ಹುಬ್ಬಳ್ಳಿಯಲ್ಲಿ ಕಿಡಿಗೇಡಿಗಳ ಜೊತೆ ಅಮಾಯಕರನ್ನು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಇದೆ : ಹೆಚ್‍ಡಿಕೆ!

HDK

ಹುಬ್ಬಳ್ಳಿಯಲ್ಲಿ(Hubbali) ನಡೆದ ಗಲಾಟೆಗೆ ಸಂಬಂಧಿದಂತೆ ಕೆಲ ಅಮಾಯಕ ಮುಸ್ಲಿಂ(Muslim) ಸಮುದಾಯದ ಯುವಕರನ್ನು ಪೋಲಿಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಇದೆ. ಪೋಲಿಸರು ಗುಂಪಿನಲ್ಲಿ ಕಿಡಿಗೇಡಿಗಳನ್ನು ಬಂಧಿಸುವಾಗ ಅಮಾಯಕರನ್ನು ಬಂಧಿಸಿದ್ದಾರೆ ಎಂದು ಮಾಜಿ ಸಿಎಂ(Former CM) ಎಚ್.ಡಿ ಕುಮಾರಸ್ವಾಮಿ(HD Kumarswamy) ಹೇಳಿದ್ದಾರೆ.

ಹುಬ್ಬಳ್ಳಿ ಗಲಾಟೆ ವಿಚಾರದಲ್ಲಿ ಮತಿಗೇಡಿ ಯುವಕರು ಎಸಗಿದ ಅಪರಾಧಕ್ಕೆ ಕೆಲ ಅಮಾಯಕರು ಶಿಕ್ಷೆ ಅನುಭವಿಸುವಂತಾಗಿದೆ. ಅನೇಕ ಕುಟುಂಬಗಳ ತಂದೆ-ತಾಯಿಯರು ನನಗೆ ಫೋನ್ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಕುರಿತು ನಾನು ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮೀಷನರ್ ಜೊತೆ ಮಾತನಾಡಿದ್ದೇವೆ. ಗಲಾಟೆಯಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. ಶಾಂತಿ-ಸುವ್ಯವಸ್ಥೆ ಹಾಳು ಮಾಡುವ ಕಿಡಿಗೇಡಿಗಳ ಮೇಲೆ ನಿರ್ದಾಕ್ಷ್ಯ ಕ್ರಮ ಕೈಗೊಳ್ಳಿ.

ಆದರೆ ಅಮಾಯಕರಿಗೆ ತೊಂದರೆ ಕೊಡಬೇಡಿ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, “ ಅಂಜುಮನ್ ಸಂಸ್ಥೆಯ ಮುಖಂಡರೊಂದಿಗೆ ತೆರಳಿ ಪೋಲಿಸರಿಗೆ ಈ ಕುರಿತು ಮನವಿ ಕೊಡಿ ಎಂದು ನಮ್ಮ ಪಕ್ಷದ ಮುಖಂಡರಿಗೆ ಸೂಚಿಸಿದ್ದೇನೆ.

ತಪ್ಪಿಸ್ಥರಿಗೆ ಶಿಕ್ಷೆಯಾಗಲಿ ಆದರೆ ಅಮಾಯಕರಿಗೆ ತೊಂದರೆಯಾಗದಿರಲಿ ಎನ್ನುವುದು ನನ್ನ ಮನವಿ” “ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಅನೇಕ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯಗಳ ಜನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಈ ನೆಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯುಳ್ಳದ್ದು. ಹೀಗಾಗಿ ಇಲ್ಲಿ ಕೋಮುದಳ್ಳುರಿಯನ್ನು ಹರಡುವುದು ಬೇಡ” ಎಂದಿದ್ದಾರೆ.

Exit mobile version