Bengaluru: ಮೆಟ್ರೋ ಕಾಮಗಾರಿಗೆ ಇಲ್ಲವೇ ರೈಲ್ವೆ ಯೋಜನೆಗಳಿಗೆ ತೀರಾ ತೀರಾ ಅನಿವಾರ್ಯವಾದರಷ್ಟೇ ಮರಗಳನ್ನು ಕಡಿಯಲು ಅನುಮತಿ ಕೇಳಿ.ಇಲ್ಲವಾದರೆ ಮರಗಳನ್ನು ಕಡಿಯದಂತೆ ಕಾಮಗಾರಿ ನಡೆಸಿ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿ (BBMP)ಗೆ ಹಾಗೂ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ 699 ಮರಗಳನ್ನು ಕಡಿಯುವ ನಿರ್ಣಯಕ್ಕೆ ಕೋರ್ಟ್ ತಡೆಯಾಜ್ಞೆ ಹೊರಡಿಸಿ ಬಿಬಿಎಂಪಿ ಗೆ ಶಾಕ್ ನೀಡಿದೆ.
![Highcourt](https://sp-ao.shortpixel.ai/client/to_webp,q_glossy,ret_img,w_1024,h_614/https://vijayatimes.com/wp-content/uploads/2023/09/1300923-bbmp-1024x614.webp)
ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (BSRP) ಕಾರಿಡಾರ್ 2 ರಲ್ಲಿ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ಮಧ್ಯೆಸಂಪರ್ಕ ಕಲ್ಪಿಸಲು ಸಿದ್ಧವಾಗಿರುವ ಹೊಸ ಯೋಜನೆಯು ನೀಲನಕ್ಷೆಯ ಪ್ರಕಾರ 699 ಮಾರಗಳನ್ನು ಕಡಿಯುವುದು ಅನಿವಾರ್ಯವಾಗಿತ್ತು.
ಹಾಗಾಗಿ ಈ ಕಾಮಗಾರಿಗಾಗಿ ಜುಲೈ (July)12 ರವರೆಗೆ ಒಟ್ಟೂ 699 ಮರಗಳ ಮಾರಣ ಹೋಮ ನಡೆಸಲು ಉದ್ದೇಶಿಸಿರುವುದಕ್ಕೆ ಕರ್ನಾಟಕ ಹೈಕೋರ್ಟ್ (Karntaka Highcourt) ಬುಧವಾರ ತಡೆಯಾಜ್ಞೆ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ (K V Aravind) ಅವರ ವಿಭಾಗೀಯ ಪೀಠವು ಮಧ್ಯಂತರ ಆದೇಶ ನೀಡಿ ಮರ ಕಡಿಯುವುದಕ್ಕೆ ನಿಷೇದ ಹೇರಲಾಗಿದೆ.
![](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/04/426148-karnataka-high-court-on-perjury-prosecution-pursuing-perjury-charges-when-a-prima-facie-deliberate-intention-is-disclosed-1024x576.jpg)
ಇನ್ನು 2024 ರ ಮೇ 29 ರಂದು ನೀಡಿದ ಜ್ಞಾಪಕ ಪತ್ರದಲ್ಲಿ, ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರಸ್ತೆಯನ್ನು ಅಗಲಗೊಳಿಸಲು 699 ಮರಗಳನ್ನು ಕಡಿಯಲು ಅನುಮತಿ ನೀಡಿದ್ದರು. 89 ಮರಗಳನ್ನು ಸ್ಥಳಾಂತರಿಸಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ 699 ಕಡಿಯಲು ಮುಂದಾಗಿದ್ದರು ಆದರೆ ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ (Bengaluru Environment Trust) ಬೆಂಗಳೂರಿನಲ್ಲಿ ಮರ ಗಣತಿ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನಂತರ ನ್ಯಾಯಪೀಠ ಈ ಆದೇಶ ನೀಡಿದೆ.
ಯಾವೊಬ್ಬ ಕನ್ನಡಿಗ ಕೂಡ ಮರಗಳನ್ನು ಕತ್ತರಿಸುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇದೀಗ ಮರ ಕಡಿಯುವಿಕೆ ವಿಚಾರವಾಗಿ ಬಿಬಿಎಂಪಿ ಪ್ರತಿಕ್ರಿಯೆಯನ್ನು ಸಲ್ಲಿಸಲು ಜುಲೈ 8 ರವರೆಗೆ ವಿಭಾಗೀಯ ಪೀಠ ಕಾಲಾವಕಾಶ ನೀಡಿದೆ.