ತುಮಕೂರು ಜಿಲ್ಲೆ ನಿಮ್ಮಪ್ಪಂದಾ ? – ಹೆಚ್.ಡಿ. ಕುಮಾರಸ್ವಾಮಿ

kumaraswamy

ಬೆಂಗಳೂರು ಜ 24 : ಜೆಡಿಎಸ್‌ ಪಕ್ಷವನ್ನು ತುಮಕೂರಿನಿಂದ ಓಡಿಸಿ ಎಂಬ ಕೀಳುಮಟ್ಟದ ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಹೆಚ್‌.ಎಇ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿಯ ಬಾಲಂಗೋಚಿ ಅದನ್ನು ತುಮಕೂರಿನಿಂದ ಓಡಿಸಿ ಎಂದು ಹೇಳಿದ ಸಿದ್ದರಾಮಯ್ಯನವರ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಬಿಜೆಪಿ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಅವಕಾಶವಾದಿ ರಾಜಕಾರಣವನ್ನು ಮಾಡುತ್ತಿವೆ. ಇತಿಹಾಸದಲ್ಲಿ ಕಾಣದಷ್ಟು ಭ್ರಷ್ಟಾಚಾರ ಮಾಡುತ್ತಿರುವ ಬಿಜೆಪಿಗೆ ಜೆಡಿಎಸ್‌ ಬಾಲಂಗೋಚಿಯಾಗಿ ನಿಂತಿದೆ ಆದ್ದರಿಂದ ಕೈ ಮುಗಿದು ಕೇಳುತ್ತೇನೆ ಮೊದಲು ತುಮಕೂರಿನಿಂದ ಜೆಡಿಎಸ್‌ ಅನ್ನು ಓಡಿಸಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದರು ಇದ್ದಕ್ಕೆ ಪ್ರತಿಕ್ರಿಯಿಸಿದ ಹೆಚ್. ಡಿ. ಕೆ  ತುಮಕೂರಿನಿಂದ ಜೆಡಿಎಸ್ ಪಕ್ಷವನ್ನು ಓಡಿಸಿ ಎಂದು ಹೇಳುವುದಕ್ಕೆ ತುಮಕೂರು ಜಿಲ್ಲೆಯೇನು ನಿಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್ ಪಕ್ಷದ ನ ಪಿತ್ರಾರ್ಜಿತ ಆಸ್ತಿಯಾ? ಎಂದು ಸಿದ್ದರಾಮಯ್ಯನವರಿಗೆ ತಿರುಗೇಟನ್ನು ನೀಡಿದರು.

ಸಿದ್ದರಾಮಯ್ಯನವರೇ ನೀವು ಕಾಂಗ್ರೇಸ್ ಪಕ್ಷವನ್ನು ಸೇರುವ ಮೊದಲು ಯಾರ ಬಾಲಂಗೋಚಿಯಾಗಿದ್ದೀರಿ? ಚುನಾವಣೆಯ ವೇಳೆ ಗುರುಸ್ವಾಮಿ ಅವರೆದುರು ಸೋತು ಸುಣ್ಣವಾದ ಮೇಲೆ ಯಾರ ಮುಂದೆ ನಿಂತು ಗಳಗಳನೆ ಅತ್ತು ರಾಜಕೀಯ ಬಿಟ್ಟು ವಕೀಲ ವೃತ್ತಿ ಮಾಡುತ್ತೀನಿ ಅಂದಿದ್ದಿರಿ ಮರೆತು ಹೋಯ್ತಾ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲವನ್ನು ನೀಡುತ್ತಿದೆ ಎಂದು ಹೇಳುವ ನಿಮ್ಮ ಸುಳ್ಳು ನಾಲಿಗೆಯ ಕಥೆ ನನಗೆ ತಿಳಿದಿಲ್ಲವೇ, ನೀವು ಯಾರ ಬಾಲಂಗೋಚಿ ಎಂದು ನಂಗೆ ಗೊತ್ತಿದೆ ನಿಮಗೆ ಮುಖ್ಯಮಂತ್ರಿಯಾಗುವ ದುರಾಸೆ ಇನ್ನೂ ಅವಕಾಶ ಸಿಗುತ್ತದೆಯೋ ಎಂದು ಕಾಯುತ್ತ ಇದ್ದೀರಿ ಎಂದು ಟೀಕಿಸಿದರು.

Exit mobile version