಜಿಪಿಎಸ್ (GPS) ವ್ಯವಸ್ಥೆ ಅಳವಡಿಕೆ ಮಾಡಲಾಗುತ್ತದೆ.
ಇದರ ನೇರ ಸಂಪರ್ಕ ಬೆಂಗಳೂರಿನ ಸಂಚಾರ ಮಾಹಿತಿ ಕೇಂದ್ರಕ್ಕೆ ರವಾನೆ ಆಗುತ್ತೆ, ಎಚ್ಎಸ್ಆರ್ ಲೇಔಟ್ (HSR Layout) ನಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ತಂತ್ರಜ್ಞಾನ ಸಿಗ್ನಲ್
ಮೇಲೆ ನಿಗವಹಿಸುತ್ತದೆ. ಯಾವುದಾದರೂ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದ್ರೆ ಸಿಗ್ನಲ್ ಕೂಡಲೇ ಹಸಿರು ಬಣ್ಣಕ್ಕೆ ತಿರುಗುತ್ತೆ, ಈ ಮೂಲಕ ವಾಹನಗಳ ಗಂಟೆ ಸಿಗ್ನಲ್ ನಲ್ಲಿ ಕಾದು ನಿಲ್ಲೋದನ್ನು
ತಪ್ಪಿಸಬಹುದು ಇನ್ನು ಡಿಜಿಟಲ್ ಬೋರ್ಡ್ಗಳನ್ನು (Digital Board) ಅಳವಡಿಸಿದರೆ ಸಂಚಾರದಟ್ಟಣೆ ಇರುವ ರಸ್ತೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ರಸ್ತೆಗಳೆಲ್ಲವೂ ಚಿಕ್ಕದಾಗಿರುವ ಕಾರಣದಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) 190 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಮಾಡಿದ್ದಾರೆ.
ಈ ಯೋಜನೆಗೆ ಎಂಟು ಕಂಪನಿಗಳು ಅರ್ಹತೆ ಪಡೆದುಕೊಂಡಿದ್ದು ಮುಂದಿನ 45 ದಿನಗಳ ಒಳಗೆ ಟೆಂಡರ್ ಕರೆಯಲು ನಿರ್ಧಾರ ಮಾಡಲಾಗಿದೆ. ಮೊದಲು ಟ್ರಾಫಿಕ್ ಸಮಸ್ಯೆಯ ಅಧ್ಯಯನ
ಮಾಡಲಾಗಿ ನಂತರ ಮಾರ್ಗ ನಿರ್ಮಾಣವಾಗಲಿದೆ.
ಮಿಲ್ಲೆರ್ ರಸ್ತೆ (Miller Road), ಚಾಲುಕ್ಯವೃತ್ತ, ರೆನೆಟಿ ವೃತ್ತಾ, ಸರ್ಜಾಪುರ ರಸ್ತೆ, ಹೊಸೂರ್ ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರ್ ರಸ್ತೆಯಿಂದ ಶಿರಸಿ ಸರ್ಕಲ್,
ಮಾಗಡಿ ರಸ್ತೆ,ಬಳ್ಳಾರಿ ರಸ್ತೆ (Bellary Road), ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್ ನಿಂದ ಮೇಕ್ರಿ ವೃತ್ತ, ತುಮಕೂರ್ ರಸ್ತೆ, ಯಶವಂತಪುರ ಜಂಕ್ಷನ್ ಹೊರ ವರ್ತುಲ ರಸ್ತೆಯಲ್ಲಿ,
ಗೊರಗುಂಟೆ ಪಾಳ್ಯ, ಕೆಆರ್ ಪುರಂ,ಸಿಲ್ಕ್ ಬೋರ್ಡ್ (Silk Board) ರಸ್ತೆಗಳಲ್ಲಿ ಟನಲ್ ರಸ್ತೆ ನಿರ್ಮಿಸುವ ಪ್ರಸ್ತಾಪ ಇದೆ.
ಅನೇಕ ಅಂಡರ್ ಪಾಸ್ (Under Pass) ಗಳಿದ್ದರೂ, ಆದರೆ ಈ ಅಂಡರ್ ಪಾಸ್ಗಳು ನಿರ್ವಹಣೆ ಕೊರೆತೆ ಎದುರಿಸುತ್ತಿವೆ. ಮಳೆಗಾಲ ಬಂದರೆ ಮಳೆಯ ನೀರು ಅಂಡರ್ ಪಾಸ್ ಗಳಲ್ಲಿ ನಿಲ್ಲುತ್ತವೆ
ಅಂಡರ್ ಪಾಸ್ ಪರಿಸ್ಥಿತಿ ಹೀಗಾಗಿರುವ ಕಾರಣಗಳಿಂದ ಸುರಂಗ ರಸ್ತೆ ನಿರ್ಮಾಣ ಕಾರ್ಯದಲ್ಲಿ ಈ ಸಮಸ್ಯೆಗಳು ಕಡಿಮೆಯಾಗುವಂತೆ ಕಾರ್ಯ ಕೈಗೊಳ್ಳಬೇಕು.
ಇದನ್ನು ಓದಿ: ವಾಚ್ ಪ್ರಿಯರಿಗೊಂದು ಗುಡ್ ನ್ಯೂಸ್: ಭಾರತದಲ್ಲಿ ಬಿಡುಗಡೆಯಾಗಿದೆ ಗೂಗಲ್ ಪಿಕ್ಸೆಲ್ ವಾಚ್ 2
- ಧನಂಜಯ್