ಬೆವರು ಸುರಿಸಿ ಬಂದಿದ್ದಾರೆ ಮಹಾನ್ ನಾಯಕರು ; ಈಗ ದಾಖಲೆ ಬಿಡುಗಡೆ ಮಾಡುವ ಸಮಯ : ಹೆಚ್.ಡಿ.ಕೆ!

politics

ಕಾಂಗೆಸ್ ನಾಯಕರು ಕಳೆದ ಒಂದೆರೆಡು ದಿನಗಳಿಂದ ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ಇವತ್ತು ಬಂದಿದ್ದಾರೆ. ಮಹಾನ್ ನಾಯಕರು ಪಾಪ ಪಾದಯಾತ್ರೆ ಮಾಡಿ ಸುಸ್ತಾಗಿ ಬಂದಿದ್ದಾರೆ ಅಲ್ವಾ? ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ ಅವರು ಮಾತಿನ ಚಾವಟಿ ಬೀಸಿದ್ದಾರೆ. ಇವತ್ತು ನಮ್ಮ ನೀರು, ನಮ್ಮ ಹಕ್ಕು ಎಂದು ಬಂದಿದ್ದಾರೆ. ಪಾಪ ಪಾದಯಾತ್ರೆ ಮಾಡಿ ಬೆವರು ಹರಿಸಿ ಬಂದಿರುವ ಮಹಾನ್ ನಾಯಕರಿಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೀನಿ.

ದಾಖಲೆಯನ್ನು ಮುಂದಿಟ್ಟುಕೊಂಡು ನೀರು ಉಳಿಸಿಕೊಳ್ಳಲು ಚರ್ಚೆ ಮಾಡುತ್ತಾರಾ ನೋಡೋಣ. ರಾಮಲಿಂಗರೆಡ್ಡಿ ಹೇಳಿದ್ದನ್ನು ಕೇಳಿದ್ದೀನಿ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ವಿಧಾನಸೌಧದಲ್ಲಿ ಹೇಳಿದರು. ಇದೇ ರಾಮಲಿಂಗಾರೆಡ್ಡಿ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಆಲಿಸಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ್ರು ಪ್ರಧಾನಿಯಾಗಿದ್ದಾಗ ಅಂದು 9 ಟಿ.ಎಂ.ಸಿ ನೀರು ಕೊಡಲಿಲ್ಲ ಅಂದಿದ್ದರೆ ಇಂದು ಅದೆಲ್ಲಾ ಅಗುತ್ತಿತ್ತಾ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Exit mobile version